CM Yogi: ಹಿಂದೆ ಗ್ಯಾಂಗ್ ಸ್ಟರ್ ಗಳು ಯುಪಿಗೆ ಅಪಾಯಕಾರಿಯಾಗಿದ್ದರು. ಈಗ ಅವರಿಗೆ ಉತ್ತರಪ್ರದೇಶ ಅಪಾಯಕರವಾಗಿದೆ – ಸಿಎಂ ಯೋಗಿ ಆದಿತ್ಯನಾಥ್

CM Yogi: ದೇಶ ಕಂಡ ಅತ್ಯಂತ ಟಫ್ ಮುಖ್ಯಮಂತ್ರಿಯಾಗಿ ಯೋಗಿ (CM Yogi) ಆದಿತ್ಯನಾಥ್ ಅವರು ಮೂಡಿ ನಿಂತಿದ್ದಾರೆ. ಉತ್ತರ ಪ್ರದೇಶ ಒಂದು ಗಲಭೆ ರಾಜ್ಯ ಎಂಬ ಕಳಂಕವನ್ನು ನಾವು ಹೋಗಲಾಡಿಸಿದ್ದೇವೆ. ಈ ಹಿಂದೆ ಗ್ಯಾಂಗ್ ಸ್ಟರ್ ಗಳು ಯುಪಿಗೆ ಅಪಾಯಕಾರಿಯಾಗಿದ್ದರು. ಆದರೆ ಈಗ ಗ್ಯಾಂಗ್ ಸ್ಟರ್ ಗಳಿಗೆ ಉತ್ತರ ಪ್ರದೇಶ ಅಪಾಯಕರವಾಗಿ ಬದಲಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೇಳಿದ್ದಾರೆ.

‘ ಉತ್ತರ ಪ್ರದೇಶವು 2017 ರ ಇಸವಿಗೆ ಮೊದಲು ಯುಪಿ ಗಲಭೆಗಳಿಗೆ ಹೆಸರುವಾಸಿಯಾಗಿತ್ತು. ಇಲ್ಲಿ 2012ರಿಂದ 17ರ ನಡುವೆ 700ಕ್ಕೂ ಹೆಚ್ಚು ಗಲಾಟೆ ಗಲಭೆಗಳು ನಡೆದಿವೆ. ಇಲ್ಲಿ ದಿನಕ್ಕೊಂದು ಗಲಭೆಗಳು ನಡೆಯುತ್ತಿತ್ತು. 2017 ರ ನಂತರ ಇಂತಹಾ ಗಲಭೆಗಳಿಗೆ ಅವಕಾಶವೇ ಇಲ್ಲ. ಈ ಹಿಂದೆ ಗ್ಯಾಂಗ್ ಸ್ಟರ್ ಗಳು ಯುಪಿಗೆ ಅಪಾಯಕಾರಿಯಾಗಿದ್ದರು. ಆದರೆ ಈಗ ಗ್ಯಾಂಗ್ ಸ್ಟರ್ ಗಳಿಗೆ ಉತ್ತರ ಪ್ರದೇಶ ಅಪಾಯಕರವಾಗಿ ಬದಲಾಗಿದೆ. ಇಂದು ಯಾವುದೇ ಅಪರಾಧಿಗಳು ಉದ್ಯಮಿಗೆ ಬೆದರಿಕೆ ಹಾಕುವ ಸಾಹಸ ಮಾಡುತ್ತಿಲ್ಲ. ಇವತ್ತು ಉತ್ತರ ಪ್ರದೇಶ ಸರ್ಕಾರವು ಎಲ್ಲಾ ಹೂಡಿಕೆದಾರರ ಬಂಡವಾಳವನ್ನು ಸುರಕ್ಷಿತವಾಗಿಡಲು ಸಮರ್ಥವಾಗಿದೆ ‘ ಎಂದವರು ಹೇಳಿದ್ದಾರೆ.

” ಈ ಹಿಂದೆ ಎಲ್ಲಿ ಕತ್ತಲು ಶುರುವಾಗುತ್ತದೆಯೋ ಅಲ್ಲಿಂದ ಉತ್ತರ ಪ್ರದೇಶ ಆರಂಭವಾಗುತ್ತದೆ ಎಂದು ಹೇಳಲಾಗುತ್ತಿತ್ತು. 75 ಜಿಲ್ಲೆಗಳ ಪೈಕಿ 71 ಜಿಲ್ಲೆಗಳು ಕತ್ತಲೆಯಲ್ಲಿದ್ದವು. ಇಂದು ಅದು ಮಾಯವಾಗಿದೆ. ಇಂದು ಉತ್ತರ ಪ್ರದೇಶದ ಹಳ್ಳಿ ಹಳ್ಳಿಗಳಲ್ಲಿ ಬೀದಿ ದೀಪಗಳು ಬೆಳಗುತ್ತಿವೆ ” ಎಂದರು ಯೋಗಿ.

ಉತ್ತರಪ್ರದೇಶ ರಾಜ್ಯವು ಕೃಷಿ ಆಧಾರಿತ ರಾಜ್ಯವಾಗಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನೆ ಅವಲಂಬಿಸಿದ್ದಾರೆ. ಉದ್ಯೋಗದ ದೃಷ್ಟಿಕೋನದಿಂದ ನೋಡಿದರೆ, ಜವಳಿ ಉದ್ಯಮವು ಹೆಚ್ಚು ಉದ್ಯೋಗ ಸೃಷ್ಟಿಸುವ ಕ್ಷೇತ್ರವಾಗಿದೆ. ಉತ್ತರ ಪ್ರದೇಶವು ಜವಳಿ ಉದ್ಯಮದ ಶ್ರೀಮಂತ ಸಂಪ್ರದಾಯವನ್ನು ಹೊಂದಿದೆ. ಇಲ್ಲಿ ವಾರಣಾಸಿ ಮತ್ತು ಅಜಂಗಢದ ರೇಷ್ಮೆ ಸೀರೆಗಳು, ಕೈಮಗ್ಗ, ಪವರ್‌ಲೂಮ್, ಲಖನೌದ ಚಿಕಂಕರಿ, ಭದೋಹಿಯ ಕಾರ್ಪೆಟ್‌ಗಳು, ಮತ್ತು ಸಹರಾನ್‌ಪುರದ ಕರಕುಶಲ ಎಲ್ಲವೂ ಜಗತ್ಪ್ರಸಿದ್ಧವಾಗಿವೆ. ಕಾನ್ಪುರ ಒಂದು ಕಾಲದಲ್ಲಿ ಜವಳಿ ಉದ್ಯಮದ ಕೇಂದ್ರವಾಗಿತ್ತು ಎಂದು ಅವರು ಹೇಳಿದರು.

ಪಿಎಂ ಮೆಗಾ ಇಂಟಿಗ್ರೇಟೆಡ್ ಟೆಕ್ಸ್‌ಟೈಲ್ ಮತ್ತು ಅಪೆರಲ್ (ಪಿಎಂ ಮಿತ್ರ) ಯೋಜನೆಯಡಿ ಲಖನೌ-ಹರ್ದೋಯ್‌ನಲ್ಲಿ 1000 ಎಕರೆ ಜವಳಿ ಪಾರ್ಕ್ ಸ್ಥಾಪನೆಗೆ ಸಂಬಂಧಿಸಿದಂತೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಯೋಗಿ ಮಾತನಾಡಿದರು.

ನಗರಗಳ ಯೋಜನೆಯ ದೃಷ್ಟಿಯಿಂದಲೂ ದೇಶದ ಪ್ರಮುಖ ರಾಜ್ಯವೆಂದು ಯುಪಿಯನ್ನು ಪರಿಗಣಿಸಲಾಗಿದೆ. ಆದರೆ ಯುಪಿಯ ಈ ಗುರುತನ್ನು ಸಂಪೂರ್ಣವಾಗಿ ನಾಶಪಡಿಸಿದ ಅವಧಿಯೂ ಬಂದಿತು. ಕೈಮಗ್ಗ ಮತ್ತು ಪವರ್‌ಲೂಮ್‌ಗೆ ಸರಿಯಾದ ಪ್ರೋತ್ಸಾಹದ ಕೊರತೆಯಿಂದಾಗಿ, ಅದು ಸಾಯಲು ಪ್ರಾರಂಭಿಸಿತು. ಪ್ರಧಾನಿ ನರೇಂದ್ರ ಮೋದಿ, ಕಳೆದ 9 ವರ್ಷಗಳಲ್ಲಿ ಅವರ ನಾಯಕತ್ವದಲ್ಲಿ ಭಾರತ ಸಾಧಿಸಿದ ಪ್ರಗತಿ, ಸುಮಾರು 6 ವರ್ಷಗಳಲ್ಲಿ, ಯುಪಿ ಗರಿಷ್ಠ ಪ್ರಯೋಜನಗಳನ್ನು ಪಡೆದುಕೊಂಡಿದೆ ಎಂದು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೇಳಿದ್ದಾರೆ.

ಇದನ್ನೂ ಓದಿ: Prathap Simha: ಸಿದ್ರಾಮಣ್ಣ ನೀವೇನಾದ್ರೂ ಬಾದಾಮಿಯಲ್ಲಿ ಹುಟ್ಟಿ, ಗೋಲಿ ಆಡ್ತಾ ಬೆಳುದ್ರಾ? ಸಿದ್ದುಗೆ ಗುದ್ದಿದ ಪ್ರತಾಪ್ ಸಿಂಹ!

Leave A Reply

Your email address will not be published.