Home » ಗಿರೀಶ್‌ ಮಟ್ಟಣ್ಣನವರ್‌ ವಿರುದ್ಧ ಸ್ನೇಹಮಯಿ ಕೃಷ್ಣ ಕಿಡಿ

ಗಿರೀಶ್‌ ಮಟ್ಟಣ್ಣನವರ್‌ ವಿರುದ್ಧ ಸ್ನೇಹಮಯಿ ಕೃಷ್ಣ ಕಿಡಿ

0 comments

ಮೈಸೂರು: ಶಾಲಿಜಿ ರಜನೀಶ್‌ ಮೇಲೆ ಲಂಚದ ಆರೋಪ ಮಾಡಿದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೋಸ್ಟ್‌ ಈ ಚರ್ಚೆಗೆ ಕಾರಣವಾಗಿದೆ. ಸೌಜನ್ಯ ಪರ ಹೋರಾಟಗಾರ ಗಿರೀಶ್‌ ಮಟ್ಟಣ್ಣನವರ್‌ ವಿರುದ್ಧ ಕಿಡಿಕಾರಿರುವ ಕೃಷ್ಣ, ನಾನು ಯಾವಾಗಲೂ ದಾಖಲೆಗಳ ಆಧಾರದಲ್ಲೇ ವಿಷಯಗಳನ್ನು ಬಹಿರಂಗ ಪಡಿಸುವೆ, ಆದ್ದರಿಂದಲೇ ಹಲವು ಪ್ರಕರಣಗಳಲ್ಲಿ ಇಷ್ಟೆಲ್ಲ ಕ್ರಮ ಕೈಗೊಂಡಿರುವುದು ಎಂದು ಹೇಳಿದ್ದಾರೆ.

ಈ ಹಂತದಲ್ಲಿ ಶ್ರೀಮತಿ ಶಾಲಿನಿ ರಜನೀಶ್ ರವರ ಹೆಸರು ಉಲ್ಲೇಖ ಮಾಡಿದ್ದರ ಬಗ್ಗೆ ನಾನು ಕ್ಷಮೆ ಕೇಳಿದನ್ನೇ ಆಧಾರವಾಗಿಟ್ಟುಕೊಂಡು, ನಾನು ಯಾವಾಗಲೂ, ಯಾವುದೇ ಆಧಾರವಿಲ್ಲದೆ ಸುಳ್ಳು ಆರೋಪ ಮಾಡುತ್ತೇನೆ ಎಂದು ಮಾತನಾಡಲಾಗು ತ್ತಿದೆ. ಅದರಲ್ಲೂ ಸೌಜನ್ಯ ಪರ ಹೋರಾಟಗಾರ ಎಂದು ಹೇಳುವ ಗಿರೀಶ್ ಮಟ್ಟಣ್ಣವರ ಈ ಬಗ್ಗೆ ಒಂದು ವೀಡಿಯೋವನ್ನೇ ಬಿಡುಗಡೆ ಮಾಡಿದ್ದಾರೆ ! ನಾನು ಯಾವುದೇ ದಾಖಲೆಗಳ ಆಧಾರವಿಲ್ಲದೆ ಸುಳ್ಳು ಆರೋಪಗಳನ್ನು ಮಾಡಿದ್ದರೆ, ನಾನು ಮೊಕದ್ದಮೆ ದಾಖಲು ಮಾಡುತ್ತಿದ್ದಂತೆ, ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ತಮ್ಮ ಕುಟುಂಬದ ಹೆಸರಿನಲ್ಲಿ ಪಡೆದಿದ್ದ, 60 ಕೋಟಿ ಮೌಲ್ಯದ 14 ನಿವೇಶನಗಳನ್ನು ಏಕೆ ವಾಪಾಸ್ಸು ಮಾಡುತ್ತಿದ್ದರು ? ಜಾರಿ ನಿರ್ದೇಶನಾ ಲಯದವರು ಇದುವರೆವಿಗೂ 460 ಕೋಟಿ ಮೌಲ್ಯದ ಸ್ವತ್ತುಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದರು ? ಮುಡಾದ ಹಿಂದಿನ ಆಯುಕ್ತರಾದ ಜಿ.ಟಿ.ದಿನೇಶ್ ಕುಮಾರ್ ರವರನ್ನು ಸುಮಾರು 70 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿ ಇಡುತ್ತಿದ್ದರು ? ನಾನು ದೂರು ದಾಖಲು ಮಾಡಿದ್ದ ಕೇವಲ ಒಂದುವರೆ ವರ್ಷದಲ್ಲಿ ಇಷ್ಟೆಲ್ಲಾ ಕೆಲಸ ಆಗುವಂತೆ ಮಾಡಿದ್ದೇನೆ, ಗಿರೀಶ್ ಮಟ್ಟಣ್ಣವರ್ ರೀತಿಯಲ್ಲಿ ಹದಿಮೂರು ವರ್ಷಗಳಷ್ಟು ಸುದೀರ್ಘ ಸಮಯದಿಂದ, ಸೌಜನ್ಯಳ ಸಾವಿಗೆ ನ್ಯಾಯ ಕೊಡಿಸುವುದಾಗಿ ಹೇಳುವಂತೆ, ನಾನು ಬರೀ ಹೇಳಿಕೆ ಕೊಡುತ್ತಿಲ್ಲ ! ಸೌಜನ್ಯ ಪ್ರಕರಣದ ತನಿಖೆಗೆ ಆದೇಶ ಮಾಡಿಸಲಿ, ಸೌಜನ್ಯ ಸಾವಿಗೆ ಯಾರು ಕಾರಣ ಎಂಬುದನ್ನು ಖಚಿತ ಪಡಿಸುತ್ತೇನೆ… ಎಂದು ಬರೆದಿದ್ದಾರೆ.

You may also like