Mangaluru: ಬೈಕ್‌ಗೆ ಕಾರು ಡಿಕ್ಕಿ; ಬೆಳ್ತಂಗಡಿ ನಿವಾಸಿ ವಿದ್ಯಾರ್ಥಿ ಸಾವು

Mangaluru: ಸೋಮವಾರ ರಾತ್ರಿ ಬೈಕ್‌ಗೆ ಕಾರು ಡಿಕ್ಕಿಯಾಗಿದ್ದು, ಈ ದುರ್ಘಟನೆಯಲ್ಲಿ ತೀವ್ರಗಾಯಗೊಂಡ ಕಾಲೇಜು ವಿದ್ಯಾರ್ಥಿಯೋರ್ವ ಮೃತ ಹೊಂದಿದ ಘಟನೆಯೊಂದು ನಡೆದಿದೆ. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 73 ರ ಅಡ್ಯಾರ್‌ ಸಹ್ಯಾದ್ರಿ ಕಾಲೇಜಿನ ಎದುರು ಈ ಘಟನೆ ನಡೆದಿತ್ತು.

ಸಾವ್ಯೊ ಮಹೇಶ್‌ (20) ಮೃತಪಟ್ಟ ವಿದ್ಯಾರ್ಥಿ. ಇವರು ಸಹ್ಯಾದ್ರಿ ಕಾಲೇಜಿನ ರೊಬೊಟಿಕ್‌ ವಿಭಾಗದ ವಿದ್ಯಾರ್ಥಿಯಾಗಿದ್ದು, ಬೆಳ್ತಂಗಡಿ ನಿವಾಸಿಯಾಗಿದ್ದರು.

ಇದನ್ನೂ ಓದಿ: Mangaluru: ಉಳ್ಳಾಲದ ವೈದ್ಯ ಯುವತಿ ಪಿಜಿಯಲ್ಲಿ ಸಾವು

ವಿದ್ಯಾರ್ಥಿ ಪ್ರಣಮ್‌ ಶೆಟ್ಟಿಯೊಂದಿಗೆ ಬೈಕಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಬಿಸಿರೋಡ್‌ ಕಡೆಯಿಂದ ಬಂದ ಕಾರೊಂದು ಡಿಕ್ಕಿ ಹೊಡೆದಿದ್ದು, ಪರಿಣಾಮ ಮಹೇಶ್‌ ಸಾವು ಕಂಡಿದ್ದು, ಪ್ರಣಮ್‌ ಗಾಯಗೊಂಡಿದ್ದಾನೆ.

ಟ್ಯೂಷನ್‌ ಮುಗಿಸಿ ತಮ್ಮ ಮನೆಗೆ ಹಿಂದಿರುಗುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕಾಲೇಜು ಎದುರಿನ ಡಿವೈಡರ್‌ ಬಳಿ ಯು ಟರ್ನ್‌ ಪಡೆದು ಮುಂದಕ್ಕೆ ಹೋಗುವಾಗ ಕಾರು ಡಿಕ್ಕಿ ಹೊಡೆದಿದೆ.

ಇದನ್ನೂ ಓದಿ: Vastu Tips: ಮನೆಯ ಶೌಚಾಲಯಕ್ಕೂ ಇದೆ ವಾಸ್ತು, ಫಾಲೋ ಮಾಡಿಲ್ಲ ಅಂದ್ರೆ ಅಪಾಯ ಪಕ್ಕಾ!

Leave A Reply

Your email address will not be published.