

Vatal Nagaraj: ಫೆಬ್ರವರಿ 14 ಪ್ರೇಮಿಗಳ ದಿನ. ಪ್ರೇಮಿಗಳು ಪರಸ್ಪರ ಭೇಟಿಯಾಗಿ ಉಡುಗೊರೆ ವಿನಿಮಯ ಮಾಡಿಕೊಳ್ಳುವುದು, ಪ್ರೇಮ ನಿವೇದನೆ ಮಾಡಿಕೊಳ್ಳುವುದನ್ನೆಲ್ಲಾ ಈ ದಿನ ಕಾಣಬಹುದು. ಆದರೆ ಕರ್ನಾಟಕದಲ್ಲಿ ಪ್ರಸಿದ್ಧ ಹೋರಾಟಗಾರ ಆಗಿರುವ ವಾಟಾಳ್ ನಾಗರಾಜ್ ಅವರು ಎರಡು ಕತ್ತೆಗಳಿಗೆ ಮದುವೆ ಮಾಡಿಸುವ ಮುಖಾಂತರ ಪ್ರೇಮಿಗಳ ದಿನವನ್ನು ಆಚರಿಸಿದ್ದಾರೆ.
ಯಸ್, ಪ್ರೇಮಿಗಳ ದಿನದ ಪ್ರಯುಕ್ತ ವಾಟಾಳ್ ನಾಗರಾಜ್ ಬೆಂಗಳೂರಿನ ಸೆಂಟ್ರಲ್ ರೈಲ್ವೆ ನಿಲ್ದಾಣದ ಬಳಿ ಕತ್ತೆಗಳ ಮೆರವಣಿಗೆ ನಡೆಸಿ, ಪೂಜೆ ಸಲ್ಲಿಸಿ, ಹೂವಿನ ಹಾರ ಹಾಕಿ ತಾಳಿ ಕಟ್ಟಿ ವಿವಾಹ ಮಾಡುವ ಮುಖಾಂತರ ಪ್ರೇಮಿಗಳ ದಿನವನ್ನು ಆಚರಿಸಿದ್ದಾರೆ. ಅವರು ಪ್ರತಿವರ್ಷವೂ ಅವರು ಇದೇ ರೀತಿ ಪ್ರೇಮಿಗಳ ದಿನವನ್ನು ಆಚರಿಸುತ್ತಾರೆ ಎಂಬುದು ವಿಶೇಷ.
ಈ ವೇಳೆ ಮದುವೆ ಮುಗಿದ ಕೂಡಲೇ ಗಂಡು ಕತ್ತೆ ಸ್ಥಳದಿಂದ ಕಾಲ್ಕಿತ್ತಿದೆ. ಇದನ್ನು ಕಂಡು ಜನ ಜೋರಾಗಿ ನಕ್ಕಿದ್ದಾರೆ. ಆ ಬಳಿಕ ಮತ್ತೆ ಗಂಡು ಕತ್ತೆಯನ್ನು ಹಿಡಿದು ತಂದು ಮದುವೆ ಮಾಡಿಸಲಾಗಿದೆ. ಇನ್ನೂ ಈ ವೇಳೆ ಪ್ರೇಮ ವಿವಾಹ ಆಗುವವರಿಗೆ ಸೂಕ್ತ ಭದ್ರತೆ ನೀಡಬೇಕು ಮತ್ತು ಸರ್ಕಾರದ ವತಿಯಿಂದ 3 ಲಕ್ಷ ಹಣ ನೀಡಬೇಕು ಎಂದು ಪ್ರೇಮಿಗಳ ಪರವಾಗಿ ವಾಟಾಳ್ ಆಗ್ರಹಿಸಿದ್ದಾರೆ.













