ದಿನಗೂಲಿ, ಹೊರಗುತ್ತಿಗೆ ನೌಕರರಿಗೆ ಸಿಹಿ ಸುದ್ದಿ ; ಸರಕಾರದಿಂದ ಬಾಕಿ ವೇತನ ಬಿಡುಗಡೆ ಆದೇಶ
![](https://hosakannada.com/wp-content/uploads/2022/08/Bengalurus-Vidhana-Soudha-could-be-worth-over-Rs-3900-crores-FB-1200x700-compressed.jpg)
ರಾಜ್ಯದ ವಿವಿಧ ತಾಲೂಕು ಪಂಚಾಯ್ತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಂತ ದಿನಗೂಲಿ ನೌಕರರು, ಹೊರಗುತ್ತಿಗೆ ನೌಕರರ ಬಾಕಿ ವೇತನ, ವೈದ್ಯಕೀಯ ಮರುಪಾವತಿ ಸೇರಿದಂತೆ ವಿವಿಧ ಭತ್ಯೆ ಬಿಡುಗಡೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
![](https://hosakannada.com/wp-content/uploads/2024/07/First.jpeg)
ಇದರಲ್ಲದೇ ಕೋವಿಡ್-19 ನಿಯಂತ್ರಣ ಕರ್ತವ್ಯದಲ್ಲಿ ಮರಣಹೊಂದಿದ ಸಿಬ್ಬಂದಿ ಅವಲಂಬಿತರಿಗೆ ಪರಿಹಾರ ನೀಡುವುದಕ್ಕಾಗಿ ಅಗತ್ಯವಿರುವ ಒಟ್ಟು ರೂ.656.28 ಲಕ್ಷ ಬಿಡುಗಡೆ ಮಾಡಿ ಆದೇಶಿಸಲಾಗಿದೆ.
![](https://hosakannada.com/wp-content/uploads/2024/07/Middle.jpeg)
ಈ ಕುರಿತಂತೆ ಆರ್ಥಿಕ ಇಲಾಖೆಯ ಸರ್ಕಾರದ ಜಂಟಿ ಕಾರ್ಯದರ್ಶಿ ನಡವಳಿ ಹೊರಡಿಸಿದ್ದು, ತಾಲೂಕು ಪಂಚಾಯ್ತಿಗಳಲ್ಲಿ ವಿವಿಧ ಕಾರ್ಯಕ್ರಮದಡಿ ಅಧಿಕಾರಿ, ಸಿಬ್ಬಂದಿಯವರ ಬಾಕಿ, ಪ್ರಸಕ್ತ ವೇತನ, ದಿನಗೂಲಿ ನೌಕರರ ವೇತನ, ಹೊರಗುತ್ತಿಗೆ ನೌಕರರ ಸಂಭಾವನೆ, ವೈದ್ಯಕೀಯ ವೆಚ್ಚ ಮರುಪಾವತಿಗೆ ಅನುದಾನ ಬಿಡುಗಡೆ ಮಾಡಲಾಗಿದೆ ಎಂದಿದ್ದಾರೆ.
![](https://hosakannada.com/wp-content/uploads/2022/09/IMG_20220912_185200.jpg)
![](https://hosakannada.com/wp-content/uploads/2022/09/IMG_20220912_185208.jpg)
![](https://hosakannada.com/wp-content/uploads/2022/09/IMG_20220912_185324.jpg)
![](https://hosakannada.com/wp-content/uploads/2022/09/IMG_20220912_185225.jpg)
![](https://hosakannada.com/wp-content/uploads/2022/09/IMG_20220912_185234.jpg)
![](https://hosakannada.com/wp-content/uploads/2022/09/Screenshot_2022-09-12-18-53-15-65-461x1024.jpg)