Drought Relief Fund:ಬೆಳ್ಳಂಬೆಳಗ್ಗೆಯೇ ರೈತರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ – ಈ ವಾರವೇ ಖಾತೆಗೆ ಬರುತ್ತೆ ಬರ ಪರಿಹಾರ ಹಣ !! ಬೇಗ ಈ ಕೆಲಸ ಮಾಡಿ

Karnataka news agriculture news drought relief fund to be credited to account this week

Drought Relief Fund: ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ(Drought Relief) ಉಂಟಾಗಿರುವ ಹಿನ್ನೆಲೆಯಲ್ಲಿ ಸಂತ್ರಸ್ತ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ(State Government)ಕೇಂದ್ರ ಸರ್ಕಾರ 17,901 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದೆ.

ಈ ನಡುವೆ , ರಾಜ್ಯ ಸರ್ಕಾರ ಬರದಿಂದ ತತ್ತರಿಸಿರುವ ರೈತರಿಗೆ ಸಿಹಿಸುದ್ದಿ ನೀಡಿದೆ. ಈ ವಾರವೇ ರೈತರಿಗೆ (Farmers)ಬರ ಪರಿಹಾರದ ಹಣವನ್ನು ಡಿಬಿಟಿ ಮೂಲಕ ಪಾವತಿ ಮಾಡಲಾಗುವ ಕುರಿತು ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದಾರೆ. ರಾಜ್ಯದ ರೈತರಿಗೆ ಈ ವಾರವೇ ನಗದು ನೇರ ವರ್ಗಾವಣೆ(DBT)ಮೂಲಕ ಬರ ಪರಿಹಾರವನ್ನು (Drought Relief Fund) ಪಾವತಿ ಮಾಡಲಾಗುವ ಕುರಿತು ಸಚಿವರು ಮಾಹಿತಿ ನೀಡಿದ್ದಾರೆ. ಬರದಿಂದ 48 ಲಕ್ಷ ಹೆಕ್ಟೇರ್‌ ನಲ್ಲಿನ ಬೆಳೆ ಹಾನಿಯಾಗಿದ್ದು, ಸರ್ಕಾರದಿಂದ ಮೊದಲ ಕಂತಾಗಿ 2,000 ರೂ. ಪರಿಹಾರ ನೀಡಲಾಗುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಇದನ್ನೂ ಓದಿ: Rama mandir worshiper: ಅಯೋಧ್ಯೆಯ ಶ್ರೀ ರಾಮನ ಪೂಜೆಗೆ ಅರ್ಚಕನಾಗಿ ವಿದ್ಯಾರ್ಥಿ ನೇಮಕ – 3,000 ಪುರೋಹಿತರನ್ನು ಮೀರಿಸಿ ಈತ ಆಯ್ಕೆಯಾಗಿದ್ದೇ ರೋಚಕ !!

Leave A Reply

Your email address will not be published.