ಬಂದಾರು :ಶ್ರೀ ಕ್ಷೇತ್ರ ಕುರಾಯ ಸದಾಶಿವ ದೇವಸ್ಥಾನ ಬಂದಾರು ಇದರ ಏಪ್ರಿಲ್ 02 ರಿಂದ 10 ವರೆಗೆ ನಡೆಯುತ್ತಿರುವ ಪ್ರತಿಷ್ಠಾ ಮಹೋತ್ಸವ ಹಾಗೂ ಜಾತ್ರೋತ್ಸವದ ಪ್ರಯುಕ್ತ
ಶ್ರೀಮತಿ ಮೇಘನ ಪ್ರಶಾಂತ್ ಹೊಳ್ಳ ಬೈಪಾಡಿ ಇವರ ಸಾಹಿತ್ಯ, ಮಾ.ಸರ್ವಾರ್ಥ ಜೈನ್,ಶ್ರೀಮತಿ ಅಶ್ವಿಜಾ ಶ್ರೀಧರ್ ಭಟ್ ಇವರ ಧ್ವನಿಯಲ್ಲಿ,ಮಾಸ್ಟರ್ ರೆಕಾರ್ಡಿಂಗ್ ಗುರುವಾಯನಕೆರೆ ಇವರ ರೆಕಾರ್ಡಿoಗ್ ನಲ್ಲಿ ಮೂಡಿಬಂದಿರುವ ಕುರಾಯದೊಡೆಯ ಭಕ್ತಿಗೀತೆಯ ಧ್ವನಿ ಸುರುಳಿಯು ಶ್ರೀ ಕ್ಷೇತ್ರ ಕುರಾಯದಲ್ಲಿ ಏಪ್ರಿಲ್ 4 ರಂದು ನೀಲೇಶ್ವರ ಆಲಂಬಾಡಿ ವೈಷ್ಣವ್ ತoತ್ರಿಗಳು ಅಮೃತ ಹಸ್ತದಿಂದ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾಧಿಕಾರಿಗಳು, ಜಾತ್ರೋತ್ಸವ ಸಮಿತಿ , ಅಭಿವೃದ್ಧಿ ಸಮಿತಿ, ಯಕ್ಷಗಾನ ಸಮಿತಿ, ಪದಾಧಿಕಾರಿಗಳು,ಅರ್ಚಕರು, ಪ್ರಮುಖರು, ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

