ಬಂಟ್ವಾಳ : ಬೈಕ್ ‌ಗೆ ಲಾರಿ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಸಾವು

ಬಂಟ್ವಾಳ;ಬೈಕ್ ಗೆ ಈಚರ್ ಲಾರಿ ಢಿಕ್ಕಿ‌ ಹೊಡೆದ ಪರಿಣಾಮ‌ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬಂಟ್ವಾಳ ಕೊಯಿಲ‌ ಎಂಬಲ್ಲಿ ನಡೆದಿದೆ.

ಮಂಗಳೂರಿನ ತೆಂಕ ಮಿಜಾರು ನಿವಾಸಿ ದಿನೇಶ್ ಸೇಮಿತ ಮೃತ ದುರ್ದೈವಿ. ದಿನೇಶ್ ಬೈಕ್ ನಲ್ಲಿ ಮೂಡಬಿದ್ರೆ ಕಡೆಯಿಂದ ಬಂಟ್ವಾಳದ ಕಡೆ ಹೋಗುವಾಗ ಬಿಸಿ‌ರೋಡಿನಿಂದ ಬಂದ ಲಾರಿ‌ ಢಿಕ್ಕಿ‌ ಹೊಡೆದಿದೆ. ಅಪಘಾತದ ರಭಸಕ್ಕೆ ರಸ್ತೆಗೆಸೆಯಲ್ಪಟ್ಟು ದಿನೇಶ್ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ‌ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ದಿನೇಶ್

ಸ್ಥಳಕ್ಕೆ ಮೆಲ್ಕಾರ್ ಪೊಲೀಸರು ತೆರಳಿ ಪರಿಶೀಲನೆ‌ ನಡೆಸಿದ್ದಾರೆ. ಅಪಘಾತದ ರಭಸಕ್ಕೆ ಬೈಕ್ ಗೆ ಕೂಡ ಹಾನಿಯಾಗಿದೆ.

Leave A Reply

Your email address will not be published.