IAS ಸುಂದರಿ ರೋಹಿಣಿ ಸಿಂಧೂರಿ ಮೇಲೆ ರೂಪಾ ಡಿ. ಕಿಡಿ ಕಾರಲು ಇರುವ ಪರ್ಸನಲ್ ಕಾರಣ ಬಹಿರಂಗ !

D Rupa and Rohini Sindhuri: ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಐಪಿಎಸ್‌ ಅಧಿಕಾರಿ ಡಿ.ರೂಪಾ ಮೌದ್ಗಿಲ್‌ (Roopa D. and Rohini sindhoori) ಜಗಳವೀಗ ಬೀದಿ ರಂಪ ಆಗಿದ್ದು, ನಿಂತು ನಿಲ್ಲದಂತೆ ಮುಂದುವರಿಯುತ್ತಲೇ. ಸದ್ಯ ಈ ವಿವಾದ ಮತ್ತೊಂದು ಸ್ವರೂಪ ಪಡೆದುಕೊಂಡಿದೆ. ಮೈಸೂರಿನ (Mysuru) ಆರ್ ಟಿಐ ಕಾರ್ಯಕರ್ತ ಗಂಗರಾಜುರ (Activist Gangaraju) ಜೊತೆ ರೂಪಾ ಮಾತಾಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಹೊಸ ಟ್ವಿಸ್ಟ್ ಸಿಕ್ಕಿದೆ. ಹಲವು ಆರೋಪಗಳನ್ನು ಮಾಡಿರುವ ಸಂಭಾಷಣೆಯ ಆಡಿಯೊ ಇದಾಗಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಇವುಗಳ ಮಧ್ಯೆ ರೂಪಾ ಡಿ ಅವರಿಗೆ ಯಾಕೆ ರೂಪಸಿ ಸಿಂಧೂರಿಯ ಮೇಲೆ ಕೋಪಾ ತಾಪ ಎನ್ನುವುದಕ್ಕೆ ಒಂದು ಕಾರಣ ಸಿಕ್ಕಿದೆ.

ಸ್ನೇಹಿತ್ರೆ, ಇವರಿಬ್ಬರ ಜಗಳ ಆರಂಭ ಆವಾಗಿನಿಂದ ಎಲ್ಲರಿಗೂ ಒಂದು ಪ್ರಶ್ನೆ ಕಾಡ್ತಾ ಇತ್ತು. ರೋಹಿಣಿಯವರು ತಪ್ಪು ಮಾಡಿರಬಹುದು. ಹೆಚ್ಚಿನ ಅಧಿಕಾರಿಗಳು ಏನಾದರೂ ಒಂದು ತಪ್ಪಲ್ಲಿ ಸಿಕ್ಕಿಬೀಳ್ತಾನೇ ಇರ್ತಾರೆ. ಆದ್ರೆ ರೂಪ ಅವ್ರು ಯಾಕೆ ಈ ವಿಚಾರವನ್ನು ಇಷ್ಟೊಂದು ವೈಭವೀಕರಿಸಿ, ಸಾಕಷ್ಟು ರೊಚ್ಚಿಗೆದ್ದು ಉಗ್ರ ಹೋರಾಟ ಮಾಡ್ತಿದ್ದಾರೆ ಎಂದು ಅನಿಸ್ತಿತ್ತು. ಆದರೀಗ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಸಿಕ್ಕಂತಾಗಿದೆ ಅನ್ಬೋದು. ಹೌದು, ಗಂಗರಾಜು ಅವರು ಬಹಿರಂಗ ಪಡಿಸಿರೋ ಆಡಿಯೋ ಈ ಇಬ್ಬರು ನಾರಿಮಣಿಯ ನಡುವಿನ ಜಟಾಪಟಿಗೆ ಕೆಲವೊಂದು ಕ್ಲಾರಿಟಿ ಕೊಡ್ತಾ ಇವೆ. ಪತಿ ಮುನೀಶ್ ಜೊತೆ, ರೂಪಸಿಯಾದ ರೋಹಿಣಿ ಕ್ಲೋಸ್ ಆಗಿರೋದಕ್ಕೆ, ರೂಪ ಈ ಸ್ವಾತಂತ್ರ ಹೋರಾಟದ ರೀತಿ ರೊಚ್ಚಿಗೆದ್ದಿದ್ದಾರೆ ಅನ್ನೋದು ಪಕ್ಕಾ ಆದಂತಾಗಿದೆ.

ಆಡಿಯೋದಲ್ಲಿ ಏನಿದೆ ಎಂದು ನೋಡುವುದಾದರೆ, ಇಲ್ಲಿ ರೂಪಾ ನೀಡಿರುವ ಒಂದು ಹೇಳಿಕೆ ನಾನಾ ಅರ್ಥ ನೀಡುತ್ತಿದೆ. ಆಯಮ್ಮನ ದೆಸೆಯಿಂದಾಗಿ ನಮ್ಮ ಕುಟುಂಬ ಚೆನ್ನಾಗಿಲ್ಲವಲ್ಲ ಈಗ? ಆ ಯಮ್ಮ ಕ್ಯಾನ್ಸರ್‌ ಇದ್ದಂಗೆ. ಎಲ್ಲರನ್ನೂ ಬುಟ್ಟಿಗೆ ಹಾಕಿಕೊಳ್ಳುತ್ತಾಳೆ. ಡಿ.ಕೆ.ರವಿ ವಿಷಯದಲ್ಲಿ ಆಗಿದ್ದೂ ಹಾಗೆನೇ. ನಮ್ಮವರ ಹಿಂದೆಯೇ ಬಿದ್ದಿದ್ದಾಳೆ. ಲೋಕಾಯುಕ್ತ ಕೇಸ್ ರಿಪ್ಲೈನೂ ಇವರತ್ತಿರಾನೇ ಬರೆಸ್ಕೊಳ್ತಾಳೆ. ನಮ್ಮ ಮನೆಯವರು, ಮನೆಯವರಿಗೆ ಗಮನವನ್ನೇ ಕೊಡುತ್ತಿಲ್ಲ’ ಅಂದ್ರೆ ಇದರಿಂದ ಸ್ಪಷ್ಟವಾಗೋದು ರೂಪಾ ಪತಿ ಮುನೀಶ್ ಮತ್ತು ರೋಹಿಣಿ ಸಿಂಧೂರಿ ಅವರು ಆಪ್ತರು. ತಮ್ಮ ಪತಿಯಿಂದ ತಮಗೆ ಬೇಕಾದ ಎಲ್ಲಾ ಭೂ ದಾಖಲೆಗಳ ಕೆಲಸಗಳನ್ನು ಸಿಂಧೂರಿ ಮಾಡಿಸಿಕೊಳ್ಳುತ್ತಿದ್ದಾರೆ ಅನ್ನುವಂತಿದೆ.

ಅದಲ್ಲದೆ ತುಂಬಾನೇ ಪರ್ಸನಲ್ ಆಗಿ ಕೂಡಾ ಆಪ್ತ ಆಗಿರುವ ಸಾಧ್ಯತೆ ಇದೆ. ಇಲ್ಲದೆ ಹೋದರೆ ‘ ಆಯಮ್ಮ ಕ್ಯಾನ್ಸರ್ ಇದ್ದಂಗೆ. ಎಲ್ಲರನ್ನೂ ಬುಟ್ಟಿಗೆ ಹಾಕಿಕೊಳ್ಳುತ್ತಾಳೆ ‘ ಅಂತ ಯಾಕೆ ಎನ್ನುತ್ತಾರೆ ? ಅಲ್ಲದೆ, ರೂಪಾ ಹೇಳಿಕೆಯಲ್ಲಿಯೇ ಸತ್ಯ ಅಡಗಿರುವ ಪ್ರಕಾರ, ರೂಪಾ ಪತಿ ಮನೆಯ ಕಡೆ ಗಮನ ಕೊಡುತ್ತಿಲ್ಲ ಅನ್ನೋ ಮಾತು ಇನ್ನೂ ಕುತೂಹಲ!

ಈ ಮೂಲಕ ಪತಿಯನ್ನು ಮತ್ತು ಮನೆಯನ್ನು ಉಳಿಸಿಕೊಳ್ಳುವ ಸಲುವಾಗಿ ರೂಪಾ ಡಿ ಅವರು ಸಾರ್ವಜನಿಕವಾಗಿ ರೋಹಿಣಿ ಸಿಂಧೂರಿ ಅವರ ಮೇಲೆ ಆಪಾದನೆಗಳನ್ನು ಮಾಡಿದ್ದಾರಾ ? ನಿಜವಾಗಿಯೂ ಓರ್ವ ಹೆಂಡತಿಯಾಗಿ, ಗಂಡನನ್ನು ಉಳಿಸಿಕೊಳ್ಳುವ ಭರದಲ್ಲಿ ರೋಹಿಣಿ ಸಿಂಧೂರಿ ಮೇಲೆ ರೂಪಾ ಅವರು ಯುದ್ಧ ಸಾರಿದ್ದು ಎನ್ನುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಇಲ್ಲದೆ ಹೋದರೆ ಅದೆಲ್ಲೋ ಕೆಲಸ ಮಾಡುವ ರೋಹಿಣಿ ಮೇಲೆ ಯಾಕೆ ಹಾರಿ ಹಾರಿ ರೂಪಾ ಬೀಳೋದು ? ಸಾಂಸಾರಿಕ ಕಾರಣವೇ ರೂಪಾ ಡಿ ಕೋಪಕ್ಕೆ ಮೂಲ ಕಾರಣ ಅನ್ನುವುದು ಖಚಿತ.

ಗಂಗರಾಜು ಮತ್ತು ರೂಪಾ ಡಿ ವೈರಲ್ ಆಡಿಯೋ!

‘ ರೂಪಾ ಡಿ ನನಗೆ ಕರೆ ಮಾಡಿ ಧಮಕಿ ಹಾಕಿದ್ದಾರೆ.ಅವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲು ಸಿದ್ಧತೆ ನಡೆಸುತ್ತಿದ್ದೇನೆ. ಅವರಿಂದ ನನಗೆ ಜೀವ ಬೆದರಿಕೆ ಇದೆ’. ತಮ್ಮ ಕೆಲಸ ಬಿಟ್ಟು ತಮ್ಮ ಪತಿಯ ಕಚೇರಿಯಲ್ಲಿ ಏನಾಗುತ್ತಿದೆ ಎನ್ನುವುದನ್ನು ನೋಡುತ್ತಾ ಕುಳಿತಿದ್ದಾರೆಯೇ? ಅವರ ಕೆಲಸ ಬಿಟ್ಟು ಬೇರೆ ಕೆಲಸ ಮಾಡುತ್ತಿದ್ದಾರೆಯೇ. ಪತ್ತೇದಾರಿಕೆ ಮಾಡುತ್ತಿದ್ದಾರೆಯೇ? – ಎಂದು ಗಂಗರಾಜು ಅವರು ಕೇಳಿದ್ದಾರೆ.

ಈ ಮೂಲಕ ರೂಪಾ ಡಿ ಮತ್ತು ರೋಹಿಣಿ ಸಿಂಧೂರಿ ಜಗಳದ ಮಧ್ಯೆ ಬಂದು ನಿಂತವರು ರೂಪಾ ಪತಿ ಮುನೀಶ್ ಮೌಡ್ಗಿಲ್. ಮುನೇಶ್ ಅವರು ಕೂಡಾ ಹಿರಿಯ ಅಧಿಕಾರಿ. ರೋಹಿಣಿ ಸಿಂಧೂರಿ ಅವರು ಮುನೀಶ್ ಅವರಿಗೆ ಆಗಾಗ ಕರೆ ಮಾಡಿ ತಮಗೆ ಅಗತ್ಯ ಕೆಲಸ ಮಾಡಿಸಿಕೊಳುತ್ತಿದ್ದಾರೆ ಎನ್ನುವುದು ರೂಪಾ ದೂರು. ಗಂಗರಾಜು ಅನ್ನುವವರ ಮೂಲಕ ಸಿಂಧೂರಿ ಎಲ್ಲಾ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ ಎನ್ನುವುದು ರೂಪಾ ಡಿ ಯವರ ಆಪಾದನೆ. ಅದಕ್ಕೆ ಸಂಬಂಧಪಟ್ಟ ಚಾಟ್ ಆಡಿಯೋ ಈಗ ವೈರಲ್ ಆಗಿದೆ. ಅದರ ಒಕ್ಕಣೆ ಇಂತಿದೆ.

ರೂಪ ಹೇಳಿಕೆ : ನಮ್ಮ ಮನೆಯವರು ಭೂದಾಖಲೆಗಳ ಆಯುಕ್ತರಾದ್ದರಿಂದ ಭೂಮಿಗೆ ಸಂಬಂಧಿಸಿದ ಮಾಹಿತಿ ಕೇಳುತ್ತಲೇ ಇರುತ್ತಾಳೆ. ಕಬಿನಿಯಲ್ಲಿ 4 ಪಹಣಿ ಹಾಕಿದ್ದಾರೆ, ಇದನ್ನು ತಗೊಬಹುದಾ, ಈ ಲ್ಯಾಂಡ್ ಸರಿ ಇದೆಯೇ ಎಂದು ಕೇಳಿದ್ದಾರೆ. ಇನ್ನೊಂದರಲ್ಲಿ ಪೋಡಿ ಆಗಬೇಕು ಎಂದು ಕಳುಹಿಸಿದ್ದಾರೆ. ಈ ರೀತಿ ಹಲವು ಭೂಮಿ ತೆಗೆದುಕೊಳ್ಳುವ ಬಗ್ಗೆ ಕೇಳಿದ್ದಾರೆ. ವ್ಯಾಜ್ಯವಿರುವ ಭೂಮಿಯನ್ನೂ ತಗೊಂಡಿದ್ದಾರೆ. ನಮ್ಮ ಮನೆಯವರನ್ನು ಅಲ್ಲಿಂದ ವರ್ಗಾಯಿಸುವಂತೆ ಕೇಳಿಕೊಂಡಿದ್ದೇನೆ. ನೀನು ಆ ಕಚೇರಿಯಿಂದ ಎದ್ದು ಹೋಗು.

ಮುಂದುವರಿದು, ರೂಪಾ ಆಕೆ ನಿನ್ನನ್ನು ಕಳುಹಿಸುತ್ತಾಳೆ. ಇವರ ಹತ್ತಿರ ಬಂದು ನೀವು ಕೆಲಸ ಮಾಡಿಸಿಕೊಳ್ತಿರಾ ಪಿಂಪ್‌ ಥರ. ಬೇಕಿದ್ದರೆ ಇದನ್ನೆಲ್ಲಾ ರೆಕಾರ್ಡೂ ಮಾಡ್ಕೊಳಿ. ಸಾರ್ವಜನಿಕವಾಗಿಯೂ ಹಾಕ್ಕೊಳಿ. ಸಿಂಧೂರಿ ಎನ್ನುವವಳು ಎಷ್ಟು ಮನೆ ಕೆಡಿಸಿದ್ದಾಳೆ, ತನ್ನ ಗಂಡನ ರಿಯಲ್‌ ಎಸ್ಟೇಟ್‌ ಬ್ಯುಸಿನೆಸ್‌ ಪ್ರಮೋಟ್ ಮಾಡೋಕೆ ಅದೆಷ್ಟು ಭೂ ದಾಖಲಾತಿಗಳಿಗೆ ಸಂಬಂಧಿಸಿದಂತೆ ನಮ್ಮ ಮನೆಯವರಿಂದ ಮಾಹಿತಿ ಕಲೆಕ್ಟ್‌ ಮಾಡಿದ್ದಾಳೆ ಎನ್ನುವುದು ಎಲ್ಲರಿಗೂ ಗೊತ್ತಾಗಲಿ. ನೀವೂ ಸಹಕರಿಸಿದ್ದೀರ, ದುಡ್ಡು ಮಾಡ್ಕೊಂಡಿದ್ದೀರಿ ಎಂದು ನಾನೂ ಹೇಳುತ್ತೇನೆ.

‘ಆಯಮ್ಮನ ದೆಸೆಯಿಂದಾಗಿ ನಮ್ಮ ಕುಟುಂಬ ಚೆನ್ನಾಗಿಲ್ಲವಲ್ಲ ಈಗ? ಆಯಮ್ಮ ಕ್ಯಾನ್ಸರ್‌ ಇದ್ದಂಗೆ. ಎಲ್ಲರನ್ನೂ ಬುಟ್ಟಿಗೆ ಹಾಕಿಕೊಳ್ಳುತ್ತಾಳೆ. ಡಿ.ಕೆ.ರವಿ ವಿಷಯದಲ್ಲಿ ಆಗಿದ್ದೂ ಹಾಗೆನೇ. ನಮ್ಮವರ ಹಿಂದೆಯೇ ಬಿದ್ದಿದ್ದಾಳೆ. ಲೋಕಾಯುಕ್ತ ಕೇಸ್ ರಿಪ್ಲೈನೂ ಇವರ ಹತ್ತಿರಾನೇ ಬರೆಸ್ಕೊಳ್ತಾಳೆ. ನಮ್ಮ ಮನೆಯವರು, ಮನೆಯವರಿಗೆ ಗಮನವನ್ನೇ ಕೊಡುತ್ತಿಲ್ಲ.”

‘ರೂಪಾ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಎಲ್ಲ ಪೋಟೊಗಳನ್ನು, ಚಾಟ್‌ಗಳನ್ನು ನನಗೂ ಕಳಿಸಿದ್ದರು. ಅಧಿಕಾರದ ವ್ಯಾಪ್ತಿ ಮೀರಿ ನನ್ನನ್ನು ಪ್ರಶ್ನಿಸಿದರು. ಫೋಟೊಗಳನ್ನೆನ್ನಾ ಮಾಧ್ಯಮಕ್ಕೆ ಬಿಡುಗಡೆ ಮಾಡು, ರೋಹಿಣಿ ವಿರುದ್ಧ ಹೋರಾಡು ಎಂದೆಲ್ಲಾ ಒತ್ತಡವನ್ನೂ ಹಾಕಿದ್ದರು’ ಎಂದು ಗಂಗರಾಜು ದೂರಿದ್ದಾರೆ

25 ನಿಮಿಷಗಳ ಆ ಆಡಿಯೊದಲ್ಲಿ ಇನ್ನೇನಿದೆ?

‘ಸರ್ಕಾರಿ ಆಸ್ತಿಯನ್ನು ಲೂಟಿ ಹೊಡೆಯುತ್ತಿದ್ದಾರೆ ಎಂದು ದೂರು ಸಲ್ಲಿಸಿದ್ದೇನೆಯೇ ಹೊರತು, ವೈಯಕ್ತಿಕ ಕೆಲಸಗಳಿಗೆ ಹೋಗಿಲ್ಲ’ ಎಂದು ಗಂಗರಾಜು ಹೇಳಿದ್ದಾರೆ.

ಅದಕ್ಕೆ ಪ್ರತಿಕ್ರಿಯಿಸಿದ ರೂಪಾ, ‘ಆಯಮ್ಮ ಸಾ.ರಾ.ಮಹೇಶ್‌ ಹತ್ತಿರ ಹೋಗಿ, ಪ್ರಕರಣ ವಾಪಸ್ ಪಡೆದುಕೊಳ್ಳುವಂತೆ ಬೆಗ್ ಮಾಡಿದ್ದಾರೆ. ಎಚ್‌.ಡಿ.ಕುಮಾರಸ್ವಾಮಿ, ದೇವೇಗೌಡರ ಬಳಿ ಹೋಗಿ ಬೇಡಿಕೊಂಡಿದ್ದಾರೆ. ಐಎಎಸ್‌ ಅಧಿಕಾರಿಗಳ ಮೂಲಕವೂ ಹೇಳಿಸಿದ್ದಾರೆ. ಸಾ.ರಾ.ಮಹೇಶ್ ವಾಪಸ್ ತಗೊಂಡಿಲ್ಲ. ಆಕೆ ಈಗ ಬೆಂಗಳೂರಿನ ಜಾಲಹಳ್ಳಿಯಲ್ಲಿ ಮನೆ ಕಟ್ಟಿಸುತ್ತಿದ್ದಾರೆ. ಬಾಗಿಲಿನ ಹಿಂದೆ ಹಾಕುವ ಒಂದು ಹಿಂಜಿಗೆ 6 ಲಕ್ಷ ರೂಪಾಯಿ ವೆಚ್ಚ ಮಾಡುತ್ತಾರೆಂದರೆ ಅಷ್ಟೊಂದು ದುಡ್ಡು ಎಲ್ಲಿಂದ ಬರುತ್ತಿದೆ? ₹ 26 ಲಕ್ಷ ಕಿಚನ್‌ ಅಪ್ಲೈಯನ್ಸ್‌ ಜರ್ಮನಿಯಿಂದ ತರಿಸುತ್ತಿದ್ದಾರೆ. ಡ್ಯೂಟಿ ಫ್ರೀ ಮಾಡಿಸಲು ಪ್ರಯತ್ನಿಸುತ್ತಿರುವ ಬಗ್ಗೆ ಚಾಟ್‌ ಮಾಡಿರುವುದು ಸಿಕ್ಕಿದೆ. ಫರ್ನಿಚರ್‌ ಕೋಟ್ಯಂತರ ರೂಪಾಯಿಯದ್ದು ಹಾಕಿಸುತ್ತಿದ್ದಾರೆ. ಆ ಚಾಟ್ಸ್‌ ಎಲ್ಲವನ್ನೂ ಕಳುಹಿಸುತ್ತೇನೆ. ಅದನ್ನು ನೋಡಿ, ನೀವು ಯಾರ ಪರ ನಿಂತಿದ್ದೀರಾ ನಿರ್ಧರಿಸಿ ಗಂಗರಾಜು ರೂಪಾ ಅವರು ಎಂದು ಕೇಳಿದ್ದಾರೆ.

ಸಿಂಧೂರಿ ತಮ್ಮ ಪತಿಯ ಅಣ್ಣನನ್ನು ರಾಜಕೀಯಕ್ಕೆ ತರಲು ಯತ್ನಿಸುತ್ತಿದ್ದಾರೆ. ಜಿಎನ್‌ಆರ್‌ ಪ್ರತಿಷ್ಠಾನ ಮಾಡಿಕೊಂಡು ನಿರ್ಮಲಾನಂದನಾಥ ಸ್ವಾಮೀಜಿ, ಚಕ್ರವರ್ತಿ ಸೂಲಿಬೆಲೆ ಕರೆದು ಕಾರ್ಯಕ್ರಮ ಮಾಡಿದ್ದಾರೆ. ನಾನೇ ಸ್ವಾಮೀಜಿ, ಚಕ್ರವರ್ತಿಯನ್ನೆಲ್ಲಾ ಕರೆಸಿದ್ದು, ‘ಕಾರ್ಯಕ್ರಮಕ್ಕೆ ಹಾಜರಾಗಬೇಕಾ?’ ಎಂದು ನಮ್ಮ ಮನೆಯವರನ್ನು ಕೇಳಿದ್ದಳು. ಫೌಂಡೇಶನ್‌ ಉದ್ದೇಶ ಸದ್ಯಕ್ಕೆ ಚಾರಿಟಿ ಅನ್ನೋದು ಹೆಸರಿಗೆ. ಅಂತಿಮವಾಗಿ ರಾಜಕೀಯಕ್ಕೆ ಬರಬೇಕು; ಬಿಜೆಪಿ ಟಿಕೆಟ್‌ ತೆಗೆದುಕೊಳ್ಳಬೇಕು ಎನ್ನುವುದೇ ಆಗಿದೆ ಎಂದು ಹೇಳಿದ್ದಾಳೆ. ಇಂಥ ಡೋಂಗಿಗಳು, ಊಸರವಳ್ಳಿಗಳನ್ನು ನೀವೇಕೆ ಸಪೋರ್ಟ್‌ ಮಾಡುತ್ತೀರಿ? ಎಂದು ಗಂಗರಾಜು ಅವರನ್ನು ರೂಪಾ ಜಾಡಿಸಿದ್ದಾರೆ.

ಗಂಗರಾಜು, ನಾನು ಸಪೋರ್ಟ್ ಮಾಡುತ್ತಿಲ್ಲ. ದಾಖಲೆ ಸಿಕ್ಕರೆ ಅವರ ವಿರುದ್ಧವೂ ಮಾತನಾಡುತ್ತೇನೆ ಎಂದು ಸಮಜಾಯಿಷಿ ನೀಡಿದ್ದಾರೆ. ಈಗ ಚಾಟ್ ಬಹಿರಂಗ ಆಗಿದೆ. ಅದರ ಜತೆ ರೋಹಿಣಿ ಮತ್ತು ರೂಪಾ ಜಗಳಕ್ಕೆ ಮೂಲ ಕಾರಣ ರೂಪಾ ಪತಿ ಅನ್ನುವುದು ಬಹಿರಂಗವಾಗಿದೆ.

Leave A Reply

Your email address will not be published.