ಆಟದಲ್ಲಿ ಕಳ್ಳನಾಗಿದ್ದ ಬಾಲಕನಿಗೆ ನಿಜವಾಗಿ ಗುಂಡು ಹಾರಿಸಿ ಕೊಂದೇ ಬಿಟ್ಟ ಪೊಲೀಸ್!

Share the Article

ಕಳ್ಳ ಪೊಲೀಸ್ ಆಟವಾಡುತ್ತಿದ್ದಾಗ ಕಳ್ಳನ ಪಾತ್ರದಲ್ಲಿದ್ದ ಪಕ್ಕದ ಮನೆಯ ಬಾಲಕನನ್ನು ಬಿಜೆಪಿ ಮುಖಂಡನ ಮಗ ನಿಜವಾಗಿ ಗುಂಡು ಹಾರಿಸಿ ಕೊಂದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜಯ್​ ಜೈಸ್ವಾಲ್​ ಅವರ 10 ವರ್ಷದ ಮಗ ನೆರೆ ಮನೆಯ ಮಕ್ಕಳೊಂದಿಗೆ ಕಳ್ಳ ಪೊಲೀಸ್​ ಆಟವಾಡುತ್ತಿದ್ದ. ಈ ಆಟದಲ್ಲಿ ಬಾಲಕ ಪೊಲೀಸ್​ ಆಗಿದ್ದ. ಆಟದಲ್ಲಿ ಕಳ್ಳತನ ಮಾಡಲು ನೆರೆಮನೆಯ ಮಕ್ಕಳು ಬಂದಿದ್ದರು. ಅವರನ್ನು ಹೊಡೆದು ಓಡಿಸುವಾಗ ಏನೂ ಅರಿಯದ ಬಾಲಕ ಅಪ್ಪನ ಪರವಾನಗಿ ಇರುವ ಗನ್​ ತಂದಿದ್ದಾನೆ. ಬಳಿಕ ಕಳ್ಳರಾಗಿದ್ದ ಮಕ್ಕಳ ಮೇಲೆ ಹಾರಿಸಿದ್ದಾನೆ.

ಈ ಘಟನೆಯಲ್ಲಿ ಓರ್ವ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ. ಅರಿವಿಲ್ಲದೆ ಮಕ್ಕಳು ಮಾಡಿದ ತಪ್ಪಿಗೆ ಪುಟ್ಟ ಬಾಲಕನ ಪ್ರಾಣ ಕಳೆದುಕೊಂಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

Leave A Reply