BBK9 : ದೊಡ್ಮನೆಯಿಂದ ಅರುಣ್ ಸಾಗರ್ ಎಲಿಮಿನೇಟೆಡ್!

ಬಿಗ್ ಬಾಸ್ 9 ಸೀಸನ್ ನಿಂದ ಅಮೂಲ್ಯ ಗೌಡ ಹೊರಬಂದರು. ಇದಾದ ಬಳಿಕವೇ ಹೊರಬಂದ ಮತ್ತೊಬ್ಬ ಸ್ಪರ್ಧಿ ಅರುಣ್ ಸಾಗರ್. ಎಸ್, ನವೀನರಲ್ಲಿ ಒಬ್ಬರು ಅವರ ಬಂದ ಕೂಡಲೇ ಪ್ರವೀಣರಲ್ಲಿ ಒಬ್ಬರಾದ ಅರುಣ್ ಸಾಗರ್ ಹೊರ ಬಂದಿದ್ದಾರೆ.

ಈ ಹಿಂದಿನ ಸೀಸನ್ ನಲ್ಲಿ ರನ್ನರ್ ಅಪ್ ಆಗಿದ್ರು ಅರುಣ್ ಸಾಗರ್. ಈ ಸೀಸನ್ ನಲ್ಲಿ ಪ್ರತಿಯೊಬ್ಬರಿಗೂ ಬೆನ್ನೆಲುಬಾಗಿ, ಪ್ರತಿಯೊಂದು ಘಟನೆಗಳನ್ನು ಸಂತೋಷದಿಂದ ಪಡೆದುಕೊಳ್ಳುತ್ತಾ ದಿನಗಳನ್ನು ಕಳೆಯುತ್ತಾ, ಮನೆಯಲ್ಲಿರುವವರಿಗೂ ಸಂತೋಷ ಪಡಿಸುತ್ತಿದ್ದರು.

ಮೊದಲ ಸೀಸನ್ ಕಿಂತ ಈ ಸೀಸನ್ ನಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ತನಗೆ ಅದೆಷ್ಟೇ ನೋವಾಗಿದ್ದರು ಕೂಡ ಇನ್ನೊಬ್ಬರನ್ನು ನಗಿಸುತ್ತಾ ಇದ್ದವರು ಇವರು. ಗೊಂಬೆ ಆಟಗಳನ್ನು ಆಡುತ್ತಾ, ಹೊಟ್ಟೆ ಹುಣ್ಣಾಗಿಸುವ ವೇಷಗಳನ್ನು ಧರಿಸುತ್ತಿದ್ದರು. ಒಟ್ನಲ್ಲಿ ಸಕ್ಕತ್ ಸ್ಪರ್ಧೆ ಅಂತ ಹೇಳಬಹುದು.

ಈ ಬಾರಿ ಆದ್ರೂ ವಿನ್ ಆಗಬಹುದಾ ಅಂತ ಎಲ್ಲರಿಗೂ ಪ್ರಶ್ನೆ ಇತ್ತು. ಆದರೆ ಟಾಪ್ 5 ಗೆ ಕೂಡ ಬರಲು ಅಸಾಧ್ಯ ಆಯ್ತು ಅರುಣ್ ಸಾಗರ್ ಗೆ. ಆದ್ರೂ ಅವರು ಎಲ್ಲರನ್ನು ರಂಜಿಸಿ ಮನವನ್ನು ಗೆದ್ದಿದ್ದಾರೆ. ಅರುಣ್ ಸಾಗರ್ ಮನೆಯಿಂದ ಹೊರ ಹೋಗಿರುವುದು ಬೇಸರದ ಸಂಗತಿ ಅಂತ ಹೇಳಿದ್ರು ತಪ್ಪಾಗಲಾರದು.

Leave A Reply

Your email address will not be published.