Renukaswamy: ರೇಣುಕಾ ಸ್ವಾಮಿ ಮಾಡಿದ ಮೆಸೇಜ್ ಗೆ ಪವಿತ್ರ ಗೌಡ ಕೊಟ್ಟ ರಿಪ್ಲೇ ಏನು ಗೊತ್ತಾ ?! ಬಯಲಾಯ್ತು ಅಸಲಿ ಸತ್ಯ

Renukaswamy : ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣ(Renukaswamy Murder Case) ಇನ್ನೂ ಮುಗಿಯದ ಕತೆ ಆಗಿದೆ. ತನಿಖೆ ನಡೆಯುತ್ತಲೇ ಇದೆ. ಆರೋಪಿಗಳೆಲ್ಲಾ ಜೈಲು ಪಾಲಾಗಿದ್ದಾರೆ. ಆದರೆ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದ್ದು ರೇಣುಕಾ ಸ್ವಾಮಿ ಮತ್ತು ಪವಿತ್ರ ಗೌಡಳ ನಡುವಿನ ಸಂದೇಶಗಳು. ಹೌದು, ರೇಣುಕಾಸ್ವಾಮಿ ಕೊಲೆ ನಡೆಯಲು ಪವಿತ್ರಾ ಗೌಡಗೆ ಕಳುಹಿಸಿದ್ದ ಅಶ್ಲೀಲ ಸಂದೇಶ ಎಂದು ತಿಳಿದುಬಂದಿತ್ತು.

ತನಿಖೆ ವೇಳೆ ಹಲವು ರಹಸ್ಯಗಳು ಬಯಲಾಗಿದ್ದು, ಮೃತ ರೇಣುಕಾಸ್ವಾಮಿ ಕಳೆದ 5 ತಿಂಗಳಿಂದ ಪವಿತ್ರಾಗೆ (Pavithra Gowda) ಮೆಸೇಜ್ ಮಾಡುತ್ತಿದ್ದನಂತೆ. ಫೆಬ್ರವರಿಯಿಂದ ಸುಮಾರು 200ಕ್ಕೂ ಹೆಚ್ಚು ಮೆಸೇಜ್ ಬಂದಿದ್ದು, ಎಲ್ಲ ಮೆಸೇಜ್‍ಗಳು ಕೂಡ ಅಶ್ಲೀಲ ಮೆಸೇಜ್‍ಗಳಾಗಿತ್ತು ಎಂದು ತಿಳಿದು ಬಂದಿದೆ. ಆದರೆ ರೇಣುಕಾಸ್ವಾಮಿ (Renukaswamy) ಅಷ್ಟು ಮೆಸೇಜ್ ಮಾಡಿದ್ರು ಪವಿತ್ರ ಗೌಡ ಏನು ರಿಪ್ಲೇ ಮಾಡಿದ್ದಳು ಎಂಬುದು ಕುತೂಹಲವಾಗಿತ್ತು. ಇದೀಗ ಆ ಸತ್ಯ ಬಯಲಾಗಿದೆ.

ಹೌದು, ಪವಿತ್ರಾ ಗೌಡ ಯಾವ ರೀತಿ ಪ್ರತಿಕ್ರಿಯೆ ನೀಡಿದ್ದರು ಎಂಬ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ. ರೇಣುಕಾ ಸ್ವಾಮಿ ಮೊಬೈಲ್​ ರಿಟ್ರೀವ್​ ಮಾಡಿದ ಬಳಿಕ ಎಲ್ಲ ವಿವರಗಳು ಪೊಲೀಸರಿಗೆ ಸಿಕ್ಕಿವೆ. ದುರಂತಕ್ಕೆ ಕಾರಣವಾದ ಆ ಮೆಸೇಜ್​ಗಳು ಯಾವವು ಎಂಬುದು ಈಗ ಪೊಲೀಸರಿಗೆ ಲಭ್ಯವಾಗಿವೆ. ಈ ಹೈಪ್ರೊಫೈಲ್​ ಕೇಸ್​ಗೆ ಪ್ರಮುಖ ಸಾಕ್ಷಿಯಾಗಿ ಈ ಮಾಹಿತಿ ಸಿಕ್ಕಿದೆ. ಸದ್ಯ ತನಿಖೆ ಪ್ರಗತಿಯಲ್ಲಿದೆ.

ರೇಣುಕಾ ಸ್ವಾಮಿ ಬಳಸಿದ್ದ ನಂಬರ್​ನಲ್ಲೇ ಹೊಸ ಸಿಮ್​ ಪಡೆದುಕೊಂಡು ಡೇಟಾ ರಿಟ್ರೀವ್​ ಮಾಡಲಾಯಿತು. ಆತ ಬಳಕೆ ಮಾಡಿದ್ದ ವಾಟ್ಸಪ್ ,ಇನ್‌ಸ್ಟಾಗ್ರಾಂ, ಫೇಸ್‌ ಬುಕ್ ಮುಂತಾದ ಆಯಪ್​ಗಳ ಮಾಹಿತಿ ಈಗ ಪೊಲೀಸರ ಕೈ ಸೇರಿದೆ. ಯಾರಿಗೆಲ್ಲ ಆತ ಸಂದೇಶ ಕಳಿಸಿದ್ದ? ಪವಿತ್ರಾ ಗೌಡಗೆ ರೇಣುಕಾ ಸ್ವಾಮಿ ಕಳಿಸಿದ ಮೆಸೇಜ್​ ಏನು? ಅದಕ್ಕೆ ಪವಿತ್ರಾ ನೀಡಿದ್ದ ರಿಪ್ಲೇ ಏನು ಎಂಬುದು ಪೊಲೀಸರಿಗೆ ಗೊತ್ತಾಗಿದೆ.

ದರ್ಶನ್ ಗೆ ಗೊತ್ತಾಗಿದ್ದು ಹೇಗೆ?
ರೇಣುಕಾ ಸ್ವಾಮಿ ಅಶ್ಲೀಲ ಮೆಸೇಜ್ ಮಾಡುವುದನ್ನು ಪವಿತ್ರ ಗೌಡ , ತನ್ನ ಆತ್ಮೀಯನಾದ ಪವನ್ ಬಳಿ ಹೇಳಿದ್ದಾಳೆ. ಕೊನೆಗೆ ಮೊಬೈಲ್ ಪಡೆದ ಪವನ್, ಪವಿತ್ರಾ ಗೌಡ ರೀತಿ ಚಾಟ್ ಮಾಡಿದ್ದ. ರಿಪ್ಲೈ ಬಂದ ಖುಷಿಗೆ ರೇಣುಕಾಸ್ವಾಮಿ ಕೂಡ ಚಾಟ್ ಮಾಡ್ತಿದ್ದ. ಹೀಗೆ ಮಾತಾಡ್ತಾ ಮಾತಾಡ್ತಾ ರೇಣುಕಾಸ್ವಾಮಿಗೆ ಪವನ್ ಪೋಟೋ ಕಳುಹಿಸುವಂತೆ ಹೇಳಿದ್ದಾನೆ. ಅಂತೆಯೇ ರೇಣುಕಾಸ್ವಾಮಿ ತನ್ನ ಫೋಟೋವನ್ನು ಕಳುಹಿಸಿದ್ದಾನೆ. ಫೋಟೋ ಸಿಕ್ಕ ಮೇಲೆ ಆಟ ಶುರುವಾಗಿ, ದರ್ಶನ್ ಗೂ ಗೊತ್ತಾಗಿ ಕೊಲೆಯಲ್ಲಿ ಅಂತ್ಯವಾಗಿದೆ.

Leave A Reply

Your email address will not be published.