ಮಂಗಳೂರು ಗಾಂಜಾ ಘಾಟು ದಂಧೆ ಪ್ರಕರಣ : ಬಂಧನಗೊಂಡವರ ಸಂಖ್ಯೆ 24ಕ್ಕೆ ಏರಿಕೆ

ಮಂಗಳೂರಿನಲ್ಲಿ ಗಾಂಜಾ ಘಾಟು ದಂಧೆ ಪ್ರಕರಣ ಸಂಬಂಧ ಮತ್ತೆ ಇಬ್ಬರು ವೈದ್ಯರು ಸೇರಿದಂತೆ 7 ವೈದ್ಯಕೀಯ ವಿದ್ಯಾರ್ಥಿಗಳ ಬಂಧನ ಮಾಡಲಾಗಿದೆ. ಈವರೆಗೆ ಬಂಧಿತರ ಸಂಖ್ಯೆ 24 ಏರಿಕೆಯಾಗಿದೆ.

ಶ್ರೀನಿವಾಸ ಆಸ್ಪತ್ರೆಯ ವೈದ್ಯ ಸಿದ್ದಾರ್ಥ್‌ ಪವಸ್ಕರ್‌ ಹಾಗೂ ದುರ್ಗಾ ಸಂಜೀವಿನಿ ಆಸ್ಪತ್ರೆಯ ವೈದ್ಯ ಸುಧೀಂದ್ರ ಬಂಧನ ಮಾಡಲಾಗಿದೆ. ಕೆಎಂಸಿ ಮೆಡಿಕಲ್‌ ಕಾಲೇಜಿನ 7 ವಿದ್ಯಾರ್ಥಿಗಳ ಬಂಧನವಾಗಿದ್ದು, ಯುಪಿ ಮೂಲದ ಡಾ.ವಿದುಶ್‌ ಕುಮಾರ್‌, ಡಾ.ಇಶ್‌ ಮಿದ್ದ, ಕೇರಳದ ಡಾ ಸೂರ್ಯಜಿತ್‌ ದೇವ್‌, ಡಾ ಆಯೇಷಾ ಮೊಹಮದ್‌, ತೆಲಂಗಾಣ ಡಾ ಪ್ರಣಯ್‌ ನಟರಾಜ್‌, ಡಾ.ಚೇತನಾ ಹಾಗೂ ದೆಹಲಿ ವಿದ್ಯಾರ್ಥಿನಿ ಶರಣ್ಯ ಎಂದು ತಿಳಿಯಲಾಗಿದೆ. ಗಾಂಜಾ ಕೇಸ್‌ ನಲ್ಲಿ ಈವರೆಗೆ ಬಂಧಿತರ ಸಂಖ್ಯೆ 24 ಏರಿಕೆಯಾಗಿದೆ.

Leave A Reply

Your email address will not be published.