ಉಡುಪಿ | ರಿವರ್ಸ್ ತೆಗೆಯುವ ವೇಳೆ ಬಾವಿಗೆ ಬಿದ್ದ ಕಾರು

Share the Article

ಕಾರನ್ನು ರಿವರ್ಸ್ ತೆಗೆಯುವಾಗ ಚಾಲಕಿಯ ನಿಯಂತ್ರಣ ತಪ್ಪಿ ಬಾವಿಗೆ ಉರುಳಿ ಬಿದ್ದ ಘಟನೆ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಪಟ್ಟಣ ವ್ಯಾಪ್ತಿಯಲ್ಲಿ ನಡೆದಿದೆ.

ಕಾರು ರಿವರ್ಸ್ ತೆಗೆಯುವಾಗ ಬ್ರೇಕ್ ಬದಲು ಎಕ್ಸಲೇಟರ್ ಗೆ ತುಳಿದ ಕಾರಣ ಕಾರು ನಿಯಂತ್ರಣ ತಪ್ಪಿ ಮನೆಯ ಬಾವಿಗೆ ಬಿದ್ದಿದೆ. ಕಾರನ್ನು ಖ್ಯಾತ ‘ಶ್ರೀಕೃಷ್ಣ’ ಪಂಚಾಂಗದ ಕರ್ತೃ ಶ್ರೀನಿವಾಸ ಅಡಿಗರ ಸೊಸೆ ಚಲಾಯಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಕಾರು ನಿಯಂತ್ರಣ ಕಳೆದುಕೊಂಡದ್ದು ತಮ್ಮ ಗಮನಕ್ಕೆ ಬಂದ ಕೂಡಲೇ ಅಡಿಗರ ಸೊಸೆ ಕಾರಿನಿಂದ ಹಾರಿ ಅಪಾಯದಿಂದ ಪಾರಾಗಿದ್ದಾರೆ.

ಕಾರನ್ನು ಸ್ಥಳೀಯರ ಸಹಾಯ ಮತ್ತು ಕ್ರೇನ್ ನ ಸಹಾಯದಿಂದ ಮೇಲಕ್ಕೆ ಎತ್ತಲಾಗಿದೆ.

Leave A Reply

Your email address will not be published.