HomeCrimeಬಂಟ್ವಾಳ: ಪಾರ್ಕಿಂಗ್‌ ವಿಚಾರಕ್ಕೆ ಗಲಾಟೆ; ಹೋಟೆಲ್‌ ಮ್ಯಾನೇಜರ್‌ ಮೇಲೆ ಹಲ್ಲೆ-ದೂರು ದಾಖಲು

ಬಂಟ್ವಾಳ: ಪಾರ್ಕಿಂಗ್‌ ವಿಚಾರಕ್ಕೆ ಗಲಾಟೆ; ಹೋಟೆಲ್‌ ಮ್ಯಾನೇಜರ್‌ ಮೇಲೆ ಹಲ್ಲೆ-ದೂರು ದಾಖಲು

Hindu neighbor gifts plot of land

Hindu neighbour gifts land to Muslim journalist

ಬಂಟ್ವಾಳ: ಕಾರು ಪಾರ್ಕಿಂಗ್‌ ಮಾಡುವ ವಿಷಯಕ್ಕೆ ನಡೆದ ಸಣ್ಣ ಮಾತಿನ ಚಕಮಕಿ ವಿಕೋಪಕ್ಕೆ ಹೋಗಿ, ಹೋಟೆಲ್‌ ಮ್ಯಾನೇಜರ್‌ ಒಬ್ಬರ ಮೇಲೆ ಹಲ್ಲೆ ನಡೆದ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಈ ಕುರಿತು ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಂಟ್ವಾಳ ಕೆಳಗಿನ ಪೇಟೆಯ ನಿವಾಸಿ ಶಬೀಬ್‌ ರಹಮಾನ್‌ ಅವರು ಮಿತ್ತಬೈಲ್‌ನಲ್ಲಿರುವ ʼಫಿಶ್‌ ಮಾಸ್ಟರ್‌ʼ ಹೋಟೆಲ್‌ನ ವ್ಯವಸ್ಥಾಪಕರು. ಫೆ.16 ರ ಮಧ್ಯಾಹ್ನ ಸರಿ ಸುಮಾರು 1.20 ರ ಸಮಯಕ್ಕೆ ಹೋಟೆಲ್‌ಗೆ ಬಂದ ಸಮಯದಲ್ಲಿ ಅಲ್ಲಿ ಕಾರು ಪಾರ್ಕ್‌ ಮಾಡಿದ್ದ ಪುತ್ತೂರು ಕೂರ್ನಡ್ಕದ ಹಕೀಂ ಎನ್ನುವವರಿಗೆ ತಮ್ಮ ಕಾರನ್ನು ಸ್ವಲ್ಪ ಬದಿಗೆ ನಿಲ್ಲಿಸಲು ವಿನಂತಿಸಿದ್ದರು.

ಶಬೀಬ್‌ ಅವರ ಮಾತಿನಿಂದ ಸಿಟ್ಟುಗೊಂಡ ಹಕೀಂ, ʼನನ್ನ ಕಾರಿನಲ್ಲಿ ಚೆಕ್‌ಬುಕ್‌ ಮತ್ತು ಮುಖ್ಯ ದಾಖಲೆಗಳಿದೆ. ನೀನು ಅದನ್ನು ಕದಿಯಲು ಬಂದಿದ್ದೀಯಾ?ʼ ನೀನು ಕುಡಿದು ಬಂದಿದ್ದೀಯಾ? ಎಂದು ಕೂಗಾಡಿದ್ದು, ಅಷ್ಟು ಮಾತ್ರವಲ್ಲದೇ ಹೋಟೆಲ್‌ನಲ್ಲಿದ್ದ ಗ್ರಾಹಕರ ಮುಂದೆಯೇ ಶಬೀಬ್‌ ಅವರ ಮೇಲೆ ಹಲ್ಲೆ ನಡೆಸಿ ಅವಮಾನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹಲ್ಲೆ ಮಾಡಿ, ಇಲ್ಲಸಲ್ಲದ ಆರೋಪ ಹೊರಿಸಿ ಸಾರ್ವಜನಿಕವಾಗಿ ಅವಮಾನ ಮಾಡಿದ ಹಕೀಂ ಕೂರ್ನಡ್ಕ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಶಬೀಬ್‌ ರಹಮಾನ್‌ ಅವರು ಬಂಟ್ವಾಳ ನಗರ ಪೊಲೀಸ್‌ ಠಾಣೆಗೆ ದೂರನ್ನು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.

RELATED ARTICLES

Most Popular

Recent Comments