IRCTC : ರೈಲು ಪ್ರಯಾಣಿಕರಿಗೆ ‘ ಉಚಿತ ಆಹಾರ’ ಸೌಲಭ್ಯ | ಭಾರತೀಯ ರೈಲ್ವೆಯಿಂದ ಹೊಸ ಸೇವೆ ಆರಂಭ!!!

ದೀಪಾವಳಿ ಹಬ್ಬದ ಸಮಯದಲ್ಲಿ ದೂರದೂರುಗಳಿಂದ ಹುಟ್ಟೂರಿನತ್ತ ಪ್ರಯಾಣಿಸಲು ಸಜ್ಜಾಗುತ್ತಿರುವ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ವಿಶೇಷ ರೈಲ್ವೆ ವ್ಯವಸ್ಥೆ ಕಲ್ಪಿಸಿದೆ.

ಹಬ್ಬ ಹರಿದಿನಗಳ ಸಂದರ್ಭದಲ್ಲಿ ಹೆಚ್ಚಿನ ಪ್ರಯಾಣಿಕರು ತೆರಳುವುದರಿಂದ ಜನ ದಟ್ಟಣೆ ನಿಯಂತ್ರಿಸಲು ಪ್ರಯಾಣಕ್ಕೆ ಬೇಕಾದ ವ್ಯವಸ್ಥೆಯನ್ನು ರೈಲ್ವೆ ಇಲಾಖೆ ಮಾಡಿದೆ.

ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಅನೇಕ ಹೊಸ ಸೌಲಭ್ಯ ಕಲ್ಪಿಸಿದ್ದು, ರೈಲು ಪ್ರಯಾಣಿಕರಿಗೆ ಉಚಿತ ಆಹಾರ ನೀಡಲಿದ್ದು ಈ ಸೌಲಭ್ಯವು ಕೆಲವು ವಿಶೇಷ ರೈಲುಗಳ ಪ್ರಯಾಣಿಕರಿಗೆ ಮಾತ್ರ ಅನ್ವಯಿಸುತ್ತದೆ.

ರೈಲ್ವೇ ಇಲಾಖೆಯು ಈ ಹಬ್ಬದ ಸೀಸನ್’ನಲ್ಲಿ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದ್ದು, ಭಾರತೀಯ ರೈಲ್ವೇ ತನ್ನ ಪ್ರಯಾಣಿಕರಿಗೆ ಉಚಿತ ಆಹಾರ ಸೌಲಭ್ಯವನ್ನು ತಂದಿದೆ.

ಈ ಹಬ್ಬದ ಋತುವಿನಲ್ಲಿ ಭಾರತೀಯ ರೈಲ್ವೆ ಹಲವಾರು ವಿಶೇಷ ರೈಲುಗಳನ್ನ ಓಡಿಸುತ್ತಿದ್ದು, ದೀಪಾವಳಿ ಮತ್ತು ಛಾತ್‌ನಂತಹ ಹಬ್ಬಗಳ ಸಮಯದಲ್ಲಿ, ಭಾರತೀಯ ರೈಲ್ವೇಯು ಪ್ರಯಾಣಿಕರ ಅನುಕೂಲಕ್ಕಾಗಿ ಅನೇಕ ವಿಶೇಷ ರೈಲುಗಳನ್ನ ಪ್ರಾರಂಭಿಸಿರುವುದು ತಿಳಿದಿರಬಹುದು.

ಇದೇ ವೇಳೆ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಉಚಿತ ಆಹಾರದ ಸೌಲಭ್ಯವನ್ನೂ ರೈಲ್ವೇ ನೀಡುತ್ತಿದೆ.

ಭಾರತೀಯ ರೈಲ್ವೆ ಪ್ರತಿ ರೈಲಿನಲ್ಲಿ ಪ್ರಯಾಣಿಕರಿಗೆ ಈ ಸೌಲಭ್ಯವನ್ನ ಒದಗಿಸುವುದಿಲ್ಲ. ಇದು ಕೇವಲ ದುರಂತೋ ಎಕ್ಸ್‌ಪ್ರೆಸ್, ರಾಜಧಾನಿ ಮತ್ತು ಶತಾಬ್ದಿಯಂತಹ ಐಷಾರಾಮಿ ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಮಾತ್ರ ಈ ಸೌಲಭ್ಯವನ್ನು ಒದಗಿಸಲಾಗಿದೆ.

ರೈಲಿನ ಆಗಮನ ಅಥವಾ ನಿರ್ಗಮನದಲ್ಲಿ ಉಚಿತ ಆಹಾರ ಪ್ರಯೋಜನ ಲಭ್ಯವಿರುವುದಿಲ್ಲ. ಆದರೆ ರೈಲು 2 ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕಾಲ ತಡವಾಗಿ ಚಲಿಸಿದಾಗ ಮಾತ್ರ ಈ ಸೌಲಭ್ಯ ದೊರೆತು ಪ್ರಯಾಣಿಕರು ಉಚಿತ ಆಹಾರ ಪಡೆಯಬಹುದು. ಇದರ ಹೊರತಾಗಿ ಆಹಾರದೊಂದಿಗೆ ಇತರ ಪಾನೀಯಗಳನ್ನ ಸಹ ಪಡೆಯಬಹುದಾಗಿದೆ.

ಇದರ ಜೊತೆಗೆ ರೈಲು ಎರಡು ಗಂಟೆ ಅಥವಾ ಅದಕ್ಕಿಂತ ಹೆಚ್ಚು ವಿಳಂಬವಾದರೆ ಮಾತ್ರ ಈ ಸೌಲಭ್ಯ ದೊರೆಯುತ್ತದೆ.

ಭಾರತೀಯ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (IRCTC) ತನ್ನ ಆಹಾರ ಸೇವಾ ಮೂಲಸೌಕರ್ಯವನ್ನು ಹೊಸ ಅಡಿಗೆಮನೆಗಳನ್ನು ನಿರ್ಮಿಸುವ ಮೂಲಕ ಮತ್ತು ಪ್ರಯಾಣಿಕರ ಸೌಕರ್ಯ ಮತ್ತು ಗುಣಮಟ್ಟಕ್ಕಾಗಿ ಹಳೆಯದನ್ನು ನವೀಕರಿಸುವ ಮೂಲಕ ವಿಸ್ತರಿಸುತ್ತಿದೆ.

IRCTC ತನ್ನ ಗ್ರಾಹಕರಿಗೆ ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡಲು WhatsApp ಸೌಲಭ್ಯವನ್ನು ಸಹ ಒದಗಿಸುತ್ತದೆ.

IRCTC ಅಪ್ಲಿಕೇಶನ್‌ನ ಸಹಾಯದಿಂದ ಪ್ರಯಾಣಿಕರು ಈಗ ರೈಲಿನಲ್ಲಿ ಆಹಾರವನ್ನು ಆರ್ಡರ್ ಮಾಡಬಹುದು. ಇದಕ್ಕಾಗಿ ಪ್ರಯಾಣಿಕರಿಗೆ ಅವರ ಪಿಎನ್‌ಆರ್ ಸಂಖ್ಯೆ ಅಗತ್ಯವಾಗಿದೆ.

ಭಾರತೀಯ ರೈಲ್ವೇ ದೀಪಾವಳಿ ಮತ್ತು ಛತ್‌ಗಾಗಿ ಅನೇಕ ವಿಶೇಷ ರೈಲುಗಳನ್ನು ನಡೆಸುತ್ತಿದ್ದು ದೆಹಲಿಯಿಂದ ಬಿಹಾರ, ಯುಪಿ ನಗರಗಳು ಮತ್ತು ಇತರ ಕೆಲವು ಸ್ಥಳಗಳಿಗೆ ಚಲಿಸುತ್ತದೆ.

ಹಬ್ಬ ಹರಿದಿನಗಳಿಗೆ ಊರಿಗೆ ಹೋಗಲು ದೃಢೀಕೃತ ಟಿಕೆಟ್ ಸಿಗದೇ ಇದ್ದರೆ ಈ ರೈಲುಗಳಲ್ಲಿ ಬುಕ್ಕಿಂಗ್ ಮಾಡಿ ಲಾಭ ಪಡೆಯಬಹುದಾಗಿದೆ.

Leave A Reply

Your email address will not be published.