Home » Bengaluru : ಬೆಂಗಳೂರು ಕರಗ- ದ್ರೌಪದಿ ದೇವಿ ಬಳಿ LPG ಸಮಸ್ಯೆ ಪರಿಹರಿಸುವಂತೆ ಮಹಿಳೆಯರ ಪ್ರಾರ್ಥನೆ

Bengaluru : ಬೆಂಗಳೂರು ಕರಗ- ದ್ರೌಪದಿ ದೇವಿ ಬಳಿ LPG ಸಮಸ್ಯೆ ಪರಿಹರಿಸುವಂತೆ ಮಹಿಳೆಯರ ಪ್ರಾರ್ಥನೆ

0 comments

Bengaluru : ಇರಾನ್ ಹಾಗೂ ಸುತ್ತಮುತ್ತಲ ದೇಶಗಳಲ್ಲಿ ಕವಿದಿರುವ ಯುದ್ಧದ ವಾತಾವರಣದಿಂದಾಗಿ ಅನೇಕ ರಾಷ್ಟ್ರಗಳಲ್ಲಿ ಅಗತ್ಯ ವಸ್ತುಗಳ ಪೂರೈಕೆಯ ಕೊರತೆ ಉಂಟಾಗಿದೆ. ಭಾರತದಲ್ಲಿ ಎಲ್‌ಪಿಜಿ ಸಮಸ್ಯೆ ಅತೀವವಾಗಿ ಕಾಡುತ್ತಿದೆ. ಇದೀಗ ಈ ಎಲ್‍ಪಿಜಿ ಸಮಸ್ಯೆಯನ್ನು ಪರಿಹರಿಸಿಕೊಳ್ಳುವಂತೆ ಬೆಂಗಳೂರಿನ ಮಹಿಳೆಯರು ಇತಿಹಾಸ ಪ್ರಸಿದ್ಧ ಕರಗದಲ್ಲಿ ದ್ರೌಪದಿ ದೇವಿ ಬಳಿ ಪ್ರಾರ್ಥನೆ ಮಾಡಿಕೊಂಡಿದ್ದಾರೆ.

ನಿನ್ನೆ ಬೆಂಗಳೂರು ಹೂವಿನ ಕರಗ ಹಿನ್ನೆಲೆ ಹೂವಿನ ಕರಗಕ್ಕೂ ಮುನ್ನ ಕರ್ಪೂರ ಸೇವೆ ಸಲ್ಲಿಸಲಾಗಿದೆ. ಕರಗದ ಪೂಜಾರಿ ಜ್ಞಾನೇಂದ್ರರಿಂದ ಕರ್ಪೂರ ಪೂಜೆ ನೆರವೇರಿಸಿದ್ದಾರೆ. ಈ ವೇಳೆ ಕರಗದಲ್ಲಿಯೂ ಎಲ್​ಪಿಜಿ ಸಿಲಿಂಡರ್ ಸಮಸ್ಯೆ ಗಮನ ಸೆಳೆದಿದ್ದು, ಅಲ್ಲಿನ ಮಹಿಳೆಯರು ಕರ್ಪೂರದಿಂದ ಎಲ್​ಪಿಜಿ ಸಿಲಿಂಡರ್ ಚಿತ್ರ ಬರೆದು ಬೆಂಕಿ ಹಚ್ಚಿ  ಗ್ಯಾಸ್ ಸಮಸ್ಯೆ ಬಗೆಹರಿಸುವಂತೆ ದ್ರೌಪದಮ್ಮನ ಮಹಿಳೆಯರು ಬೇಡಿಕೊಂಡಿದ್ದಾರೆ. 

ಇನ್ನು ಇದೇ ವೇಳೆ ಆರ್​ಸಿಬಿ ಅಭಿಮಾನಿಗಳು ಈ ಬಾರಿಯೂ ಕೂಡ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಕಪ್ ಗೆಲ್ಲಲಿ ಎಂದು ಕರ್ಪೂರ ಸೇವೆ ಸಲ್ಲಿಸಿದ್ದಾರೆ.

You may also like