ಯುದ್ಧ ಬೇಡ ಅಂದ ಸಿದ್ದುವನ್ನು ಹೊಗಳಿದ ಪಾಕ್ ಮೀಡಿಯಾ: ಯಡವಟ್ಟು ಸಿದ್ದಾ, ಏನಪ್ಪಾ ಇದೆಲ್ಲಾ?

Bengaluru: ಪಹಲ್ಗಾಮ್ ದಾಳಿ ಬೆನ್ನಲ್ಲೇ ಉಂಟಾಗಿರುವ ಭಾರತ ಹಾಗೂ ಪಾಕ್ ನಡುವಿನ ಸಂಘರ್ಷ ತಾರಕಕ್ಕೇರಿದ್ದು ಎರಡೂ ದೇಶಗಳ ರಾಜಕಾರಣಿಗಳು ಈ ಬಗ್ಗೆ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಏಪ್ರಿಲ್ 26ರ ಶನಿವಾರ ಮೈಸೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ. ಸಿಎಂ ಸಿದ್ದರಾಮಯ್ಯನವರಿ ಪಾಕ್ – ಭಾರತದ ನಡುವೆ ಯುದ್ಧದ ಬಗ್ಗೆ ಪ್ರತಿಕ್ರಿಯಿಸಿದರು.
‘ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಬೇಕಾದಂತಹ ಅಗತ್ಯ ಇಲ್ಲ. ಇನ್ನಷ್ಟು ಬಿಗಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಅಷ್ಟೆ. ಭದ್ರತಾ ವ್ಯವಸ್ಥೆಯನ್ನು ಬಿಗಿ ಮಾಡುವಂತಹ ಕೆಲಸವನ್ನು ಮಾಡಬೇಕು. ಯುದ್ಧದ ಪರ ಇಲ್ಲ ನಾವು. ಶಾಂತಿ ಇರಬೇಕು, ಜನರಿಗೆ ಭದ್ರತೆ ಇರಬೇಕು, ಕೇಂದ್ರ ಸರ್ಕಾರ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದು ಅವರು ಹೇಳಿಕೆ ನೀಡಿದ್ದರು.
ಈ ಹೇಳಿಕೆ ರಾಜ್ಯದಲ್ಲಿ ಚರ್ಚೆಯನ್ನು ಹುಟ್ಟುಹಾಕಿದ್ದಲ್ಲದೆ ಸಿದ್ದು ಮಾತು ಪಾಕಿಸ್ತಾನಕ್ಕೂ ಸಹ ತಲುಪಿದೆ. ಅಲ್ಲಿನ ಸುದ್ದಿ ವಾಹಿನಿಗಳು ಸಿದ್ದರಾಮಯ್ಯ ನೀಡಿದ ಹೇಳಿಕೆ ಉಲ್ಲೇಖಿಸಿ, ‘ಸಿದ್ದರಾಮಯ್ಯನವರ ಪ್ರಕಾರ ಭಾರತ ಯುದ್ಧ ಮಾಡುವ ಅಗತ್ಯವಿಲ್ಲ. ಬದಲಾಗಿ ಭದ್ರತಾ ಕ್ರಮ ಕೈಗೊಳ್ಳಬೇಕು ಎಂಬ ಹೇಳಿಕೆ ಸರಿ ಇದೆ. ಹಾಗೂ ಇದೊಂದು ಪ್ರಬುದ್ಧವಾದ ಹೇಳಿಕೆ ಎಂದು ಸಿದ್ದರಾಮಯ್ಯನವರನ್ನು ಹೊಗಳಿವೆ.
ಪಾಕಿಸ್ತಾನದ ಸುದ್ದಿ ವಾಹಿನಿಗಳಲ್ಲಿ ಸಿದ್ದು ಸುದ್ದಿ ಪ್ರಸಾರದ ವಿಡಿಯೊ ಹಂಚಿಕೊಳ್ಳುತ್ತಿರುವ ನೆಟ್ಟಿಗರು ಸಿದ್ದರಾಮಯ್ಯ ಈ ರೀತಿ ಹೇಳಿಕೆ ನೀಡಬಾರದಿತ್ತು ಎಂದು ಕಿಡಿಕಾರಿದ್ದಾರೆ. ಯುದ್ಧದ ಸನ್ನಿವೇಶದಲ್ಲಿ, ಭಾರತದ ರಾಜ್ಯವೊಂದರ ಮುಖ್ಯಸ್ಥರೇ ಯುದ್ಧ ಬೇಡ ಅಂದ ಸಂದರ್ಭದಲ್ಲಿ, ಮುಂದೆ ಏನಾದರೂ ಯುದ್ಧ ನಡೆದರೆ, ಅಂತರಾಷ್ಟ್ರೀಯ ಸಮೂಹ ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಯಡವಟ್ಟು ಮಾಡಿ ಬಿಟ್ಟಿದ್ದಾರೆ ಎಂದು ಸೋಷಿಯಲ್ ಮೀಡಿಯಾ ಮಾತಾಡಿಕೊಳ್ಳುತ್ತಿದೆ.
ಭಾರತೀಯರನ್ನು ಕೊಂದ ನರರಾಕ್ಷಸ ಉಗ್ರರನ್ನು ಪಾಕಿಸ್ತಾನ ಸಾಕಿ ಸಲಹುತ್ತಿರುವ ವಿಚಾರ ಸಿದ್ದರಾಮುಲ್ಲಾ ಖಾನ್ರಿಗೆ ಗೊತ್ತಿದ್ದರೂ ಸಹ ಅದರಲ್ಲೂ ಮುಖ್ಯವಾಗಿ ಜಗತ್ತಿನಾದ್ಯಂತ ಪಾಪಿಪಾಕ್ ವಿರುದ್ಧ ಪ್ರತಿಕಾರಕ್ಕೆ ಒತ್ತಾಯಗಳು ಕೇಳಿ ಬರುತ್ತಿರುವ ಸಂದರ್ಭದಲ್ಲೇ ಅವರು ವಿರೋಧಿ ರಾಷ್ಟ್ರ ಪಾಕ್ ನ ಬೆಂಬಲಕ್ಕೆ ನಿಂತು ಕೊಂಡಿರುವುದರಿಂದ ಅವರೊಬ್ಬ ಪಾಪಿ ಪಾಕ್ ಹಾಗೂ ಭಯೋತ್ಪಾದಕ ಬೆಂಬಲಿತ ಕರ್ನಾಟಕದ ಮುಖ್ಯಮಂತ್ರಿ ಸಿದ್ರಾಮುಲ್ಲಾ ಖಾನ್ ಎಂಬುದನ್ನು ಸಾಬೀತು ಪಡಿಸಿಕೊಂಡಿದ್ದಾರೆ ಎನ್ನುವ ಆರೋಪಗಳನ್ನು ಇದೀಗ ಎಲ್ಲೆಡೆಯಿಂದ ಕೇಳಿ ಬರುತ್ತಿವೆ.
ರಣರಂಗದಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದು ವೈರಿಗಳೊಂದಿಗೆ ಹೋರಾಡಲು ಮುನ್ನುಗ್ಗಲೆತ್ನಿಸುತ್ತಿರುವ ಭಾರತೀಯ ಸೈನಿಕರನ್ನು ಪ್ರೋತ್ಸಾಹಿಸಿ, ಬೆಂಬಲಿಸುವ ಬದಲು, ವೈರಿಗಳ ಮೇಲೆ ಅನುಕಂಪ ತೋರುವ ಮೂಲಕ ಭಾರತೀಯ ಸೈನಿಕರ ಉತ್ಸಾಹಕ್ಕೆ ತಣ್ಣೀರೆರಚಲೆತ್ನಿಸುತ್ತಿರುವ ಇಂತಹ ಪುಕ್ಕಲು ಮುಖ್ಯಮಂತ್ರಿಯನ್ನು ತಕ್ಷಣ ಅಧಿಕಾರದಿಂದ ಕೆಳಗಿಳಿಸಿ ಪಾಕಿಸ್ತಾನಕ್ಕೆ ಗಡಿಪಾರು ಮಾಡಬೇಕೆಂದು ಇದೀಗ ದೇಶದೆಲ್ಲೆಡೆಯಿಂದ ಸಿದ್ದ್ರಾಮುಲ್ಲಖಾನ್ ರ ವಿರುದ್ಧ ಆಕ್ರೋಶದ ಮಾತುಗಳು ಕೇಳಿ ಬರುತ್ತಿವೆ ಎನ್ನಲಾಗಿದೆ.
Has Congress come openly to protect Pakistan and sabotage India’s narrative?
Pakistani media is quoting Karanataka’s CM Siddaramaiah statement that India should not go on war with Pakistan
Don’t forget that international community takes such internal statements very seriously
pic.twitter.com/x70AjQboTR
STAR Boy TARUN (@Starboy2079)
Comments are closed.