ಬೈಕ್‌ ಟ್ಯಾಂಕರ್‌ ಭೀಕರ ಅಪಘಾತ | ಬೈಕಿನಲ್ಲಿದ್ದ ಮೂವರ ದಾರುಣ ಸಾವು

ಬೈಕಿಗೆ ಟ್ಯಾಂಕರ್‌ ಡಿಕ್ಕಿಯಾದ ಭೀಕರ ಘಟನೆಯೊಂದು ಚಿತ್ರದುರ್ಗದಲ್ಲಿ ನಡೆದಿದೆ. ಈ ಭೀಕರ ಅಪಘಾತದಲ್ಲಿ ಬೈಕಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತರಾಗಿದ್ದಾರೆ. ಈ ಘಟನೆ ಶನಿವಾರ ರಾತ್ರಿ ಸಂಭವಿಸಿದ್ದು, ಕೈನಡು ಗ್ರಾಮದಲ್ಲಿ ನಡೆದಿದೆ.

ಕೈನಡು ಗ್ರಾಮದ ಉಜ್ಜೀರಪ್ಪ (38), ರವಿಕುಮಾರ್ (29), ಗಿರೀಶ್ (23) ಮೃತಪಟ್ಟ ವ್ಯಕ್ತಿಗಳು. ನಿನ್ನೆ ತಡರಾತ್ರಿ ಹೊಸದುರ್ಗದಿಂದ ಕೈನಡು ಗ್ರಾಮಕ್ಕೆ ತೆರಳುವ ಸಂದರ್ಭ ಈ ಅಪಘಾತ ಸಂಭವಿಸಿದ್ದು, ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.