BBK Season 10: ಇವರೇ ನೋಡಿ ಈ ವಾರ ಬಿಗ್ ಬಾಸ್ ನಿಂದ ಎಲಿಮಿನೇಟ್ ಆಗೋರು !!

Entertainment news bigg boss kannada season 10 Eliminate On This Week

BBK Season 10: ಬಿಗ್ ಬಾಸ್ ಸೀಸನ್ 10ರಲ್ಲಿ (BBK Season 10)ಈಗಾಗಲೇ 17 ಜನ ಸ್ಪರ್ಧಿಗಳು ಬಿಗ್‌ಬಾಸ್ ಮನೆಯೊಳಗೆ ಪಾದಾರ್ಪಣೆ ಮಾಡಿದ್ದಾರೆ. ಕರುನಾಡಿನ ನೆಚ್ಚಿನ ರಿಯಾಲಿಟಿ ಶೋ (Entertainment)ಈಗಾಗಲೇ ಆರಂಭವಾಗಿ ತಿಂಗಳುಗಳೇ ಕಳೆದಿವೆ. ಈ ವರ್ಷ ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ (Bigg Boss Kannada) ಪ್ರಸಾರ ಕಾಣುತ್ತಿದೆ. ಈ ಬಾರಿಯ ದೊಡ್ಮನೆ ಸ್ಪರ್ಧಿಗಳ ನಡುವೆ ಜಗಳ , ಗಲಾಟೆ, ಮಾತಿನ ಚಕಮಕಿ ನಡುವೆ ಆಟಗಳು ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಈ ನಡುವೆ, ಬಿಗ್ಬಾಸ್ ವಿನ್ನರ್(Bigg Boss Kannada Season 10 Winner)ಯಾರಾಗಲಿದ್ದಾರೆ ಎಂಬ ಕುತೂಹಲ ಸಹಜವಾಗಿ ಅಭಿಮಾನಿಗಳಲ್ಲಿ ಮನೆ ಮಾಡಿದೆ.

ಬಿಗ್ ಬಾಸ್ನಲ್ಲಿ ಪ್ರತಿ ವಾರ ಒಂದು ಎಲಿಮಿನೇಷನ್ ನಡೆಯಲಿದ್ದು, ಕಳೆದ ವಾರ ರಕ್ಷಕ್ ಅವರು ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದರು. ಈ ವಾರ ದೊಡ್ಮನೆಯಿಂದ ಯಾರು ಹೊರ ಹೋಗುತ್ತಾರೆ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಈ ನಡುವೆ, ಈ ವಾರ ಒಬ್ಬ ಸ್ಪರ್ಧಿ ದೊಡ್ಮನೆಯಿಂದ ಹೊರ ಹೋಗೋಕೆ ರೆಡಿ ಆಗಿದ್ದಾರಾ ಎಂಬ ಪ್ರಶ್ನೆ ಸಹಜವಾಗಿ ಅಭಿಮಾನಿಗಳನ್ನು ಕಾಡುತ್ತಿದೆ.

ಈ ವಾರ ನಾಮಿನೇಟ್ ಆದವರಲ್ಲಿ ಈಶಾನಿ, ನಮ್ರತಾ ಗೌಡ, ಸ್ನೇಹಿತ್, ನೀತು ವನಜಾಕ್ಷಿ, ವರ್ತೂರ್ ಸಂತೋಷ್, ತುಕಾಲಿ ಸಂತೋಷ್ ಹಾಗೂ ಕಾರ್ತಿಕ್ ಮಹೇಶ್ ಸೇರಿದ್ದಾರೆ. ಹೆಚ್ಚಿನ ಮಂದಿ ಈಶಾನಿ ಇಲ್ಲವೇ ನೀತು ಮನೆಯಿಂದ ಹೊರ ಬೀಳಬಹುದು ಎಂದು ಊಹಿಸುತ್ತಿದ್ದಾರೆ. ಆದರೆ, ದೊಡ್ಮನೆ ಸ್ಪರ್ಧಿಯೊಬ್ಬರ ಮಾತು ಈ ಊಹೆಯನ್ನೂ ತಲೆ ಕೆಳಗಾಗಿಸುವ ಲಕ್ಷಣಗಳನ್ನು ತೋರಿಸುತ್ತಿದೆ. ಹೌದು!!ವರ್ತೂರು ಸಂತೋಷ್(Varthur Santhosh) ತುಕಾಲಿ ಸಂತೋಷ್ ಬಳಿ ಮಾತನಾಡುತ್ತಿದ್ದ ವೇಳೆ, ‘ನಾನ್ ಬಿಡು.. ನಂಗೆ ಹೋಗೋದು ಅನಿವಾರ್ಯ ಆಗಿದೆ’ ಎಂದು ಹೇಳಿಕೊಂಡಿದ್ದು, ಇವರ ಈ ಹೇಳಿಕೆ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ದೊಡ್ಮನೆ ಆಟದ ಸಂದರ್ಭದಲ್ಲಿ ಬಿಗ್ ಬಾಸ್ ಮನೆಯಲ್ಲಿ ಇದ್ದಾಗಲೇ ಹುಲಿ ಉಗುರು ಹೊಂದಿರುವ ಪ್ರಕರಣದಲ್ಲಿ ವರ್ತೂರು ಸಂತೋಷ್ ಅವರನ್ನು ಇತ್ತೀಚಿಗೆ ಬಂಧಿಸಿದ್ದು ಗೊತ್ತಿರುವ ಸಂಗತಿ. ಜಾಮೀನು ಪಡೆದ oಹೊರ ಬಂದ ಬಳಿಕ ಕೂಡ ವರ್ತೂರ್ ಸಂತೋಷ್ ಅವರು ಮರಳಿ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಈ ನಡುವೆ, ಇವರ ಹೇಳಿಕೆ ನೋಡಿದಾಗ ಹೆಚ್ಚಿನ ಮಂದಿಗೆ ವರ್ತೂರ್ ಅವರಿಗೆ ಬಿಗ್ ಬಾಸ್ ಮನೆಯಿಂದ ಹೊರ ಬೀಳಬೇಕಾದ ಅನಿವಾರ್ಯತೆ ಎದುರಾಗಿದೆಯೇದೆಯೇ? ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತಿದೆ.

ಇದನ್ನೂ ಓದಿ: EPFO ನ ಹೊಸ ನಿರ್ಧಾರ ಪರಿಣಾಮ- ಈ ಉದ್ಯೋಗಿಗಳ ಮೊತ್ತದಲ್ಲಿ ಭಾರೀ ಕಡಿತ !!

Leave A Reply

Your email address will not be published.