ಬಾಳೆಹಣ್ಣು ರಸಾಯನಕ್ಕೆ ಚಳಿಗಾಲದಲ್ಲಿ ಯಾಕಿಷ್ಟು ಮಹತ್ವ!

ಚಳಿಗಾಲದಲ್ಲಿ ಆರೋಗ್ಯ ಏರುಪೇರು ಆಗುವುದು ಸಹಜ ಆಗಿದೆ. ಹೌದು ನಾವು ಯಾವ ಆಹಾರ ಸೇವಿಸಿದರೆ ಉತ್ತಮ ಎನ್ನುವುದು ಊಹಿಸಲು ಸಾಧ್ಯವಿಲ್ಲ. ಆಹಾರದಲ್ಲಿ ಯಾವ ಆಹಾರವನ್ನು ಯಾವ ರೀತಿಯಾಗಿ ಸೇವಿಸಬೇಕು ಎನ್ನುವ ಕುತೂಹಲ ಸಹ ಇದ್ದೇ ಇರುತ್ತದೆ. ಆದರೆ ನಿಮಗೆ ಗೊತ್ತೇ ಬಾಳೆಹಣ್ಣು ರಸಾಯನ ಚಳಿಗಾಲದಲ್ಲಿ ವಿಶೇಷ ಆರೋಗ್ಯ ಲಾಭಗಳನ್ನು ನೀಡುವ ಗುಣವನ್ನು ಹೊಂದಿದೆ. ಏಕೆಂದರೆ ಇದರಲ್ಲಿ ಬಳಸುವ ಅನೇಕ ಆಹಾರ ಪದಾರ್ಥಗಳು ಚಳಿಗಾಲಕ್ಕೆ ಸೂಕ್ತವಾಗಿ ಇರುತ್ತವೆ.

ಬಾಳೆಹಣ್ಣು ರಸಾಯನ ಮಾಡಲು ಇನ್ನೂ ಸುಲಭ. ಹೌದು ಸಾಮಾನ್ಯವಾಗಿ ಬಾಳೆಹಣ್ಣು ರಸಾಯನ ತಯಾರಿಸಲು ಏಲಕ್ಕಿ ಬಾಳೆ ಅಥವಾ ಪಚ್ಚ ಬಾಳೆಹಣ್ಣನ್ನು ಉಪಯೋಗಿಸುತ್ತಾರೆ ಎಂಬುದು ನಮಗೆ ಗೊತ್ತಿದೆ ಆದರೆ ಪ್ರಸ್ತುತ ಚಳಿಗಾಲ ಆಗಿರುವುದರಿಂದ ಏಲಕ್ಕಿ ಬಾಳೆಹಣ್ಣು ಆಯ್ಕೆ ಮಾಡಬೇಕು. ಜೊತೆಗೆ ಹಾಲು, ಬೆಲ್ಲ, ಏಲಕ್ಕಿ, ಕೊಬ್ಬರಿ ತುರಿ ಎಲ್ಲವೂ ಬೆರೆಸಬೇಕು.

ಬಾಳೆಹಣ್ಣು ರಸಾಯನದಲ್ಲಿ ಇರುವ ಪ್ರತಿಯೊಂದು ಆಹಾರದ ವಸ್ತುವು ಕೂಡ ನಮ್ಮ ಆರೋಗ್ಯಕ್ಕೆ ಅತ್ಯುತ್ತಮ ಪ್ರಯೋಜನಗಳನ್ನು ನೀಡುತ್ತದೆ.

ಬಾಳೆಹಣ್ಣು ರಸಾಯನದಲ್ಲಿ ಬಳಸುವ ಸಾಮಗ್ರಿಯ ಗುಣಗಳು ಹಲವಾರು ಇವೆ. ಅವುಗಳೆಂದರೆ

  • ಹಾಲು : ಕ್ಯಾಲ್ಸಿಯಂ, ವಿಟಮಿನ್ ಬಿ12, ವಿಟಮಿನ್ ಡಿ, ಪೊಟ್ಯಾಶಿಯಂ ಇವುಗಳ ಪ್ರಮಾಣ ಹಾಲಿನಲ್ಲಿ ಹೇರಳವಾಗಿದೆ. ನಾವು ತಿನ್ನುವ ಆಹಾರದಲ್ಲಿ ಸಿಗದೇ ವಂಚಿತವಾಗಿರುವ ಅನೇಕ ಪೌಷ್ಟಿಕ ಸತ್ವಗಳು ಹಾಲಿನಲ್ಲಿ ಸಿಗುತ್ತವೆ. ದೇಹದ ಶಕ್ತಿಗೆ ಕಾರಣವಾಗುವ ಪ್ರೋಟೀನ್ ಹಾಲಿನಲ್ಲಿ ಹೇರಳವಾಗಿ ಕಂಡುಬರುತ್ತದೆ. ಫಾಸ್ಫರಸ್ ಇರುವುದರಿಂದ ಮೂಳೆಗಳಿಗೆ ಬಲ ಕೊಡುತ್ತದೆ ಮತ್ತು ಚಳಿಗಾಲದಲ್ಲಿ ಎದುರಾಗುವ ಮೂಳೆಗಳ ತೊಂದರೆಗಳನ್ನು ಸರಿಪಡಿಸುತ್ತದೆ. ರಕ್ತದ ಒತ್ತಡವನ್ನು ಸಹ ನಿರ್ವಹಣೆ ಮಾಡುತ್ತದೆ. ರಕ್ತ ಸಂಚಲನವನ್ನು ಸರಿಯಾಗಿ ಮಾಡುತ್ತದೆ.
  • ಏಲಕ್ಕಿ :ಏಲಕ್ಕಿ ಬಾಳೆಹಣ್ಣಿನಲ್ಲಿ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ಅನೇಕ ಬಗೆಯ ಪೌಷ್ಟಿಕ ಸತ್ವಗಳು ಸಿಗುತ್ತವೆ. ಅದರಲ್ಲೂ ವಿಶೇಷವಾಗಿ ಚಳಿಗಾಲದಲ್ಲಿ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡುವ ವಿಟಮಿನ್ ಸಿ ಪ್ರಮಾಣ ಇದರಲ್ಲಿ ಹೆಚ್ಚಾಗಿದೆ. ಜೊತೆಗೆ ಪೊಟ್ಯಾಶಿಯಂ ಅಂಶ ಕೂಡ ಇರುತ್ತದೆ. ವ್ಯಾಯಾಮ ಮಾಡುವವರಿಗೆ ಏಲಕ್ಕಿ ಬಾಳೆಹಣ್ಣು ತುಂಬಾ ಒಳ್ಳೆಯದು. ಚಳಿಗಾಲದಲ್ಲಿ ಎದುರಾಗುವ ಮಲಬದ್ಧತೆ ಸಮಸ್ಯೆ ನಿವಾರಣೆ ಮಾಡುತ್ತದೆ.
    ಏಲಕ್ಕಿ ತನ್ನಲ್ಲಿ ಆಂಟಿ ಇಂಪ್ಲಾಮೆಟರಿ ಮತ್ತು ಆಂಟಿ ಮೈಕ್ರೋಬಿಯಲ್ ಗುಣಲಕ್ಷಣಗಳನ್ನು ಅಪಾರವಾಗಿ ಹೊಂದಿದೆ. ಬಾಯಿಯ ದುರ್ವಾಸನೆ ಇರುವವರು ಆಗಾಗ ಏಲಕ್ಕಿ ತಿನ್ನುವುದು ಒಳ್ಳೆಯದು.
    ಇದರಲ್ಲಿ ಕ್ಯಾನ್ಸರ್ ನಿವಾರಕ ಗುಣಗಳು ಕೂಡ ಇರುವುದು ಬೆಳಕಿಗೆ ಬಂದಿದೆ. ರಕ್ತದ ಒತ್ತಡ ನಿರ್ವಹಣೆಯಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಇದು ಅತ್ಯುತ್ತಮವಾಗಿ ನಿರ್ವಹಿಸ ಬಲ್ಲದು. ಹೊಟ್ಟೆ ಹುಣ್ಣು, ಚರ್ಮದ ಸಮಸ್ಯೆಗಳು, ತಲೆಕೂದಲಿನ ತೊಂದರೆಗಳು ಇವುಗಳಿಗೆಲ್ಲ ಏಲಕ್ಕಿ ಸಾರ ಅದ್ಭುತವಾಗಿ ಕೆಲಸ ಮಾಡುತ್ತದೆ.
  • ಬೆಲ್ಲ : ಬೆಲ್ಲ ನಿಮಗೆಲ್ಲ ಗೊತ್ತಿರುವ ಹಾಗೆ ಒಂದು ಉಷ್ಣ ಆಹಾರ ಪದಾರ್ಥ. ಇದು ನಮ್ಮ ದೇಹದ ತಾಪ ಮಾನ ವನ್ನು ಚಳಿಗಾಲದಲ್ಲಿ ಅತ್ಯುತ್ತಮ ರೀತಿಯಲ್ಲಿ ನಿರ್ವಹಣೆ ಮಾಡಬಲ್ಲದು. ಮೆಟಬಾಲಿಸಂ ಪ್ರಕ್ರಿಯೆ ಚುರುಕಾಗುವಂತೆ ನೋಡಿಕೊಂಡು ನಮ್ಮ ದೇಹದ ರಕ್ತನಾಳಗಳನ್ನು ಹಿಗ್ಗಿಸಿ ರಕ್ತ ಸಂಚಾರ ಚೆನ್ನಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ. ಬೆಲ್ಲ ಹೃದಯದ ಆರೋಗ್ಯಕ್ಕೆ ಕೂಡ ಒಳ್ಳೆಯದು ಎಂದು ವೈದ್ಯರು ಹೇಳುತ್ತಾರೆ. ಅಷ್ಟೇ ಅಲ್ಲದೆ ಚಳಿಗಾಲದಲ್ಲಿ ಕಂಡು ಬರುವ ಕೀಲು ನೋವು ಕಡಿಮೆ ಆಗಲು ಬೆಲ್ಲವನ್ನು ಸೇವಿಸುವುದು ಉತ್ತಮ.
  • ಕೊಬ್ಬರಿ ತುರಿ : ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ. ಹಾಗಾಗಿ ಇದು ಹೃದಯಕ್ಕೂ ಕೂಡ ಒಳ್ಳೆಯದು. ದೇಹದ ತೂಕ ನಿಯಂತ್ರಣ ದಲ್ಲಿ ಮತ್ತು ಚಳಿಗಾಲದಲ್ಲಿ ಒಳ್ಳೆಯ ಜೀರ್ಣಶಕ್ತಿಯನ್ನು ಕೊಡುವಲ್ಲಿ ಕೊಬ್ಬರಿ ಪಾತ್ರ ನಿರ್ಣಾಯಕವಾಗಿದೆ.
    ಕೊಬ್ಬರಿಯಲ್ಲಿ ನಮ್ಮ ದೇಹಕ್ಕೆ ಅಗತ್ಯ ಎನಿಸುವ ನಾರಿನ ಪ್ರಮಾಣ, ಸೆಲೆನಿಯಂ, ಕಾಪರ್, ಮ್ಯಾಂಗನೀಸ್ ಇತ್ಯಾದಿಗಳು ಸಿಗಲಿದ್ದು ನಮ್ಮ ರೋಗ ನಿರೋಧಕ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವುದರ ಜೊತೆಗೆ ಥೈರಾಯ್ಡ್ ತೊಂದರೆಗಳನ್ನು ಕಂಟ್ರೋಲ್ ಮಾಡುತ್ತದೆ. ಈ ರೀತಿಯಾಗಿ ಬಾಳೆಹಣ್ಣಿನ ಉತ್ತಮ ರಸಾಯನ ಸಿದ್ದಪಡಿಸಿ ಸೇವಿಸುವುದರಿಂದ ಹಲವಾರು ಪ್ರಯೋಜನವನ್ನು ಚಳಿಗಾಲದಲ್ಲಿ ಪಡೆದುಕೊಳ್ಳಬಹುದಾಗಿದೆ.
Leave A Reply

Your email address will not be published.