ಬೆಳ್ತಂಗಡಿ: ಮೂಳೆ ತಜ್ಞ ಡೋಂಗ್ರೆ ಇದ್ದ ಕಾರು- ಜೀಪು ನಡುವೆ ಅಪಘಾತ !!

ಬೆಳ್ತಂಗಡಿಯ ಖ್ಯಾತ ಮೂಳೆ ತಜ್ಞರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ.

ಬೆಳ್ತಂಗಡಿಯ ಖ್ಯಾತ ಮೂಳೆ ತಜ್ಞ ಡೊಂಗ್ರೆ ಇವರು ಕೆಲಸ ಮುಗಿಸಿ ಕಾರಿನಲ್ಲಿ ಮನೆಗೆ ತೆರಳುತ್ತಿದ್ದರು. ಆ ವೇಳೆಯಲ್ಲಿ ಎದುರಿನಿಂದ ವೇಗವಾಗಿ ಬಂದ ಜೀಪು ಡಿಕ್ಕಿ ಹೊಡೆದಿದೆ. ಈ ಘಟನೆಯು ಇದೀಗ ಗುರುವಾರ ಸಂಜೆ ನಡೆದಿದ್ದು ಘಟನೆಯು ಬೆಳ್ತಂಗಡಿಯ ಸಂತೆಕಟ್ಟೆ ಬಳಿ ನಡೆದಿದೆ.

ವೈದ್ಯರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಅಪಘಾತದ ತೀವ್ರತೆಗೆ ಕಾರು ನುಜ್ಜುಗುಜ್ಜಾಗಿದೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

Leave A Reply

Your email address will not be published.