Home News Tungabhadra Dam: ತುಂಗಭದ್ರಾದಲ್ಲಿ ಭರದ ಗೇಟ್ ಅಳವಡಿಕೆ ಕಾರ್ಯ, ಶುಕ್ರವಾರ ಶುಭ ಸುದ್ದಿ ಕೊಡ್ತೇವೆ ಅಂದ...

Tungabhadra Dam: ತುಂಗಭದ್ರಾದಲ್ಲಿ ಭರದ ಗೇಟ್ ಅಳವಡಿಕೆ ಕಾರ್ಯ, ಶುಕ್ರವಾರ ಶುಭ ಸುದ್ದಿ ಕೊಡ್ತೇವೆ ಅಂದ ಡ್ಯಾಂ ತಜ್ಞ ಕನ್ನಯ್ಯ ನಾಯ್ಡು

Hindu neighbor gifts plot of land

Hindu neighbour gifts land to Muslim journalist

Tungabhadra Dam: ತುಕ್ಕು ಹಿಡಿದು ಕೊಚ್ಚಿ ಹೋಗಿರುವ ತುಂಗಭದ್ರಾ ಡ್ಯಾಂನ (Tungabhadra Dam) 19ನೇ ಕ್ರಸ್ಟ್ ಗೇಟ್ ಜಾಗಕ್ಕೆ ಸ್ಟಾಪ್ ಲಾಗ್ ಗೇಟ್ ಅಳವಡಿಸುವ ಕೆಲಸ ಶುರುವಾಗಿದ್ದು ಇದೀಗ ಭರದಿಂದ ಸಾಗಿದೆ. ಗೇಟ್‍ನಿಂದ ಹೊರ ಹೋಗುವ ನೀರಿನ ಹರಿವನ್ನು ತಡೆಯಲು ಜಿಂದಾಲ್‍ನಿಂದ ಮೂರು ಸ್ಟಾಪ್ ಲಾಗ್ ಗೇಟ್‍ಗಳು ಜಲಾಶಯಕ್ಕೆ ಬಂದಿದ್ದು ಇನ್ನೇನು ಕೆಲಸ ಗೇಟ್ ಅಳವಡಿಸುವ ಕೆಲಸ ಆರಂಭವಾಗಲಿದೆ. ಸ್ಟಾಪ್ ಗೇಟ್ ಸಾಗಾಟ ಮತ್ತು ಅಳವಡಿಕೆಗೆ ಪೋಲಿಸ್ ಸರ್ಪಗಾವಲು ಅಳವಡಿಸಲಾಗಿದೆ.

ನಿನ್ನೆ ತಡರಾತ್ರಿಯೇ ಸ್ಟಾಪ್ ಲಾಗ್ ಗೇಟ್‍ ಬರಬೇಕಿತ್ತು. ಆದರೆ ಮಳೆ ಅಡ್ಡಿಯಾಗಿತ್ತು. ಹಾಗಾಗಿ ಇಂದು ಬೆಳಗ್ಗೆ ಗೇಟ್‍ಗಳನ್ನು ತರಲಾಯಿತು. ಈ ಮಧ್ಯೆ ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ಶುಕ್ರವಾರದ ಒಳಗೆ ಶುಭಸುದ್ದಿ ನೀಡುತ್ತೇವೆ ಎಂದಿದ್ದಾರೆ. ಗೇಟ್ ಕೂರಿಸಲು ಒಟ್ಟು ಮೂರು ದಿನದ ಯೋಜನೆಯ ಸಿದ್ಧತೆ ಮಾಡಿಟ್ಟುಕೊಳ್ಳಲಾಗಿದೆಯಂತೆ.

ಒಂದು ಸ್ಟಾಪ್ ಲಾಗ್ ಗೇಟ್ ಹಾಕಿದ ಬಳಿಕ ವೆಲ್ಡಿಂಗ್ ಮಾಡಬೇಕು. ಅದು 40 ನಿಮಿಷದ ಒಳಗೆ ವೆಲ್ಡಿಂಗ್ ಮುಗಿಸಿ ಮತ್ತೊಂದು ಸ್ಟಾಪ್ ಲಾಗ್ ಗೇಟ್ ಹಾಕಬೇಕು. ಇಲ್ಲದೇ ಇದ್ದರೇ ಮತ್ತೇ ಮಾಡಿದ ಕೆಲಸವೆಲ್ಲಾ ವ್ಯರ್ಥ ಆಗಲಿದೆ. ಹೀಗಾಗಿ ಎಲ್ಲಾ ರೀತಿಯ ಪೂರ್ವ ಸಿದ್ಧತೆ ಕಾರ್ಯಗಳನ್ನ ಮುಗಿಸಿಕೊಂಡು, ಸ್ಟಾಪ್ ಲಾಗ್ ಗೇಟ್ ಅಳವಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಈ ಬಗ್ಗೆ ತಜ್ಞ ಕನ್ನಯ್ಯ ನಾಯ್ಡು (Kannaiah Naidu), ಶುಕ್ರವಾರ ಶುಭ ಸುದ್ದಿ ಕೊಡುತ್ತೇನೆ ಎಂದು ಆತ್ಮವಿಶ್ವಾಸದ ಮಾತನ್ನಾಡಿದ್ದಾರೆ. ಮೊದಲ ಗೇಟ್ ಕೂರಿಸೋದು ದೊಡ್ಡ ಚಾಲೆಂಜ್ ಆಗಿದೆ. ಅದು ಆದ ನಂತರದಲ್ಲಿ ಮತ್ತೆ ಅಷ್ಟೊಂದು ಕಷ್ಟ ಆಗಲ್ಲ. ತಮಗೆ ಜೀವನದಲ್ಲಿ ಇದೊಂದು ದೊಡ್ಡ ಚಾಲೆಂಜ್. ಇದೇ ಮೊದಲ ಬಾರಿಗೆ ಈ ರೀತಿ ಪ್ರಯತ್ನ ಮಾಡುತ್ತಿದ್ದೇನೆ. ಎಲ್ಲಾ ಒಳ್ಳೆಯದಾಗಲಿದೆ ಎಂದು ತಜ್ಞ ನಾಯ್ದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಟ್ಟು 5 ಸ್ಟಾಪ್ ಲಾಗ್ ಗೇಟ್‍ಗಳನ್ನ ಅಳವಡಿಕೆ ಮಾಡಲು ಉದ್ದೇಶಿಸಲಾಗಿದೆ ಒಂದು ಸ್ಟಾಪ್ ಲಾಗ್ ಗೇಟ್ 25 ಟಿಎಂಸಿ ನೀರನ್ನ ತಡೆದರೆ ಒಟ್ಟು 5 ಗೇಟ್‍ಗಳನ್ನ ಅಳವಡಿಕೆ ಮೂಲಕ ಒಟ್ಟು 90 ಟಿಎಂಸಿ ನೀರನ್ನು ಸಂಗ್ರಹ ಮಾಡಲು ಪ್ರಯತ್ನ ಮಾಡಲಾಗುತ್ತಿದೆ ಎನ್ನಲಾಗಿದೆ.