ಮಗು ಗಲಾಟೆ ಮಾಡಿತೆಂದು ಕ್ರೂರವಾಗಿ ಕೊಂದ ತಂದೆ | ಪಾಪಿ ಅಪ್ಪನ ಹೊಡೆತಕ್ಕೆ ಎರಡು ವರ್ಷದ ಕಂದ ಸಾವು!!!

ಕೋಪದಲ್ಲಿ ಕೊಯ್ದ ಮೂಗು ಮತ್ತೆ ಜೋಡಿಸಲು ಆಗದು. ಅಂತೆಯೇ ಕೋಪದ ಆವೇಶದಲ್ಲಿ ಮಾಡುವ ಗಂಡಾಂತರಕ್ಕೆ ಕೆಲವೊಮ್ಮೆ ದೊಡ್ದ ಬೆಲೆ ತೆರಬೇಕಾಗುತ್ತದೆ. ಕೋಪದ ಭರದಲ್ಲಿ ಕೈಗೆ ಕೆಲಸ ಕೊಟ್ಟು ಬುದ್ದಿ ಸ್ವಾಧೀನದಲ್ಲಿ ಇರದಿದ್ದರೆ ಆಗುವ ಪರಿಣಾಮ ಅಷ್ಟಿಷ್ಟಲ್ಲ. ಇದಕ್ಕೆ ದೃಷ್ಟಾಂತ ಎಂಬಂತೆ ಘಟನೆಯೊಂದು ವರದಿಯಾಗಿದೆ.

ಹೌದು!!.ಗಲಾಟೆ ಮಾಡಿದ ಕಾರಣಕ್ಕೆ ತಂದೆಯೊಬ್ಬರು ತನ್ನ ಎರಡು ವರ್ಷದ ಮಗುವಿಗೆ ಮನಸೋ ಇಚ್ಛೆ ಥಳಿಸಿದ ಪರಿಣಾಮವಾಗಿ ಮಗು ಸಾವಿನ ದವಡೆಗೆ ಸಿಲುಕಿದ ಘಟನೆ ನಡೆದಿದೆ.

ಜಗತ್ತಿನ ಪರಿವೇ ಇಲ್ಲದೇ ಆಟ ಆಡುತ್ತಾ ಎಲ್ಲರ ನಗಿಸುವ ಪುಟ್ಟ ಕಂದಮ್ಮ ಗಲಾಟೆ, ತುಂಟಾಟ ಮಾಡುವುದು ಸಹಜ. ಸಾಮಾನ್ಯವಾಗಿ ಮಗುವಿನ ಆಟ ನೋಡುತ್ತಾ ಸಂಭ್ರಮಿಸುವವರೆ ಹೆಚ್ಚು. ಆದರೆ, ಇಲ್ಲೊಬ್ಬರು ಮಗು ಗಲಾಟೆ ಮಾಡಿದ್ದಕ್ಕಾಗಿ ಥಳಿಸಿದ ಘಟನೆ ನಡೆದಿದೆ.

ಹೈದರಾಬಾದ್ ನ ತೆಲಂಗಾಣದಲ್ಲಿ ತಂದೆ ತನ್ನ ಎರಡು ವರ್ಷದ ಮಗುವಿಗೆ ಮನಬಂದಂತೆ ಥಳಿಸಿ ಕೊಂದಿರುವ ಅಮಾನವೀಯ ಘಟನೆ ನರೇಡ್ ಮೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕುಂಕುಟೊಳ್ಳ ಸುಧಾಕರ್ ಹಾಗೂ ವಾರಂಗಲ್‌ನ ದಿವ್ಯಾ ದಂಪತಿಯ ಪುತ್ರ ಜೀವನ್ ಎರಡು ವರ್ಷದ ಮಗುವಾಗಿದ್ದು, ತಂದೆಯ ಕೋಪಕ್ಕೆ ತುತ್ತಾಗಿ ಮೃತಪಟ್ಟಿರುವ ವಿಷಾದನೀಯ ಸಂಗತಿ ನಡೆದಿದೆ .

ಪೊಲೀಸರ ಮಾಹಿತಿಯ ಪ್ರಕಾರ, 2019 ರಲ್ಲಿ ವಿವಾಹವಾಗಿದ್ದ ಈ ದಂಪತಿ, ನರೇಡ್‌ಮೆಟ್‌ನ ವಾಜಪೇಯಿ ನಗರದಲ್ಲಿ ಪುಟ್ಟ ಮಗುವಿನೊಂದಿಗೆ ವಾಸವಿದ್ದರು ಎನ್ನಲಾಗಿದೆ. ಇಲ್ಲಿನ ಜೆ ಜೆ ನಗರದ ಎಸ್.ಎಸ್. ಬಿ ಕ್ಲಾಸಿಕ್ ಅಪಾರ್ಟ್ ಮೆಂಟ್ ನಲ್ಲಿ ಆರೋಪಿ ಕುಂಕುಟೊಳ್ಳ ಸುಧಾಕರ್ ವಾಚ್​ಮನ್ ಕೆಲಸ ಮಾಡಿಕೊಂಡಿದ್ದರೆ, ಇವರ ಪತ್ನಿ ದಿವ್ಯಾ ಮನೆಗೆಲಸ ಮಾಡಿಕೊಂಡು ಕುಟುಂಬವನ್ನು ನಿರ್ವಹಿಸುತ್ತಿದ್ದರು ಎನ್ನಲಾಗಿದೆ.

ಮಗು ಇದ್ದಕ್ಕಿದ್ದಂತೆ ಕೂಗಿದಾಗ ಅವರು ಹಿಂತಿರುಗಿದ್ದಾರೆ. ಆ ವೇಳೆ ಮಗುವಿನ ದೇಹ, ತಲೆ ಮತ್ತು ಮುಖದ ಮೇಲೆ ತೀವ್ರ ಗಾಯವಾಗಿದ್ದು, ರಕ್ತದ ಮಡುವಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿತ್ತು. ಹಾಗಾಗಿ, ತಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು,ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿರುವದನ್ನು ವೈದ್ಯರು ದೃಢಪಡಿಸಿದ್ದಾರೆ.

ಅಪಾರ್ಟ್ ಮೆಂಟ್ ಕೆಲಸಕ್ಕೆ ಹೋದ ವೇಳೆ ಪತಿ ಸುಧಾಕರ್ ಮಗನನ್ನು ಹೊಡೆದು ಕೊಂದಿದ್ದಾನೆ ಎಂದು ಪತ್ನಿ ದಿವ್ಯಾ ಪತಿ ವಿರುದ್ಧ ದೂರು ದಾಖಲಿಸಿದ್ದಾರೆ. ಹಾಗಾಗಿ, ದೂರಿನನ್ವಯ ಪೊಲೀಸರು ಸುಧಾಕರನನ್ನು ಬಂಧಿಸಿದ್ದಾರೆ.

Leave A Reply

Your email address will not be published.