Cricket World cup: ಭಾರತ ವರ್ಲ್ಡ್ ಕಪ್ ಸೋಲಲು ಅಮಿತಾಬ್ ಬಚ್ಚನ್ ಕಾರಣ ?!

Sports news reason for India losing world cup is because Amitabh bachchan

Cricket World cup: ಭಾರತೀಯರ ಹತ್ತಾರು ವರ್ಷಗಳ ಕನಸು ಕೊನೆಗೂ ನನಸಾಗಲಿಲ್ಲ. ಹೌದು, ಇಡೀ ವಿಶ್ವವೇ ಎದುರು ನೋಡುತ್ತಿದ್ದ ಕ್ರಿಕೆಟ್ ವಿಶ್ವಕಪ್(Cricket World cup) ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋಲುಂಡಿದೆ. ಇದರಿಂದಾಗಿ ಅನೇಕ ಕ್ರಿಕೆಟ್ ಪ್ರಿಯರು ಕಣ್ಣುಗಳೂ ಒದ್ದೆಯಾಗಿದ್ದುಂಟು. ಆದರೆ ಇದೀಗ ಈ ಸೋಲಿಗೆ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ಕಾರಣ ಎಂಬ ಸ್ವರವೊಂದು ಕೇಳಿಬರುತ್ತಿದೆ.

ಮೊನ್ನೆ ಮೊನ್ನೆ ತಾನೆ ಗುಜರಾತ್(Gujarath) ನ ನರೇಂದ್ರ ಮೋದಿ ಸ್ಟೇಟಿಯಂನಲ್ಲಿ ನಡೆದ ಕ್ರಿಕೆಟ್ ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ಎದುರು ಭಾರತ ಪರಾಭಾವಗೊಂಡಿದೆ. ಒಂದು ರೀತಾಯಲ್ಲಿ ಇದು ಭಾರತೀಯರಿಗೆ ನೋವಿನ ಸಂಗತಿ. ಆದರೂ ರೋಹಿತ್ ಶರ್ಮ ನೇತೃತ್ವದ ತಂಡಕ್ಕೆ ಎಲ್ಲರೂ ಸಪೋರ್ಟ್ ಮಾಡುತ್ತಿದ್ದಾರೆ. ಈ ನಡುವೆ ನಟ ಅಮಿತಾಭ್​ ಬಚ್ಚನ್​ ಸಕತ್​ ಸುದ್ದಿಯಾಗುತ್ತಿದ್ದು ಭಾರತ ತಂಡವು ಫೈನಲ್​ನಲ್ಲಿ ಸೋಲಲು ನಟ ಅಮಿತಾಭ್​ ಬಚ್ಚನ್​(Amithab bacchan) ಅವರೇ ಕಾರಣ ಎಂಬ ಸುದ್ದಿಯೊಂದು ಕೇಳಿಬರುತ್ತಿದೆ.

ಹೌದು, ಆಸ್ಟ್ರೇಲಿಯಾ ಎದುರು ಭಾರತ ಸೋಲಲು ನಟ ಅಮಿತಾಬ್ ಬಚ್ಚನ್ ಕಾರಣ ಎಂದು ಕೆಲವು ಕ್ರಿಕೆಟ್​ ಪ್ರೇಮಿಗಳು ನಟನ ಕಾಲೆಳೆಯುತ್ತಿದ್ದಾರೆ. ಅಷ್ಟಕ್ಕೂ ಕ್ರಿಕೆಟ್​ ವಿಶ್ವಕಪ್​ ಗೆಲಲ್ಲು ಭಾರತ ವಿಫಲವಾಗಿರುವುದಕ್ಕೂ, ನಟ ಅಮಿತಾಭ್​ ಬಚ್ಚನ್​ ಅವರಿಗೂ ಏನು ಕಾರಣ ಎಂದು ಅಚ್ಚರಿಯಾಗಬಹುದು. ಅಲ್ಲದೆ ಕ್ರಿಕೆಟ್ ಆರಂಭಕ್ಕೂ ಮುನ್ನ ಕೆಲ ದಿನಗಳ ಹಿಂದೆ ಹಲವು ಅಭಿಮಾನಿಗಳು ಅಮಿತಾಬ್ ದಯವಿಟ್ಟು ನೀವು ಈ ಸಲದ ವರ್ಡ್ ಕಪ್ ಮ್ಯಾಚ್ ನೋಡಬೇಡಿ ಎಂದು ಮನವಿ ಮಾಡಿದ್ರು. ಹಾಗಿದ್ರೆ ಈ ಬಾಲಿವುಡ್ ಬಿಗ್’ಬಿ ಗೂ ಕ್ರಿಕೆಟ್ ಮ್ಯಾಚ್ ಗೂ ಏನು ಸಂಬಂಧ?!

ಅಂದಹಾಗೆ ನ.15ರಂದು ಅಮಿತಾಭ್​ ತಮ್ಮ ಎಕ್ಸ್​ (ಈ ಹಿಂದೆ ಟ್ವಿಟರ್​) ಖಾತೆಯಲ್ಲಿ ಪೋಸ್ಟ್​ ಒಂದನ್ನು ಹಂಚಿಕೊಂಡಿದ್ದರು. ನಾನು ವೀಕ್ಷಣೆ ಮಾಡದ ಪಂದ್ಯಗಳನ್ನೆಲ್ಲ ಭಾರತ ಗೆದ್ದಿದೆ ಎಂದಿದ್ದರು. ಅದಕ್ಕೆ ಅಭಿಮಾನಿಗಳು ಈ ಸಲ ದಯವಿಟ್ಟು ವಿಶ್ವಕಪ್ ನೋಡಬೇಡಿ ಎಂದು ಮನವಿ ಮಾಡಿದ್ದರು. ನಂತರ ಮತ್ತೊಂದು ಪೋಸ್ಟ್​ ಶೇರ್​ ಮಾಡಿದ ಅಮಿತಾಭ್​, ಫೈನಲ್​ ಪಂದ್ಯ ನೋಡಲು ಹೋಗಬೇಕೋ ಬೇಡವೋ? ಎಂದು ಬರೆದುಕೊಂಡಿದ್ದರು. ಅಮಿತಾಭ್​ ಪೋಸ್ಟ್​ಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದ್ದು, ಬಹುತೇಕರು ಫೈನಲ್​ ಪಂದ್ಯಕ್ಕೆ ಹೋಗದಂತೆ ಬಾಲಿವುಡ್​ ಸಿನಿಮಾ ದಿಗ್ಗಜನ ಬಳಿ ಮನವಿ ಮಾಡಿದ್ದಲ್ಲದೆ ದಯವಿಟ್ಟು ಹೋಗಬೇಡಿ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದರು.

ಆದರೆ ಅಮಿತಾಭ್​ ಅವರು ವಿಶ್ವಕಪ್ ಮ್ಯಾಚ್​ ನೋಡಿದ್ದಾರೆ. ಭಾರತ ಸೋಲುತ್ತಿದ್ದಂತೆ ಈ ಬಗ್ಗೆ ನೋವನ್ನು ತೋಡಿಕೊಂಡಿದ್ದರು. ಜೊತೆಗೆ ಭಾರತ ಸರ್ವ ಪ್ರಯತ್ನ ಮಾಡಿ ಫೈನಲ್​ ತಲುಪಿರುವಕ್ಕೆ ಹೆಮ್ಮೆ ಎನ್ನಿಸುತ್ತದೆ ಎಂದಿದ್ದರು. ಆದರೆ ಕಾಕತಾಳೀಯ ಎನ್ನುವಂತೆ ಅಮಿತಾಭ್​ ಅವರು ಮ್ಯಾಚ್​ ನೋಡಿದಾಗಲೇ ಭಾರತ ಸೋಲನ್ನು ಅನುಭವಿಸಿದ್ದು, ಅದಕ್ಕೆ ನೀವೇ ಕಾರಣ ಎಂದು ಫ್ಯಾನ್ಸ್​ ನಟನ ಕಾಲೆಳೆಯುತ್ತಿದ್ದಾರೆ.

ಇದನ್ನೂ ಓದಿ: Yuva Nidhi: ಕಾಂಗ್ರೆಸ್ ಸರ್ಕಾರದ 5ನೇ ಗ್ಯಾರಂಟಿ ಯುವನಿಧಿ ಜಾರಿಗೆ ದಿನಾಂಕ ಫಿಕ್ಸ್ !!

1 Comment
  1. e-commerce says

    Wow, fantastic weblog format! How long have you been running a blog for?
    you made blogging glance easy. The total glance of your site is fantastic, let alone
    the content material! You can see similar here najlepszy sklep

Leave A Reply

Your email address will not be published.