Dakshina Kannada (Vitla): ಇಸ್ಪೀಟ್‌ ಆಟ- ಪೊಲೀಸರ ದಾಳಿ, ನಾಲ್ವರು ವಶ

Dakshina Kannada (Vitla): ಜೂಜಾಟ ಆಡುತ್ತಿದ್ದ ನಾಲ್ವರನ್ನು ವಿಟ್ಲ ಠಾಣೆ ಪೊಲೀಸರು ಬಂಧಿಸಿರುವ ಘಟನೆಯೊಂದು ನಡೆದಿದೆ. ಮಾ.10 ರಂದು ಇಸ್ಪೀಟ್‌ ಎಲೆಗಳನ್ನು ಬಳಸಿ ಆಡುತ್ತಿದ್ದ, ಧರ್ಮರಾಜ್‌, ಗೋಪಾಲ ಯಾನೆ ಚಂದ್ರಶೇಖರ, ವಲಿತ್‌ ಕೆ ಮತ್ತು ಖಲಂದರ್‌ ಶಾಫಿ ಬಂಧಿತರು.

ಇದನ್ನೂ ಓದಿ: Rameshwaram Blast Case: ರಾಮೇಶ್ವರಂ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ರೋಚಕ ಟ್ವಿಸ್ಟ್- ಬಾಂಬ್ ಇಟ್ಟವನು ತೀರ್ಥಹಳ್ಳಿಯ ಈ ವ್ಯಕ್ತಿ!!

ಬಂಟ್ವಾಳ ತಾಲೂಕು ವಿಟ್ಲ ಕಸಬ ಗ್ರಾಮದ, ನೆಕ್ಕರೆ ಕಾಡು ಎಂಬಲ್ಲಿರುವ ಕಲ್ಲಿನಕೋರೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಈ ಜೂಜಾಟ ಆಡುತ್ತಿದ್ದಾಗ ವಿಟ್ಲ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ. ಅಂದರ್-ಬಾಹರ್‌ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದರೆಂದು ವರದಿಯಾಗಿದೆ.

ದಾಳಿ ಮಾಡಿದ ಸಂದರ್ಭದಲ್ಲಿ ಸ್ಥಳದಲ್ಲಿ ಬಳಸಿದಿ, ನಗದು, ಇಸ್ಪಿಟ್‌ ಎಲೆಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Leave A Reply

Your email address will not be published.