Home » ಕೋವಿಡ್‌ ಲಾಕ್‌ಡೌನ್‌ ಉಲ್ಲಂಘನೆ: ಎಕ್ಸ್‌ಪರ್ಟ್‌ ಶಿಕ್ಷಣ ಸಂಸ್ಥೆ, ಚೇರ್ಮನ್‌ ನರೇಂದ್ರ ನಾಯಕ್‌ಗೆ ಶಿಕ್ಷೆ

ಕೋವಿಡ್‌ ಲಾಕ್‌ಡೌನ್‌ ಉಲ್ಲಂಘನೆ: ಎಕ್ಸ್‌ಪರ್ಟ್‌ ಶಿಕ್ಷಣ ಸಂಸ್ಥೆ, ಚೇರ್ಮನ್‌ ನರೇಂದ್ರ ನಾಯಕ್‌ಗೆ ಶಿಕ್ಷೆ

0 comments

ಮಂಗಳೂರು: 2021 ರಲ್ಲಿ ಕೋವಿಡ್‌ ಸಾಂಕ್ರಾಮಿಕ ಸೋಂಕಿನ ಹಿನ್ನೆಲೆಯಲ್ಲಿ ಲಾಕ್ಡೌನ್‌ ಮಾಡುವಂತೆ ಸರಕಾರ ಮಾಡಿದ ಆದೇಶವನ್ನು ಉಲ್ಲಂಘನೆ ಮಾಡಿದ ಎಕ್ಸ್‌ಪರ್ಟ್‌ ಕಾಲೇಜುಗಳ ಸಮೂಹದ ಅಧ್ಯಕ್ಷ ನರೇಂದ್ರ ನಾಯಕ್‌ಗೆ ಮಂಗಳೂರಿನ ಕೋರ್ಟ್‌ ದಂಡ ವಿಧಿಸಿದೆ.

ತನ್ನ ಹಾಸ್ಟೆಲಿನಲ್ಲಿ ವಿದ್ಯಾರ್ಥಿಗಳನ್ನು ಕೂಡಿಹಾಕಿ ತರಗತಿ ಮಾಡಿದ್ದಲ್ಲದೆ, ಅಲ್ಲಿಗೆ ಬಂದ ಪೋಷಕರನ್ನು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗುಂಪು ಸೇರಲು ಅವಕಾಶ ನೀಡಿದ್ದಕ್ಕೆ ಮಂಗಳೂರಿನ ಪ್ರಥಮ ದರ್ಜೆ ನ್ಯಾಯಾಲಯ ಈ ಆದೇಶ ನೀಡಿದೆ.

2021 ರಲ್ಲಿ ಜಿಲ್ಲಾಧಿಕಾರಿ ಕೋವಿಡ್‌ ಲಾಕ್ಡೌನ್‌ ಪ್ರಕಾರ, ಜಿಲ್ಲಾದ್ಯಂತ ಎಲ್ಲಾ ಕಾಲೇಜು, ಶಾಲೆಗಳ ಸ್ಥಗಿತಕ್ಕೆ ಸೂಚನೆ ನೀಡಿದ್ದು ಆನ್ಲೈನ್‌ ಕ್ಲಾಸ್‌ ಮಾಡುವಂತೆ ಆದೇಶ ಮಾಡಿದ್ದರೂ, ವಳಚ್ಚಿಲ್‌ನಲ್ಲಿರುವ ಎಕ್ಸ್‌ಪರ್ಟ್‌ ಸಮೂಹ ಸಂಸ್ಥೆ ಅದನ್ನು ಉಲ್ಲಂಘನೆ ಮಾಡಿ ವಿದ್ಯಾರ್ಥಿಗಳನ್ನು ಹಾಸ್ಟೆಲಿನಲ್ಲಿಯೇ ಉಳಿಸಲಾಗಿತ್ತು. ಇದರಿಂದ ಆತಂಕಗೊಂಡ ವಿದ್ಯಾರ್ಥಿಗಳ ಪೋಷಕರು ದೂರದ ಊರುಗಳಿಂದ ವಳಚ್ಚಿಲ್‌ ಕಾಲೇಜು ಕ್ಯಾಂಪಸಿಗೆ ಬಂದಿದ್ದರು.

2021ರ ಜುಲೈ 29 ರಂದು 30 ಕ್ಕೂ ಹೆಚ್ಚು ಪೋಷಕರು ಕಾಲೇಜು ಕ್ಯಾಂಪಸ್‌ ಆವರಣಕ್ಕೆ ಬಂದಿದ್ದರೂ, ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನದವರೆಗೂ ಅವರನ್ನು ಗೇಟ್‌ ಒಳಗೆ ಬಿಡದೆ ಹೊರಗಡೆ ಗುಂಪು ಸೇರಲು ಅವಕಾಶ ಮಾಡಲಾಗಿತ್ತು. ಇದರ ಬಗ್ಗೆ ಕಂಕನಾಡಿ ಗ್ರಾಮಾಂತರ ಠಾಣೆಗೆ ಮಾಹಿತಿ ತಿಳಿದು ಕಾಲೇಜು ವಿರುದ್ಧ ಪ್ರಕರಣ ದಾಖಲಿಸಿದ್ದರು.

banner

ಅನಂತರದ ವಿಚಾರಣೆಯಲ್ಲಿ ಆರೋಪಿತ ನರೇಂದ್ರ ನಾಯಕ್‌ ಮೇಲಿನ ಅಪರಾಧ ಸಾಬೀತಾಗಿದ್ದರಿಂದ ಆರು ಸಾವಿರ ರೂ. ದಂಡ, ತಪ್ಪಿದ್ದಲ್ಲಿ ಏಳು ದಿನಗಳ ಸಜೆ ವಿಧಿಸಲಾಗಿದೆ. ಪೊಲೀಸರು ಸ್ಥಳದ ಫೊಟೋ ಮತ್ತು ವಿಡಿಯೋ ಸಾಕ್ಷ್ಯಗಳನ್ನು ಕೋರ್ಟಿಗೆ ಹಾಜರು ಪಡಿಸಿದ್ದರಿಂದ ಅಪರಾಧ ಸಾಬೀತಾಗಿತ್ತು.

ವಿದ್ಯಾರ್ಥಿಗಳನ್ನು ಕಳಿಸದೆ ಲಾಕ್ಡೌನ್‌ ಆದೇಶ ಉಲ್ಲಂಘನೆ ಮಾಡಿದ್ದಕ್ಕೆ ಪ್ರತ್ಯೇಕ ಒಂದು ಸಾವಿರ ರೂ. ದಂಡ ಮತ್ತು ಅದನ್ನು ತೆರಳು ತಪ್ಪಿದ್ದಲ್ಲಿ ಎರಡು ದಿನಗಳ ಸಾದಾ ಶಿಕ್ಷೆಯನ್ನು ವಿಧಿಸಲಾಗಿದೆ. ಶಿಕ್ಷೆ ವಿಧಿಸಿರುವ ಕುರಿತು ನ್ಯಾಯಾಧೀಶರು ಮೇ.26 ರಂದು 67 ಪುಟಗಳ ವರದಿಯೊಂದಿಗೆ ಆದೇಶ ಮಾಡಿದ್ದಾರೆ.

You may also like