Nail Cutting: ಕಟ್ ಮಾಡೋ ನಿಮ್ಮ ಉಗುರನ್ನು ಈ ಜಾಗದಲ್ಲಿ ಹಾಕಿ – ದುಷ್ಟ ಶಕ್ತಿ ದೂರಾಗುವುದಲ್ಲದೆ ಅದೃಷ್ಟ ಲಕ್ಷ್ಮೀಯೂ ಮನೆ ಪ್ರವೇಶಿಸುತ್ತಾಳೆ

Nail Cutting: ಬಹುತೇಕರು ಉಗುರು ತೆಗೆಯುವ ವಿಚಾರದಲ್ಲಿ ಅಸಡ್ಡೆ ಹೊಂದಿರುತ್ತಾರೆ. ಅಂದರೆ ಇಷ್ಟ ಬಂದ ಸಮಯಕ್ಕೆ, ಎಲ್ಲೆಂದರಲ್ಲಿ ಉಗುರು ತೆಗೆದು (Nail Cutting) ಎಸೆದು ಬಿಡುತ್ತಾರೆ. ಆದರೆ ಈ ರೀತಿ ಉಗುರು ತೆಗೆದು ಎಸೆಯುವುದು ತಪ್ಪು. ಯಾಕೆಂದರೆ ಭೂತಪ್ರೇತ ಕಾಟದಿಂದ ಬಳಲುತ್ತಿದ್ದರೆ ಅಥವಾ ರಾಹು-ಕೇತು ದೋಷದಿಂದ ಮುಕ್ತಿಯನ್ನು ಹೊಂದಬೇಕೆಂದರೆ ಉಗುರು ತೆಗೆಯುವಾಗ ಕೆಲವು ಕ್ರಮಗಳನ್ನು ಅನುಸರಿಸಬೇಕು.

ಅದಕ್ಕಾಗಿ ಮೊದಲಿಗೆ ಕೈಯಲ್ಲಿರುವ ಹತ್ತು ಬೆರಳುಗಳ ಉಗುರು ಹಾಗೂ ಕಾಲಲ್ಲಿರುವ ಹತ್ತು ಬೆರಳುಗಳ ಉಗುರನ್ನು ರವಿವಾರದ ದಿನದಂದು ತೆಗೆಯಬೇಕು. ಈ ರೀತಿ ಉಗುರನ್ನು ಕತ್ತರಿಸಿದ ನಂತರ ಸ್ವಲ್ಪ ಕಾಲ ಅಥವಾ ಸಮಯ ನೀರಿನಲ್ಲಿ ಹಾಕಬೇಕು, ಇವುಗಳನ್ನು ಕತ್ತರಿಸಲು ಯಾರಿಗಾದರೂ ಬೇರೆಯವರಿಗೆ ಹೇಳಬೇಕು ಅದನ್ನು ಬಿಟ್ಟು ನೀವು ತೆಗೆಯಬಾರದು. ಈ ರೀತಿ ಉಗುರನ್ನು ಕತ್ತರಿಸಿದ ನಂತರ 20 ಬಾರಿ ಮುಖದ ಮೇಲಿನಿಂದ ಇಳಿ ತೆಗೆಯಬೇಕು. ಈ ರೀತಿ ಇಳಿ ತೆಗೆದನಂತರ ಬೆಂಕಿಯಲ್ಲಿ ಹಾಕಿ ಬಸ್ಮ ಮಾಡುವಂತೆ ಬೇರೆಯವರಿಗೆ ಹೇಳಬೇಕು.

ಈ ರೀತಿ ಮಾಡುವುದರಿಂದ ನಿಮ್ಮ ಮೇಲೆ ಯಾರಾದರೂ ತಂತ್ರ ಪ್ರಯೋಗ ಮಾಡಿದ್ದರೆ ಅಥವಾ ಆರೋಗ್ಯ ಸಮಸ್ಯೆಗಳು ಇದ್ದರೆ ಅಥವಾ ಹಣದ ಸಮಸ್ಯೆ ಕಾಡುತ್ತಿದ್ದರೂ ಕೂಡಾ ನಿವಾರಣೆಯಾಗಿ ಅದೃಷ್ಟ ಲಕ್ಷ್ಮೀಯೂ ಮನೆ ಪ್ರವೇಶಿಸುತ್ತಾಳೆ ಎನ್ನಲಾಗಿದೆ.

Leave A Reply

Your email address will not be published.