

Viral Video : ಬೆಂಗಳೂರು ಕನ್ನಡಿಗರ ಹೆಮ್ಮೆಯ ನಗರ. ಪೂರ್ವದಲ್ಲಿ ಅದು ಬೆಂದಕಾಳೂರು ಆಗಿತ್ತು ನಂತರದಲ್ಲಿ ಬೆಂಗಳೂರು ಆಗಿ ಕರೆಯಲ್ಪಟ್ಟಿದೆ. ಇದಕ್ಕೆ ನಮ್ಮಲ್ಲಿ ಸಾಕಷ್ಟು ದಾಖಲೆಗಳು ಕೂಡ ಇವೆ. ಆದರೆ ಈಗ ತಮ್ಮೆಳಿಗನೊಬ್ಬ ಬೆಂಗಳೂರು ಕನ್ನಡಿಗರದ್ದಲ್ಲ, ತಮಿಳಿಗರದ್ದು. ಅದು ಬೆಂಗಳೂರು ಅಲ್ಲ, ವೆಂಣ್ ಕಾಳೂರು ಆಗಿತ್ತು ಎಂದು ಹೇಳಿ ವಿಡಿಯೋವನ್ನು ಹರಿ ಬಿಟ್ಟಿದ್ದಾನೆ.
ಹೌದು, ಬೆಂಗಳೂರು ತಮಿಳುನಾಡಿಗೆ ಸೇರಿದ ಪ್ರದೇಶವಾಗಿದೆ. ಅದನ್ನು ಬದಲಾಯಿಸಲಾಗಿದೆ. ಬೆಂಗಳೂರನ್ನು ವೆಂಣ್ ಕಾಳೂರು ಎಂದು ಕರೆಯುತ್ತಿದ್ದರು. ಆದರೆ ಅದರನ್ನು ಕಸರೆಮೊಸರೆ ಮಾಡಿ, ಬೆಂಗಳೂರು ಅಂತ ಮಾಡಿಕೊಂಡಿದ್ದಾರೆ. ಅಲ್ಲಿ ನೆಲೆಸಿದ್ದು ತಮಿಳಿಗರು, ಬೆಂಗಳೂರು ತಮಿಳಿಗರಿಗೆ ಸೇರಿತ್ತು ಎಂದು ತಮಿಳಿಗನೊಬ್ಬ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಕನ್ನಡ್ವಿರಾಟ (@kohlificationn) ಎನ್ನುವ ಸೋಷಿಯಲ್ ಮೀಡಿಯಾ ಎಕ್ಸ್ ಖಾತೆಯಿಂದ ಇಲ್ಲೊಬ್ಬ ತಮಿಳುನಾಡಿನ ಅಯೋಗ್ಯ ಏನು ಹೇಳ್ತಿದಾನೆ ಅಂತ ಕೇಳಿ ಈ ವೈರಲ್ ವಿಡಿಯೋವನ್ನು ರೀ ಪೋಸ್ಟ್ ಮಾಡಲಾಗಿದೆ. ಇನ್ನು ಈ ವೈರಲ್ ವಿಡಿಯೋಗೆ ಕನ್ನಡಿಗರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ತಮಿಳಿಗರು ತಮ್ಮ ಇತಿಹಾಸವನ್ನು ಹೇಳುವಂತೆ ನೋಡಿದರೆ, ಇಡೀ ತಮಿಳುನಾಡು ನಮ್ಮದೇ ಎನ್ನುವ ಮಾತು ಬರುತ್ತದೆ. ಚೋಳರು ಬೆಂಗಳೂರಿನಲ್ಲಿ ಆಡಳಿತ ನಡೆಸಿದರೆಂಬ ಉಲ್ಲೇಖಗಳಿವೆ. ಆದರೆ ಕನ್ನಡ ರಾಜರಾದ ಗಂಗರು, ಹೊಯ್ಸಳರು ಹಾಗೂ ವಿಜಯನಗರ ಸಾಮ್ರಾಜ್ಯದ ರಾಜರು ತಮಿಳುನಾಡಿನ ಬಹುಭಾಗವನ್ನು ಸಂಪೂರ್ಣವಾಗಿ ಆಳಿದ ದಾಖಲೆಗಳೂ ಇವೆ. ಬೆಂಗಳೂರಿನಲ್ಲಿ ತಮಿಳಿಗರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಶಾಸನಗಳು ಸಿಕ್ಕಿರುವುದು ಕೂಡ ಇತಿಹಾಸದ ಮಹತ್ವದ ಸಂಗತಿಯಾಗಿದೆ ಎಂದು ವರುಣ್ ಎನ್ನುವವರು ಕಮೆಂಟ್ ಮಾಡಿದ್ದಾರೆ.













