Home » ಬೆಳ್ತಂಗಡಿ: ಪಟ್ಟಣ ಪಂಚಾಯತ್‌ ನೀರಿನ ನೌಕರನ ಮೇಲೆ ಹೆಜ್ಜೇನು ದಾಳಿ

ಬೆಳ್ತಂಗಡಿ: ಪಟ್ಟಣ ಪಂಚಾಯತ್‌ ನೀರಿನ ನೌಕರನ ಮೇಲೆ ಹೆಜ್ಜೇನು ದಾಳಿ

ರಕ್ಷಣೆಗೆ ಧಾವಿಸಿದ ಇಸ್ಮಾಯಿಲ್‌ ಸಂಜಯನಗರ

0 comments

Hindu neighbor gifts plot of land

Hindu neighbour gifts land to Muslim journalist

ಬೆಳ್ತಂಗಡಿ: ಪಂಚಾಯತ್‌ ನೀರಿನ ಟ್ಯಾಂಕ್‌ ಮೀಟರ್‌ ಸರಿಪಡಿಸುವ ವೇಳೆ ಪಟ್ಟಣ ಪಂಚಾಯತ್‌ ನೀರಿನ ನೌಕರ ರೋನಾಲ್ಡ್‌ ಸಂಜಯನಗರ ಮೇಲೆ ಹೆಜ್ಜೇನು ದಾಳಿಯಾಗಿರುವ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಮುಳುಗು ತಜ್ಞ ಇಸ್ಮಾಯಿಲ್‌ ಸಂಜಯನಗರ ಇವರು ರಕ್ಷಣೆಗೆ ತಕ್ಷಣವೇ ಬಂದಿದ್ದು, ಹೆಜ್ಜೇನನ್ನು ಓಡಿಸಿ ನೌಕರರನ್ನು ನೀರಿನ ಟ್ಯಾಂಕಿನಿಂದ ಕೆಳಗಿಳಿಸಿ ಜೀವ ಉಳಿಸಿರುವ ಮಹತ್ಕಾರ್ಯ ಮಾಡಿದ್ದಾರೆ. ಈ ಘಟನೆ ಬೆಳ್ತಂಗಡಿ ಕೋರ್ಟ್‌ ಆವರಣದಲ್ಲಿ ನಡೆದಿದೆ.

ಕೂಡಲೇ ಗಂಭೀರ ಗಾಯಗೊಂಡಿದ್ದ ರೊನಾಲ್ಡ್‌ ಅವರನ್ನು ಹೆಚ್ಚಿನ ಚಿಕಿತ್ಸೆಗೆಂದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ರಕ್ಷಣಾ ಮಹತ್ಕಾರ್ಯದಲ್ಲಿ ಬೆಳ್ತಂಗಡಿ ಸಂಜಯನಗರ ನಿವಾಸಿಗಳಾಗಿರುವ ಅಕ್ಬರ್‌ ಬೆಳ್ತಂಗಡಿ, ರಶೀದ್‌ ಬೆಳ್ತಂಗಡಿ, ಬದ್ರು ಮಟ್ಲ, ಶಫೀರ್‌ ಸಂಜಯನಗರ, ಇರ್ಫಾನ್‌ ಬೆಳ್ತಂಗಡಿ, ಶರೀಫ್‌ ಸಂಜಯನಗರ ಮತ್ತು ಪಟ್ಟಣ ಪಂಚಾಯತ್‌ ನೌಕರರಾದ ಫ್ರಾನ್ಸಿಸ್‌ ಬೆಳ್ತಂಗಡಿ ಇದ್ದರು.

You may also like