ಮಂಗಳೂರು | ಮಿಥುನ್ ರೈ ಅವರಿಂದ ಅಟೋ ಚಾಲಕರಿಗೆ ಅಕ್ಕಿ ವಿತರಣೆ

ಮಂಗಳೂರು, ಮೇ 25: ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮಿಥುನ್ ರೈ ಬಲ್ಮಠದಲ್ಲಿರುವ ವಿಲ್ಲೀಸ್ ರಿಕ್ಷಾ ಪಾರ್ಕ್ ನಲ್ಲಿರುವ 50 ಮಂದಿ ಆಟೋ ಚಾಲಕರಿಗೆ ಅಕ್ಕಿ ವಿತರಿಸಿದರು.

ಕೊರೊನಾ ಲಾಕ್ ಡೌನ್ ನಿಂದಾಗಿ ಆಟೋ ಚಾಲಕರು ಸಂಕಷ್ಟದಲ್ಲಿದ್ದಾರೆ. ಇದನ್ನು ಮನಗಂಡು ಮಿಥುನ್ ರೈ ಅವರು ಈ ಕಾರ್ಯ ಕೈಗೊಂಡಿದ್ದಾರೆ ಎನ್ನಲಾಗಿದೆ.

ಈ ಸಂದರ್ಭದಲ್ಲಿ ಮಂಗಳೂರು ಮಹಾ ನಗರ ಪಾಲಿಕೆ ಸದಸ್ಯರಾದ ನವೀನ ಡಿಸೋಜ , ಅನಿಲ್ ಕುಮಾರ್ ಪಂಜಿಮೊಗಲರು ಉಪಸ್ಥಿತರಿದ್ದರು.

ವರದಿ: VIDYA Art Creations
ಹರೀಶ್ ಪುತ್ತೂರು

Leave A Reply

Your email address will not be published.