Dasara: ದಸರಾ ಉದ್ಘಾಟನೆ ತಕರಾರು ವಿಷಯ: ಒಂದು ಧರ್ಮವನ್ನು ಹೊರಗಿಟ್ಟು ದಸರಾ ಮಾಡಲು ಸಾಧ್ಯವೇ?-ಜಿ ಪರಮೇಶ್ವರ್

Dasara: ದಸರಾ ಉದ್ಘಾಟಕರಿಗೆ ತಕರಾರು ವಿಚಾರವಾಗಿ ಕೇಳಿದ ಪ್ರಶ್ನೆಗೆ, ದಸರಾ ನಾಡಹಬ್ಬ. ಯಾವ ಜಾತಿಗೆ ಧರ್ಮಕ್ಕೆ ಸೀಮಿತ ಅಲ್ಲ. ಒಂದು ಧರ್ಮವನ್ನು ಹೊರಗಿಟ್ಟು ದಸರಾ ಮಾಡಲು ಸಾಧ್ಯವೇ? ಮಿರ್ಜಾ ಇಸ್ಮಾಯಿಲ್ ದಿವಾನರಾಗಿ ದಸರಾ ಮಾಡಿಲ್ಲವೇ? ನಿಸ್ಸಾರ್ ಅಹಮದ್ ದಸರಾ ಉದ್ಘಾಟನೆ ಮಾಡಿಲ್ಲವೇ? ಇದಕ್ಕೆಲ್ಲಾ ತಕರಾರು ತೆಗೆಯಬಾರದು.

ಚಾಮುಂಡಿ ತಾಯಿ ನಂಬುತ್ತಾರೆ ಬಿಡುತ್ತಾರೆ ಎನ್ನುವುದು ಅವರಿಗೆ ಸೇರಿದ್ದು, ಇದು ಊರ ಹಬ್ಬ ಎಲ್ಲರೂ ಸೇರಿಯೇ ಮಾಡಬೇಕು ಎಂದು ಇಂದು (ಸೋಮವಾರ) ಆ.25 ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.
Comments are closed.