ನಾಳೆ ಮುಸ್ಲಿಮರಿಗೆ ಬಕ್ರೀದ್ ಹಬ್ಬದ ಸಂಭ್ರಮ. ಬಕ್ರೀದ್ ಸಮಯದಲ್ಲಿ ಕುರಿ ಮಾಂಸದ ಅಡುಗೆಗಳನ್ನು ಮಾಡುವುದು ಈ ಸಮುದಾಯದ ಸಂಪ್ರದಾಯ. ಕೆಲವು ಕಡೆ ಗೋವುಗಳನ್ನು ಕೂಡ ವಧೆ ಮಾಡುವುದುಂಟು. ಆದರೆ ಗೋವುಗಳನ್ನು ನಾವು ಬಕ್ರೀದ್ ಸಮಯದಲ್ಲಿ ತಿನ್ನುವುದಿಲ್ಲ ಎಂದು ಹಲವು ಮುಸ್ಲಿಂ ಸಂಘಟನೆಗಳು ಘೋಷಿಸಿದ್ದಾರೆ. ಆದರೆ, ಇದೇ ವೇಳೆ ವಿಡಿಯೋ ಒಂದು ವೈರಲ್ ಆಗಿದ್ದು, ಜನ ವಸತಿ ಪ್ರದೇಶ ಒಂದರಲ್ಲಿ ಕುರಿಗಳನ್ನು ಮಾರಲು ಮುಸ್ಲಿಮರು ಮುಂದಾದಾಗ, ಅವರ ಎದುರು ಹಿಂದೂ ಸಂಘಟನೆಯ ಕಾರ್ಯಕರ್ತನೊಬ್ಬ ಹಂದಿಯನ್ನು ತಂದು ಹಲ್ಚಲ್ ಸೃಷ್ಟಿಸಿದ್ದಾನೆ. ಅದರ ವಿಡಿಯೋ ವೈರಲ್ ಆಗಿದೆ.


ಮಹಾರಾಷ್ಟ್ರದ(Maharashtra) ಠಾಣೆ ಜಿಲ್ಲೆಯ ಮೀರಾ ರೋಡ್ನಲ್ಲಿರುವ ‘ಪೂನಂ ಕ್ಲಸ್ಟರ್’ ವಸತಿ ಸಂಕೀರ್ಣದಲ್ಲಿ ಬಕ್ರೀದ್(Bakrid) ಕಾರಣದಿಂದ ಕಳೆದ ಎರಡು ದಿನಗಳಿಂದ ಕೋಮು ವಿವಾದ ನಡೆಯುತ್ತಿದೆ. ಇಲ್ಲಿ ಇರುವ ಮುಸ್ಲಿಮರು ಬಕ್ರೀದ್ ಹಬ್ಬಕ್ಕೆ ಕಡಿಯಲು ಕುರಿಗಳನ್ನು ತಂದ ಕಾರಣ ಇದನ್ನು ವಿರೋಧಿಸಿ ಹಿಂದೂ ಕಾರ್ಯಕರ್ತರು ಹಂದಿಯನ್ನು ತಂದು ಮುಸ್ಲಿಮರಿಗೆ ವ್ಯಂಗ್ಯವಾಡಿದ್ದಾರೆ. ಸದ್ಯ ಇದು ಕೋಲಹಲಕ್ಕೆ ಕಾರಣವಾಗಿದೆ.
ಇಸ್ಲಾಂ ಧರ್ಮದಲ್ಲಿ ಹಂದಿ ಮಾಂಸದ ಸೇವನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ (ಹರಾಮ್). ಕುರಾನ್ನಲ್ಲಿ ಇದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದ್ದು, ಹಂದಿಯನ್ನು ಸಹಜವಾಗಿ ಅಶುದ್ಧ ಪ್ರಾಣಿ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಮುಸ್ಲಿಮರು ಯಾವುದೇ ರೀತಿಯ ಹಂದಿ ಮಾಂಸ ಅಥವಾ ಅದರಿಂದ ತಯಾರಿಸಿದ ಉತ್ಪನ್ನಗಳನ್ನು ಸೇವಿಸುವುದಿಲ್ಲ. ಆದರೆ ಇಲ್ಲೊಬ್ಬ ಕಾರ್ಯಕರ್ತ ಹಂದಿ ತಂದು ಗಲಾಟೆ ಸೃಷ್ಟಿಸಿದ್ದಾನೆ. ಬಳಿಕ ಪೊಲೀಸರು ಎಂಟ್ರಿ ಕೊಟ್ಟು ಗಲಾಟೆ ನಡೆಯದಂತೆ ಹಂದಿ ಹಿಡಿದು ಓಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು.
ಅಂದಹಾಗೆ ಅಪಾರ್ಟ್ಮೆಂಟ್ ಆವರಣದಿಂದ ಒಮ್ಮೆ ತೆರವುಗೊಳಿಸಲಾಗಿದ್ದ ಮೇಕೆಗಳನ್ನು ಮುಸ್ಲಿಂ ಸಮುದಾಯದವರು ಮತ್ತೆ ಸದ್ದಿಲ್ಲದೆ ವಾಪಸ್ ತಂದಿದ್ದಾರೆ ಎಂಬ ಆರೋಪ ಕೇಳಿಬಂದ ತಕ್ಷಣ, ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳದ ನಾಯಕರು ಹಾಗೂ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಭಾರಿ ಪ್ರತಿಭಟನೆ ಆರಂಭಿಸಿದರು. ಈ ಪ್ರತಿಭಟನೆಯ ನಡುವೆ ತೀವ್ರ ವಾಗ್ವಾದ ನಡೆದು, ಮುಸ್ಲಿಂ ಸಮುದಾಯದ ಕೆಲವು ದುಷ್ಕರ್ಮಿಗಳು ವಿಎಚ್ಪಿಯ ಪ್ರಮುಖ ಪದಾಧಿಕಾರಿಯೊಬ್ಬರು ಹಾಗೂ ಇತರ ಇಬ್ಬರು ಕಾರ್ಯಕರ್ತರ ಮೇಲೆ ಬ್ಲೇಡ್ನಿಂದ ಭೀಕರವಾಗಿ ದಾಳಿ ನಡೆಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.

