Muslims in india: ಮುಸ್ಲಿಂ ಜನರಿಗೆ 57 ದೇಶಗಳಿದೆ, ಭಾರತ ಬಿಟ್ಟು ತೊಲಗಿ: ಕಾಂಗ್ರೆಸ್ ಬೆಂಬಲಿಗ ಜ್ಯೋತಿರ್ಮಠದ ಸ್ವಾಮೀಜಿಗಳ ಶಾಕಿಂಗ್ ಹೇಳಿಕೆ!

Muslims in india: ಕಾಂಗ್ರೆಸ್ ಬೆಂಬಲಿಗರು ಆಗಿರುವ ಜ್ಯೋತಿರ್ಮಠದ (Jyotirmath) ಶಂಕರಾಚಾರ್ಯ ಸ್ವಾಮಿ (Shankaracharya Swami) ಅವಿಮುಕ್ತೇಶ್ವರಾನಂದ ಸರಸ್ವತಿ ಮಹಾರಾಜ್ ( Avimukteshwaranand Saraswati Maharaj) ಅವರು ಇದೀಗ ವಿವಾದ ಹುಟ್ಟುಹಾಕುವ ಹೇಳಿಕೆ ಒಂದನ್ನು ನೀಡಿದ್ದಾರೆ.

ಹೌದು, ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಮಹಾರಾಜ ಪ್ರಕಾರ, ಮುಸ್ಲಿಮರು ಭಾರತದಲ್ಲಿ (muslims in india) ಇರಬಾರದು, ಯಾಕೆಂದರೆ ಅವರಿಗಾಗಿ 57 ಮುಸ್ಲಿಂದ ದೇಶಗಳಿದೆ. ಅವರು ಅಲ್ಲಿಗೆ ಹೋಗುವುದೇ ಸೂಕ್ತ. ಅವರು ಭಾರತದಲ್ಲೇ ಏಕೆ ಉಳಿದುಕೊಂಡಿದ್ದಾರೆ ಎಂದು ಕಾರಣ ಕೇಳುವ ಮೂಲಕ ಹೇಳಿಕೆ ನೀಡಿದ್ದಾರೆ. ಈ ಮೂಲಕ ಅವರು ಮುಸ್ಲಿಮರಿಗೆ ಭಾರತ ಬಿಟ್ಟು ತೊಲಗಿ ಎಂದು ಕರೆ ಕೊಟ್ಟಿದ್ದಾರೆ.

ಈಗಾಗಲೇ ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಮಹಾರಾಜ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನೇರ ಹೇಳಿಕೆಯಿಂದಲೇ ಜನಪ್ರಿಯರಾಗಿದ್ದಾರೆ. ಅದೇ ರೀತಿ ಮೋದಿ ನೇತೃತ್ವದ ಸರ್ಕಾರವನ್ನು ವಿರೋಧಿಸುವ ಇವರು ಕಾಂಗ್ರೆಸ್ಸಿಗರಿಗೆ ಹತ್ತಿರವಾಗಿದ್ದಾರೆ. ಅಲ್ಲದೆ ಆಗಾಗ್ಗೆ ಕೇಂದ್ರ ಸರ್ಕಾರದ ಬಗ್ಗೆ ಧ್ವನಿ ಎತ್ತುವ ಕಾರಣಕ್ಕಾಗಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ತುಂಬಾ ಹತ್ತಿರವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ ಸ್ವಾಮೀಜಿ ಇದೀಗ ಉಲ್ಟಾ ಹೊಡೆದಿದ್ದು, ಮುಸ್ಲಿಮರ ವಿರುದ್ಧ ನೀಡಿರುವ ಹೇಳಿಕೆಯು ಭಾರಿ ವೈರಲ್ ಆಗಿದೆ.

Leave A Reply

Your email address will not be published.