Darshan Wife Vijayalakshmi: ಪತಿ ನೋಡಲು ಠಾಣೆಗೆ ಮೊದಲ ಬಾರಿಗೆ ಬಂದ ವಿಜಯಲಕ್ಷ್ಮೀ
![Vijayalakshmi Darshan](https://hosakannada.com/wp-content/uploads/2024/06/IMG-20240613-WA0022.jpg)
Darshan Wife Vijayalakshmi: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ನಟ ದರ್ಶನ್ ಬಂಧನವಾಗಿ ಈಗಾಗಲೇ 9 ದಿನ ಕಳೆದಿದ್ದು, ಇದೀಗ ಪತ್ನಿ ವಿಜಯಲಕ್ಷ್ಮೀ ಅವರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಬುಧವಾರ (ಇಂದು) ಹಾಜರಾಗಿದ್ದಾರೆ.
Darshan Wife Vijayalakshmi: ಪತಿ ನೋಡಲು ಠಾಣೆಗೆ ಮೊದಲ ಬಾರಿಗೆ ಬಂದ ವಿಜಯಲಕ್ಷ್ಮೀ
ವಕೀಲರ ಜೊತೆ ಬಂದಿರುವ ವಿಜಯಲಕ್ಷ್ಮೀ ಅವರು ಜಾಮೀನು ಹಂತದ ಪ್ರಕ್ರಿಯೆಯನ್ನು ಮಾಡಲಿದ್ದಾರೆ. ವಿಜಯಲಕ್ಷ್ಮೀ ಮನೆಯಲ್ಲಿ ಶೂ ಸಿಕ್ಕಿದ್ದರಿಂದ ಪೊಲೀಸರು ಅವರಿಗೂ ನೋಟಿಸ್ ಜಾರಿಗೊಳಿಸಿ ವಿಚಾರಣೆಗೆ ಹಾಜರಾಗಲು ಹೇಳಿದ್ದರು.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವಿಜಯಲಕ್ಷ್ಮೀ ಮನೆಯಲ್ಲಿ ಕೊಲೆ ಆರೋಪಿ ನಟ ದರ್ಶನ್ ಶೂ ಪತ್ತೆಯಾದ ಕಾರಣ ನೋಟಿಸ್ ನೀಡಿದ್ದು, ಈ ಹಿನ್ನೆಲೆಯಲ್ಲಿ ವಿಚಾರಣೆಗೆಂದು ಹಾಜರಾಗಿ ಮಾಹಿತಿ ನೀಡಿದ್ದಾರೆ. ತನಿಖಾಧಿಕಾರಿ ಮುಂದೆ ಪ್ರಕರಣದ ಬಗ್ಗೆ ಶೂಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.
ಸಿದ್ದರಾಮಯ್ಯ ಸರ್ಕಾರಕ್ಕೆ ಕಂಟಕ ಇದೆಯೇ?ಸ್ಪೋಟಕ ಭವಿಷ್ಯ ನೀಡಿದ ಕೋಡಿಮಠ ಶ್ರೀಗಳು!