Bengaluru : ರಾಜ್ಯದ ಈ ದೇವಾಲಯದಲ್ಲಿ ಇನ್ನು ಮದುವೆ ಆಗುವುದು ನಿಷೇಧ!!

Bengaluru : ನಾಡಿನ ಖ್ಯಾತ ದೇವಾಲಯಗಳಲ್ಲಿ ಒಂದಾಗಿರುವ ಬೆಂಗಳೂರಿನ ಸೋಮೇಶ್ವರ ಸ್ವಾಮಿ ದೇವಾಲಯದಲ್ಲಿ ಇನ್ನು ಮುಂದೆ ಮದುವೆಯಾಗುವುದನ್ನು ನಿಷೇಧಿಸಲಾಗಿದೆ.

ಹೌದು, ಬೆಂಗಳೂರು ನಗರದ ಅತ್ಯಂತ ಹಳೆಯ ಮತ್ತು ಐತಿಹಾಸಿಕ ದೇವಾಲಯಗಳಲ್ಲಿ ಒಂದಾದ ಹಲಸೂರು ಶ್ರೀಸೋಮೇಶ್ವರಸ್ವಾಮಿ ದೇವಾಲಯವು ಕಳೆದ ಏಳು ವರ್ಷಗಳಿಂದ ವಿವಾಹ ಸಮಾರಂಭಗಳನ್ನು ನಡೆಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಈ ಕುರಿತಾಗಿ ದೇವಾಲಯ ಆಡಳಿತ ಮಂಡಳಿ ಆದೇಶ ಹೊರಡಿಸಿದೆ.
ಮದುವೆ ನಿಷೇಧಿಸಲು ಕಾರಣಗಳು.!ದೇವಾಲಯ ಆಡಳಿತ ಹಿಂದೆ, ದೇವಾಲಯದಲ್ಲಿ ಮದುವೆಯಾದ ದಂಪತಿಗಳು ಬೇರ್ಪಟ್ಟು ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗುತ್ತಿದ್ದರು. ಆದಾಗ್ಯೂ, ವಿಚಾರಣೆಯ ಸಮಯದಲ್ಲಿ, ದೇವಾಲಯದ ಅರ್ಚಕರನ್ನ ಸಾಕ್ಷ್ಯ ನೀಡಲು ನ್ಯಾಯಾಲಯಗಳಿಗೆ ಹಾಜರಾಗುವಂತೆ ಕರೆಯಲಾಗಿತ್ತು. ಈ ಕಾರಣದಿಂದಾಗಿ, ಅರ್ಚಕರು ತೀವ್ರ ಒತ್ತಡಕ್ಕೆ ಒಳಗಾಗಿದ್ದು, ದೇವಾಲಯದ ಆವರಣದಲ್ಲಿ ಮದುವೆಗಳನ್ನ ಮಾಡಲು ನಿರಾಕರಿಸಿದರು.
ದೇವಾಲಯದ ಪ್ರಸ್ತುತ ಇಒ ಕಾರಣ ಸ್ಪಷ್ಟಪಡಿಸಿದ್ದು, ಇಂತಹ ಅನಪೇಕ್ಷಿತ ಘಟನೆಗಳು ದೇವಾಲಯಕ್ಕೆ ಕಳಂಕ ತರುವುದನ್ನ ಮತ್ತು ದೇವಾಲಯದ ಬಗ್ಗೆ ಸುಳ್ಳು ಪ್ರಚಾರವನ್ನ ಹರಡುವುದನ್ನು ತಡೆಯಲು ಮದುವೆಗಳನ್ನು ನಿಲ್ಲಿಸಲಾಗಿದೆ.
Comments are closed.