Home Interesting ರಾಜ್ಯದ ಎಲ್ಲಾ ಜಿಲ್ಲೆಗಳ ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್!!

ರಾಜ್ಯದ ಎಲ್ಲಾ ಜಿಲ್ಲೆಗಳ ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್!!

Hindu neighbor gifts plot of land

Hindu neighbour gifts land to Muslim journalist

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ವಾಹನ ಸವಾರರಿಗೆ, ಮನೆಗೆ ದಂಡದ ನೋಟಿಸ್ ಕಳುಹಿಸುವ ರೂಲ್ಸ್ ಇದುವರೆಗೆ ರಾಜ್ಯರಾಜಧಾನಿಯಲ್ಲಿ ಮಾತ್ರ ಇತ್ತು. ಇದೀಗ ರಾಜ್ಯದ್ಯಂತ ಈ ನಿಯಮ ಜಾರಿಗೊಳಿಸಲಾಗುತ್ತಿದೆ.

ಹೌದು. ರಾಜ್ಯದ ಎಲ್ಲಾ ಜಿಲ್ಲೆಗಳ ವಾಹನ ಸವಾರರು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೇ, ಸಾಕ್ಷ್ಯ ಸಹಿತ ಮನೆಗೆ ನೋಟಿಸ್ ಕಳಿಸುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ. ಟ್ರಾಫಿಕ್ ಎನ್ಫೋರ್ಸ್ ಮ್ಯಾನೇಜ್ಮೆಂಟ್ ಸೆಂಟರ್ ಅನ್ನು, ಈಗ ರಾಯಚೂರು ಬಳಿಕ, ಕೊಪ್ಪಳದಲ್ಲಿಯೂ ಅನುಷ್ಠಾನಗೊಳಿಸಲಾಗಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯ ಜನರು ಸಂಚಾರ ನಿಯಮ ಉಲ್ಲಂಘಿಸಿದರೆ, ಪೋಟೋ ಸಹಿತ ಮನೆಗೆ ನೋಟಿಸ್ ನೀಡಲಾಗುತ್ತಿದೆ.

ಇನ್ನೂ ಸಂಚಾರ ನಿಯಮ ಉಲ್ಲಂಘನೆಯ ಈ ನೋಟಿಸ್ ತಲುಪಿದ ನಂತರ, ದಂಡವನ್ನು ವಾಹನ ಮಾಲೀಕರು ಕಟ್ಟಬೇಕಾಗಿದೆ. ಒಂದು ವೇಳೆ ಕಟ್ಟದೇ ಇದ್ದಲ್ಲಿ, ಮೋಟಾರು ವಾಹನ ಕಾಯ್ದೆ ಅನುಸಾರ, ಪೊಲೀಸರು ಅಂತಹ ವಾಹನಗಳ ಮಾಲೀಕರ ವಿರುದ್ಧ ಚಾರ್ಜ್ ಶೀಟ್ ಹಾಕಲಿದ್ದಾರೆ.