ಪ್ರೀತಿಗಾಗಿ ಹರಿದ ನೆತ್ತರು : ಪ್ರೀತಿ ನಿರಾಕರಿಸಿದ ಯುವತಿಯನ್ನು ಚೂರಿಯಿಂದ ಇರಿದು ಹತ್ಯೆ

Bengaluru crime : ಬೆಂಗಳೂರು: ಪ್ರೀತಿ ನಿರಾಕರಿಸಿದಳೆಂದು ಯುವಕನೋರ್ವ ಚೂರಿಯಿಂದ ಇರಿದು ಯುವತಿಯನ್ನು ಹತ್ಯೆ ಮಾಡಿರುವ ಘಟನೆಯ ಬಗ್ಗೆ ವರದಿಯಾಗಿದೆ

ಈ ಘಟನೆ ಬೆಂಗಳೂರು ನಗರದ ಜೀವನ್ ಭೀಮಾ ನಗರ ಠಾಣೆ ವ್ಯಾಪ್ತಿಯ ವಿಂಡ್ ಟನಲ್ ರಸ್ತೆಯಲ್ಲಿ ಮಂಗಳವಾರ ನಡೆದಿದೆ.

ಲೀಲಾ ಪವಿತ್ರ ಎಂಬಾಕೆಯೇ ಚೂರಿ ಇರಿತಕ್ಕೊಳಗಾಗಿ (Bengaluru crime) ಮೃತಪಟ್ಟ ಯುವತಿ.ದಿವಾಕರ್ ಎಂಬಾತ ಕೊಲೆ ಮಾಡಿದ ಭಗ್ನಪ್ರೇಮಿ.

ದಿವಾಕರ್ ,ಲೀಲಾ ಪವಿತ್ರ ಅವರಲ್ಲಿ ಪ್ರೀತಿಸುವಂತೆ ದುಂಬಾಲು ಬೀಳುತ್ತಿದ್ದು,ಆಕೆ ಆತನ ಪ್ರೀತಿ ನಿರಾಕರಿಸಿದ್ದಳು.ಈ ಕಾರಣಕ್ಕೆ ಆತ ಆಕೆಯನ್ನು ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.

ಇವರಿಬ್ಬರೂ ಆಂಧ್ರ ಪ್ರದೇಶ ಮೂಲದವರಾಗಿದ್ದಾರೆ ಎಂದು ತಿಳಿದು ಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವನ್ ಭೀಮಾ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ದಿವಾಕರ್‌ನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

Leave A Reply

Your email address will not be published.