Chamarajanagara: ಹುಲಿಗಳ ಸಾವಿನ ಬಳಿಕ ಚಿರತೆ ಶವ ಪತ್ತೆ: ಪಕ್ಕದಲ್ಲಿಯೇ ನಾಯಿ, ಕರು ಶವ ಪತ್ತೆ

Share the Article

Chamarajanagara: ಮಲೆ ಮಹದೇಶ್ವರ ಬೆಟ್ಟದಲ್ಲಿ ಐದು ಹುಲಿಗಳ ಸಾವು ಆದ ನಂತರ ಇದೀಗ ಜಿಲ್ಲೆಯ ಕೊತ್ತಲವಾಡಿ ಸಮೀಪದಲ್ಲಿ ಚಿರತೆಯ ಶವವೊಂದು ಪತ್ತೆಯಾಗಿದೆ. ವಿಷಪ್ರಾಶನ ಆಗಿರುವ ಶಂಕೆ ವ್ಯಕ್ತವಾಗಿದೆ ಎಂದು ವರದಿಯಾಗಿದೆ.

ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಸಮೀಪದ ಪ್ರದೀಪ್‌ ಎಂಬುವವರ ಗಣಿ ತ್ಯಾಜ್ಯದ ಕಲ್ಲು ಸಂಗ್ರಹಿಸಿರುವ ಜಮೀನಿನಲ್ಲಿ ಶವ ಪತ್ತೆಯಾಗಿದೆ. ಸುಮಾರು 5 ವರ್ಷದ ಗಂಡು ಚಿರತೆಯೊಂದರ ಶವದ ಜೊತೆ ಪಕ್ಕದಲ್ಲಿಯೇ ಕರು ಹಾಗೂ ನಾಯಿಯ ಶವ ಪತ್ತೆಯಾಗಿದೆ.

ಘಟನಾ ಸ್ಥಳಕ್ಕೆ ಬಿ.ಆರ್‌.ಟಿ ಅರಣ್ಯಾಧಿಕಾರಿಗಳಾದ ಸಿಸಿಎಫ್‌ ಹಿರಾಲಾಲ್‌, ಡಿಸಿಎಫ್‌ ಶ್ರೀಪತಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಇದನ್ನೂ ಓದಿ: Actor Darshan: ನಟ ದರ್ಶನ್‌ಗೆ ಶಾಕಿಂಗ್‌ ನ್ಯೂಸ್‌

Comments are closed.