Home latest ದಕ್ಷಿಣ ಕನ್ನಡ | ಮತ್ತೊಮ್ಮೆ ಮುಂದುವರಿದ ರಾತ್ರಿ ನಿರ್ಬಂಧ

ದಕ್ಷಿಣ ಕನ್ನಡ | ಮತ್ತೊಮ್ಮೆ ಮುಂದುವರಿದ ರಾತ್ರಿ ನಿರ್ಬಂಧ

Hindu neighbor gifts plot of land

Hindu neighbour gifts land to Muslim journalist

ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಮತ್ತೆ ನಿರ್ಬಂಧ ಮುಂದುವರಿಸಲಾಗಿದೆ. ರಾತ್ರಿಯ ನಿರ್ಬಂಧ ಮತ್ತೆ ಎರಡನೆಯ ಬಾರಿ ಮುಂದುವರಿಕೆ ಆಗುತ್ತಿದೆ. ಇನ್ನೂ 2 ದಿನಗಳ ಕಾಲ ( ಅಂದರೆ ಆ.3 ಮತ್ತು 4 ರಂದು) ರಾತ್ರಿ ನಿರ್ಬಂಧವನ್ನು ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.

ದ.ಕ. ಜಿಲ್ಲಾಧಿಕಾರಿ ಈ ಆದೇಶ ಮಾಡಿದ್ದಾರೆ. ಈ ಹಿನ್ನೆಲೆ ಆ.5 ರ ಬೆಳಗ್ಗೆ 6 ವರೆಗೆ ನಿರ್ಬಂಧ ಮುಂದುವರಿಯಲಿದೆ.

ಇತ್ತೀಚಿಗೆ ಬೆಳ್ಳಾರೆ ಮತ್ತು ಸುರತ್ಕಲ್‌ನಲ್ಲಿ ನಡೆದ ಕೊಲೆ ಕೃತ್ಯದ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಸಂಜೆ 6 ರಿಂದ ಮುಂಜಾನೆ 6 ರವರೆಗೆ ತುರ್ತು ಸೇವೆಯನ್ನು ಹೊರತುಪಡಿಸಿ ಇತರ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿತ್ತು. ಆ ನಿರ್ಬಂಧ ಇವತ್ತಿಗೆ ಮುಕ್ತಾಯ ಆಗಿತ್ತು, ಈಗ ಅದು ಮತ್ತೆ ಎರಡು ದಿನ ಮುಂದುವರಿದಿದೆ.