Yadgiri News: ಶವ ಹೂಳ್ತಿದ್ದ ಸ್ಮಶಾನ ಧ್ವಂಸ; ಮುಸಲ್ಮಾನರ ಭಾವನೆಗೆ ಧಕ್ಕೆ, ದೂರು ದಾಖಲು!!!

Yadgiri News: ನೂರಾರು ವರ್ಷಗಳಿಂದ ಶವ ಹೂಳುತ್ತಿದ್ದ ಸ್ಮಶಾನ ಜಾಗವನ್ನು ತನ್ನದೆಂದು ವ್ಯಕ್ತಿಯೊಬ್ಬರು ಹೇಳಿದ ಘಟನೆಯೊಂದು ಯಾದಗಿರಿ ತಾಲೂಕಿನ ರಾಮಸಮುದ್ರ ಗ್ರಾಮದಲ್ಲಿ ನಡೆದಿದೆ.

ಈ ಸ್ಮಶಾನ ಜಾಗದಲ್ಲಿ ಮುಸಲ್ಮಾನರು ಮೃತ ವ್ಯಕ್ತಿಗಳನ್ನು ಹೂಳುತ್ತಿದ್ದರು. ಇದೀಗ ಈ ಜಾಗವನ್ನು ಪಂಪನಗೌಡ ಕುಟುಂಬಸ್ಥರು ದಾನವಾಗಿ ನೀಡಿದ್ದರೆಂದು ಹೇಳಲಾಗಿದೆ. ಆದರೆ ಇದೀಗ ಈ ಜಮೀನಿನ ಬೇಡಿಕೆ ಹೆಚ್ಚಾಗಿರುವ ಕಾರಣ ವಾಪಸ್‌ ಜಮೀನು ಪಡೆಯಲು ಪಂಪನಗೌಡ ಬಂದಿದ್ದಾರೆ.

ಇದನ್ನು ಓದಿ: Bengaluru News: ಮೆಟ್ರೋನಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾತ್ರ ಮಾಡಬೇಡಿ, ಎಚ್ಚರ!

ಮುಸ್ಲಿಂರು ನೂರಾರು ವರ್ಷಗಳಿಂದ ಹೂಳ್ತಿದ್ದ ಜಾಗಕ್ಕೆ ಇದೀಗ ಜೆಸಿಬಿ ಮೂಲಕ ಗೋರಿಗಳನ್ನು ಧ್ವಂಸಗೊಳಿಸಿರುವುದನ್ನು ಕಂಡು ಮುಸ್ಲಿಂ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ. ನಮ್ಮ ಧಾರ್ಮಿಕ ಭಾವನೆಗಳಿಗೆ ಪಂಪನಗೌಡ ಧಕ್ಕೆ ಮಾಡಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ಯಾದಗಿರಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.