Home » ದರ್ಶನ್‌ ಬಿಡುಗಡೆ ಮಾಡಿಸಿ ಎಂದ ಫ್ಯಾನ್ಸ್‌ – ಪೊಲೀಸರ ಲಾಠಿಯೇಟು ಬೀಳುತ್ತೆ ಹುಷಾರ್ ಎಂದ ಸಿಎಂ ಡಿಕೆಶಿ!!

ದರ್ಶನ್‌ ಬಿಡುಗಡೆ ಮಾಡಿಸಿ ಎಂದ ಫ್ಯಾನ್ಸ್‌ – ಪೊಲೀಸರ ಲಾಠಿಯೇಟು ಬೀಳುತ್ತೆ ಹುಷಾರ್ ಎಂದ ಸಿಎಂ ಡಿಕೆಶಿ!!

0 comments

ಸಿಎಂ ಆದ ಬಳಿಕ ಕನಕಪುರದಲ್ಲಿ ಕೃತಜ್ಞತಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ವೇಳೆ ಸಿಎಂ ಡಿಕೆ ಶಿವಕುಮಾರ್‌ ಮಾತನಾಡುತ್ತಿದ್ದ ವೇಳೆ , ನಟ ದರ್ಶನ್‌ ಅಭಿಮಾನಿಗಳು ಡಿಬಾಸ್‌ ಬಿಡುಗಡೆಯಾಗಬೇಕು ಎಂದು ಘೋಷಣೆ ಕೂಗಿದ್ದಾರೆ. ಇದಕ್ಕೆ ಡಿಕೆಶಿ ಏನಂದಿದ್ದಾರೆ ಗೊತ್ತಾ?

ಸಿಎಂ ಡಿಕೆಶಿ ಅವರು ಕನಕಪುರಕ್ಕೆ ಬಂದಾಗ ದರ್ಶನ್ ಅಭಿಮಾನಿಗಳು ಜೈಕಾರ ಹಾಕಿ, ಬೇಡಿಕೆಯನ್ನು ಇಟ್ಟಿದ್ದಾರೆ. ಆಗ ಮೊದಲು ಬೇಡಿಕೆಯನ್ನು ನಿರ್ಲಕ್ಷಿಸಿದ ಸಿಎಂ ಡಿಕೆಶಿ , ಬಳಿಕ ಅವರ ಕೂಗನ್ನು ಆಲಿಸಿದ್ದಾರೆ. ಆಗ ಮತ್ತೆ ಅಭಿಮಾನಿಗಳು ಡಿಬಾಸ್‌ ಡಿಬಾಸ್‌ ಎಂದು ಕಿರುಚಲಾರಂಭಿಸಿದ್ದರಿಂದ ಯಾವ ಡೀಬಾಸೂ ಇಲ್ಲ‌, ಗೀಬಾಸೂ ಇಲ್ಲ ಸುಮ್ಮನಿರ್ರೋ ಎಂದು ಕಿಡಿಕಾರಿದರು.

ಆದರೆ ಅಭಿಮಾನಿಗಳು ಅಷ್ಟಕ್ಕೇ ಸುಮ್ಮನಾಗದೇ ಡಿಬಾಸ್‌ ಡಿಬಾಸ್‌ ಎಂದು ಜೈಕಾರ ಹಾಕಲಾರಂಭಿಸಿದ ಘಟನೆ ನಡೆದಿದೆ. ಈ ವೇಳೆ ಅಸಮಾಧಾನಗೊಂಡ ಡಿಕೆಶಿ, ಜಾಸ್ತಿ ಗಲಾಟೆ ಮಾಡಿದ್ರೆ ಪೊಲೀಸರ ಲಾಠಿಯೇಟು ಬೀಳುತ್ತೆ ಎಂದು ವಾರ್ನಿಂಗ್‌ ನೀಡಿ ವೇದಿಕೆಯಿಂದ ಕೆಳಗಿಳಿದು ಹೋಗಿರುವ ಘಟನೆ ನಡೆದಿದೆ.

You may also like