Home ದಕ್ಷಿಣ ಕನ್ನಡ ಬೆಳ್ತಂಗಡಿ: ಪತ್ನಿ ತವರು ಮನೆಗೆ ತೆರಳಿದ್ದ ವೇಳೆ ಪತಿ ನಾಪತ್ತೆ, ದೂರು ದಾಖಲು

ಬೆಳ್ತಂಗಡಿ: ಪತ್ನಿ ತವರು ಮನೆಗೆ ತೆರಳಿದ್ದ ವೇಳೆ ಪತಿ ನಾಪತ್ತೆ, ದೂರು ದಾಖಲು

Hindu neighbor gifts plot of land

Hindu neighbour gifts land to Muslim journalist

ಪತ್ನಿ ತವರು ಮನೆಗೆ ಹೋಗಿದ್ದ ಸಂದರ್ಭದಲ್ಲಿ ಗಂಡ ಮನೆಯಿಂದ ನಾಪತ್ತೆಯಾದ ಘಟನೆ ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಸುನ್ನತ್ ಕೆರೆ ಎಂಬಲ್ಲಿ ನಡೆದಿದೆ.

ನಾಪತ್ತೆಯಾದ ವ್ಯಕ್ತಿ ಸಂಶುದ್ದೀನ್.ಪಿ(35) ಎಂದು ತಿಳಿದುಬಂದಿದೆ.

ಎರಡು ಗಂಡು ಮಕ್ಕಳೊಂದಿಗೆ ಸುನ್ನತ್ ಕೆರೆ ಎಂಬಲ್ಲಿ ವಾಸವಿರುವ ಸಂಶುದ್ದೀನ್ ಪಿ, ಅವರ ಪತ್ನಿ ಫಾತಿಮಾ ಸುಮಾರು ಎರಡು ತಿಂಗಳ ಹಿಂದೆ ತನ್ನ ತವರು ಮನೆಗೆ ಹೋಗಿದ್ದು, ಪ್ರತಿ ದಿನ ಮೊಬೈಲ್ ನಲ್ಲಿ ಮಾತನಾಡಿಕೊಂಡಿದ್ದರು. ಡಿ.18 ರಂದು ಗಂಡನು ಯಾವುದೇ ಕರೆ ಮಾಡದಿದ್ದಾಗ ಫಾತಿಮಾ ಸ್ವಲ್ಪ ಗಾಬರಿಗೊಂಡರು. ಅವರು ಗಂಡನಿಗೆ ಮರುದಿನ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು.

ಸಂಶಯಗೊಂಡು ಗಂಡನ ಮನೆಯಾದ ಕುವೆಟ್ಟು ಗ್ರಾಮದ ಸುನ್ನತ್ ಕೆರೆಗೆ ಬಂದಾಗ ಮನೆಗೆ ಬೀಗ ಹಾಕಿರುವುದು ಕಂಡು ಬಂದಿದೆ. ಬೀಗ ತೆಗೆದು ಮನೆ ಒಳಗೆ ನೋಡಿದಾಗ ಮನೆಯಲ್ಲಿ ಕೆಲವು ವಸ್ತುಗಳು ಕಾಣೆಯಾಗಿದೆ.

ಅಲ್ಲದೇ ಸಂಶುದ್ದೀನನು ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿದ್ದು, ಇದುವರೆಗೆ ಫೋನ್ ಮಾಡದೇ, ವಾಪಾಸು ಮನೆಗೂ ಬಾರದೇ, ಸಂಬಂಧಿಕರ ಮನೆಗೂ ಹೋಗದೇ ನಾಪತ್ತೆಯಾಗಿರುತ್ತಾನೆ ಎಂದು ಪತ್ನಿ ಫಾತಿಮಾರವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.