Dharmasthala burial Case: ಧರ್ಮಸ್ಥಳ ಪ್ರಕರಣ : ಪಾಯಿಂಟ್ ಆರರಲ್ಲಿ ಅಸ್ಥಿಪಂಜರ ಕುರುಹು ಪತ್ತೆ

Share the Article

Darmasthala burial Case: ಧರ್ಮಸ್ಥಳದಲ್ಲಿ (Dharmasthala) ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರೀ ದೊಡ್ಡ ಅಪ್ಡೇಟ್ ಲಭ್ಯ ವಾಗಿದೆ. ಆರನೇ ಪಾಯಿಂಟ್‌ನಲ್ಲಿ ಅಸ್ತಿಪಂಜರದ ಗುರುತು ಪತ್ತೆಯಾಗಿದೆ. ಮೂರನೇ ದಿನ ಇಂದು ಇನ್ನಷ್ಟು ಸಲಕರಣೆ, ಮನುಷ್ಯರ ಸಹಾಯ, ಜೊತೆಗೆ ಜೆಸಿಬಿ ಕಾರ್ಯಾಚರಣೆಯೊಂದಿಗೆ ದೂರುದಾರ ಮಾರ್ಕ್‌ ಮಾಡಿದ ಆರನೇ ಜಾಗವನ್ನು ಉತ್ಖನನ ಮಾಡಿದ ವೇಳೆ ಅಸ್ಥಿಪಂಜರದ ಕುರುಹು ಪತ್ತೆಯಾಗಿರುವ ಕುರಿತು ಮಾಹಿತಿ ದೊರಕಿದೆ. ಭೀಮ ಹೇಳಿದ್ದು ಸತ್ಯವಾಗಿದೆ.

ನಿನ್ನೆ ದೂರುದಾರ ಮಾರ್ಕ್ ಮಾಡಿದ 2,3,4,5, ಸ್ಥಳಗಳಲ್ಲಿ ಎಸ್‌ಐಟಿ ತಂಡ ಉತ್ಖನನ ನಡೆಸಿತ್ತು. ಆದರೆ ಯಾವುದೇ ಅಸ್ತಿ ಪಂಜರದ ಕುರುಹು ಪತ್ತೆಯಾಗಲಿಲ್ಲ. ಈ ಮೂಲಕ ಸತತ ಮೂರು ದಿನಗಳ ಕಾರ್ಯಚರಣೆ ನಂತರ ಕುರುಹುಗಳು ಪತ್ತೆಯಾಗಿದೆ. 6 ನೇ ಪಾಯಿಂಟ್‌ನಲ್ಲಿ ಎರಡು ಮೂಳೆಗಳು ಪತ್ತೆಯಾಗಿದೆ ಎಂದು ವರದಿಯಾಗಿದೆ. ಈ ಕುರಿತು ಎಸ್‌ಐಟಿ ಸ್ಪಷ್ಟಪಡಿಸಬೇಕಿದೆ ಎಂದು ವರದಿ ತಿಳಿಸಿದೆ.

6ನೇ ಗುಂಡಿಯಲ್ಲಿ ದೊರೆತ ಮೂಳೆಗಳನ್ನು ಎಸ್‌ಐಟಿ ಸಂಗ್ರಹ ಮಾಡಿದ್ದು, ಕೊನೆಗೂ ಮಾಸ್ಕ್‌ಮ್ಯಾನ್‌ ಹೇಳಿದ ರೀತಿಯಲ್ಲೇ ಅಸ್ಥಿಪಂಜರದ ಅವಶೇಷಗಳು ದೊರಕಿದೆ. ಕೆಲ ಮೂಳೆಗಳು ದೊರಕಿದ್ದು, ಇದನ್ನು ಇಂದೇ ಎಫ್‌ಎಸ್‌ಎಲ್‌ಗೆ ರವಾನಿಸುವ ಸಾಧ್ಯತೆ ಕೂಡಾ ಇದೆ. ಗುಂಡಿಯ ಮಣ್ಣನ್ನು ಫಾರೆನ್ಸಿಕ್‌ ತಜ್ಞರ ತಂಡ ಪರಿಶೀಲನೆ ಮಾಡಿದ್ದಾರೆ.

ಇದನ್ನೂ ಓದಿ: Weather Report: ಕರ್ನಾಟಕ ಹವಾಮಾನ ಮುನ್ಸೂಚನೆ : ತಮಿಳುನಾಡು ಕರಾವಳಿಯಲ್ಲಿ ವಾಯುಭಾರ ಕುಸಿತ – ಗುಡುಗು ಸಹಿತ ಉತ್ತಮ ಮಳೆಯ ಸಾಧ್ಯತೆ

Comments are closed.