Home » ಗ್ಯಾಸ್‌ ಪಂಪ್‌ನಲ್ಲಿ ಹಲ್ಲೆ: ಸೊತ್ತುಗಳಿಗೆ ಹಾನಿ, ಪ್ರಕರಣ ದಾಖಲು

ಗ್ಯಾಸ್‌ ಪಂಪ್‌ನಲ್ಲಿ ಹಲ್ಲೆ: ಸೊತ್ತುಗಳಿಗೆ ಹಾನಿ, ಪ್ರಕರಣ ದಾಖಲು

0 comments
Crime

ಬಂಟ್ವಾಳ: ಪಾಣೆಮಂಗಳೂರು ಗ್ರಾಮದ ಮೆಲ್ಕಾರ್‌ ಬೊಗೋಡಿ ಪ್ರದೇಶದಲ್ಲಿರುವ ಗ್ಯಾಸ್‌ ಪಂಪ್‌ ಏಜೆನ್ಸಿಯಲ್ಲಿ ಹಲ್ಲೆ ಹಾಗೂ ಸೊತ್ತುಗಳಿಗೆ ಹಾನಿ ಮಾಡಿದ ಘಟನೆ ಶುಕ್ರವಾರ ಸಂಜೆ ನಡೆದಿರುವುದಾಗಿ ವರದಿಯಾಗಿದೆ.

ಬಂಟ್ವಾಳ ನಗರ ಠಾಣೆಗೆ ಈ ಘಟನೆ ಸಂಬಂಧ ಗ್ಯಾಸ್‌ ಪಂಪ್‌ ಮ್ಯಾನೇಜರ್‌ ಕುನಲ್‌ ಭುಹ್ನಿಯಾ (27) ದೂರನ್ನು ನೀಡಿದ್ದಾರೆ. ದೂರಿನನ್ವಯ ಮಾರ್ಚ್‌ 20 ರ ಸಂಜೆ ಕೆಎ 19 ಎಸಿ 2102 ಸಂಖ್ಯೆಯ ಆಟೋರಿಕ್ಷಾವನ್ನು ಅದರ ಚಾಲಕನು ಪಂಪ್‌ ಒಳಗೆ ಚಲಾಯಿಸಿಕೊಂಡು ಬಂದು, ಕಚೇರಿ ಸಿಬ್ಬಂದಿ ಅಶ್ವಿನ್‌ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿನಿ ಹಲ್ಲೆ ಮಾಡಿದ್ದಾರೆ.

ಇದಾದ ನಂತರ ಆರೋಪಿ ಹೊರಬಂದು ಗ್ಯಾಸ್‌ ಪಂಪ್‌ನ ಸೊತ್ತುಗಳಿಗೆ ಹಾನಿ ಮಾಡಿದ್ದು, ಸುಮಾರು ರೂ.48,000 ಮೌಲ್ಯದ ನಷ್ಟ ಉಂಟಾಗಿರುವುದಾಗಿ ದೂರಿನಲ್ಲಿ ಉಲ್ಲೇಖ ಮಾಡಿರುವುದಾಗಿ ವರದಿಯಾಗಿದೆ.

ಈ ಕುರಿತು ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

banner

You may also like