PM Kisan : ರೈತರೇ ನಿಮಗೊಂದು ಮುಖ್ಯವಾದ ಮಾಹಿತಿ | ಕಿಸಾನ್ ಸಮ್ಮಾನ್ ಯೋಜನೆಯ ಕುರಿತು ಮಹತ್ವದ ಮಾಹಿತಿ ಇಲ್ಲಿದೆ

ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರ ಆದಾಯ ಹೆಚ್ಚಿಸಲು ಆರ್ಥಿಕ ನೆರವು ನೀಡಲಾಗುತ್ತದೆ. ಇಲ್ಲಿಯವರೆಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 11 ಕಂತುಗಳ ಹಣವನ್ನು ಸರ್ಕಾರದಿಂದ ಕೋಟ್ಯಂತರ ರೈತರಿಗೆ ವರ್ಗಾವಣೆ ಮಾಡಲಾಗಿದೆ‌. ಬಾಕಿಯಿರುವ 12ನೇ ಕಂತಿನ ಹಣವನ್ನೂ ಸರ್ಕಾರ ಶೀಘ್ರದಲ್ಲೇ ವರ್ಗಾವಣೆ ಮಾಡಲಿದೆ.

ರೈತರಿಗೆ 12ನೇ ಕಂತಿನ ಹಣ ನೀಡುವ ಮುನ್ನ ಸರ್ಕಾರ ಯೋಜನೆಯಲ್ಲಿ ದೊಡ್ಡ ಬದಲಾವಣೆ ಮಾಡಿದೆ. ಇದರಿಂದ ಕೋಟ್ಯಂತರ ಫಲಾನುಭವಿಗಳಿಗೆ ತೊಂದರೆಯಾಗಲಿದೆ. ಹೌದು, ಇನ್ನು ಮುಂದೆ, ಫಲಾನುಭವಿ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ಆಧಾರ್ ಸಂಖ್ಯೆಯ ಮೂಲಕ ನಿಮ್ಮ ಕಂತುಗಳ ಸ್ಥಿತಿಯನ್ನು ಪರಿಶೀಲಿಸಲು ನಿಮಗೆ ಸಾಧ್ಯವಾಗುವುದಿಲ್ಲ ಎಂದು ಹೇಳಲಾಗಿದೆ.

ಇನ್ನು ಮುಂದೆ ನಿಮ್ಮ ಕಂತಿನ ಸ್ಥಿತಿಯನ್ನು ಪರಿಶೀಲಿಸಲು ಇನ್ನು ಮುಂದೆ ನೀವು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು ಎಂದು ಸರ್ಕಾರ ತಿಳಿಸಿದೆ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಲ್ಲಿ, ಮೊಬೈಲ್ ಅಥವಾ ಆಧಾರ್ ಸಂಖ್ಯೆಯಿಂದ ಸ್ಥಿತಿಯನ್ನು ಮೊದಲೇ ತಿಳಿದುಕೊಳ್ಳಬಹುದು. ಆದರೆ, ಇದಾದ ಬಳಿಕ ನಿಯಮಗಳನ್ನು ಬದಲಿಸಿ ಆಧಾರ್ ಮೂಲಕವೇ ಸ್ಟೇಟಸ್ ಪರಿಶೀಲಿಸಲು ವಿನಾಯಿತಿ ನೀಡಲಾಗಿತ್ತು. ಆದರೆ, ಈಗ ಹೊಸ ನಿಯಮದಲ್ಲಿ, ರೈತರು ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಮಾತ್ರ
ಸ್ಥಿತಿಯನ್ನು ಪರಿಶೀಲನೆ ಸಾಧ್ಯ.

ಆಗಸ್ಟ್ ನಿಂದ ನವೆಂಬರ್ ನಡುವೆ 12 ನೇ ಕಂತು ಬರುತ್ತದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಆಗಸ್ಟ್ ತಿಂಗಳ ಆರಂಭದಲ್ಲಿಯೇ ರೂ. 2000 ಬಂದಿತ್ತು. ಆದರೆ ಈ ಬಾರಿ ಇ-ಕೆವೈಸಿ ಮತ್ತು ಪರಿಶೀಲನೆಯಿಂದಾಗಿ ಕಂತು ವಿಳಂಬವಾಗುತ್ತಿದೆ. ಯೋಜನೆಯಲ್ಲಿ ಯಾವುದೇ ರೀತಿಯ ವಂಚನೆ ತಡೆಗಟ್ಟಲು ಸರ್ಕಾರ ಇ-ಕೆವೈಸಿ ಕಡ್ಡಾಯಗೊಳಿಸಿದೆ.

ನಿಮ್ಮ ಖಾತೆಯನ್ನು ಪರಿಶೀಲನೆ ಮಾಡಲು ಈ ರೀತಿ ಮಾಡಿ;

ಮೊದಲು ನೀವು pmkisan.gov.in ವೆಬ್ ಸೈಟ್ ಗೆ ಹೋಗಬೇಕು.
ನಂತರ ಮುಖಪುಟದಲ್ಲಿ ಫಲಾನುಭವಿ ಸ್ಥಿತಿಯ ಮೇಲೆ ಕ್ಲಿಕ್ ಮಾಡಿ.
ಈಗ ಒಂದು ಪುಟ ಓಪನ್ ಆಗುತ್ತದೆ
ನಿಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸುವ ಮೂಲಕ ಸ್ಥಿತಿಯನ್ನು ಪರಿಶೀಲಿಸಿ.
ನೋಂದಣಿ ಸಂಖ್ಯೆ ನಿಮಗೆ ತಿಳಿದಿಲ್ಲದಿದ್ದರೆ, ನಿಮ್ಮ ನೋಂದಣಿ ಸಂಖ್ಯೆಯನ್ನು ತಿಳಿಯಿರಿ ಕ್ಲಿಕ್ ಮಾಡಿ.
ಇದರಲ್ಲಿ, PM ಯೋಜನೆಯಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು ಮೊಬೈಲ್
OTP ಗೆ ಕ್ಲಿಕ್ ಮಾಡಿ.
ಮೊಬೈಲ್‌ನಲ್ಲಿ ಸ್ವೀಕರಿಸಿದ OTP ಅನ್ನು ನಮೂದಿಸಿ ಮತ್ತು ವಿವರಗಳನ್ನು ಪಡೆಯಿರಿ ಕ್ಲಿಕ್ ಮಾಡಿ.
ಈಗ ನಿಮ್ಮ ನೋಂದಣಿ ಸಂಖ್ಯೆ ಮತ್ತು ಹೆಸರು ಪರದೆಯ ಮೇಲೆ ಕಾಣಿಸುತ್ತದೆ.

Leave A Reply

Your email address will not be published.