ಕಾವು ಬುಶ್ರಾ ವಿದ್ಯಾಸಂಸ್ಥೆಯ ಶಿಕ್ಷಕ-ರಕ್ಷಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ;ನೂತನ ಅಧ್ಯಕ್ಷ ರಾಗಿ ಪಿ ಎ ಅಬ್ದುಲ್ ಖಾದರ್ ಹಿರಾ ಆಯ್ಕೆ

ಕಾವು ಬುಶ್ರಾ ವಿದ್ಯಾಸಂಸ್ಥೆಯ ಶಿಕ್ಷಕ-ರಕ್ಷಕ ಸಂಘದ ಕಾರ್ಯಾಕಾರಿ ಸಮಿತಿ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಇತ್ತೀಚೆಗೆ ನಡೆಯಿತು.ಸಭೆಯಲ್ಲಿ ಹಲವಾರು ವಿಷಯಗಳ ಕುರಿತು ಸಮಾಲೋಚನಾ ಸಭೆ ನಡೆದು ,ಆ ಬಳಿಕ ಪ್ರಸಕ್ತ ಶೈಕ್ಷಣಿಕ 2022-23 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.ನೂತನ ಅಧಕ್ಷರಾಗಿ ಪಿ ಎ ಅಬ್ದುಲ್ ಖಾದರ್ ಹಿರಾ , ಕಾರ್ಯದರ್ಶಿಯಾಗಿ ಶಾಲಾ ಮುಖ್ಯೋಪಾಧ್ಯಯರಾದ ಅಮರನಾಥ ಬಿ ಪಿ , ಉಪಾಧ್ಯಕ್ಷ ರಾಗಿ ರವಿಪ್ರಸಾದ್ ಹಾಗೂ ಸಾಲಿಹ ಬಿ ಕೆ , ಜೊತೆ ಕಾರ್ಯ ದರ್ಶಿಯಾಗಿ ಪ್ರಮೀಳಾ ,ಕೋಶಾಧಿಕಾರಿಯಾಗಿ ಮೊಯ್ದಿನ್ ಕೌಡಿಚ್ಚಾರ್ , ಶಿಕ್ಷಕ ಪ್ರತಿನಿಧಿಯಾಗಿ ದೀಪಿಕಾ ಚಾಕೋಟೆ ಇವರನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷ ರಾದ ಹಿರಾ ಪಿ ಎ ಅಬ್ದುಲ್ ಖಾದರ್ ಮಾತನಾಡಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿ , ಶಾಲಾ ಶಿಕ್ಷಕ ವೃಂದಕ್ಕೆ ಸಮವಸ್ತ್ರ ವನ್ನು ಕೊಡುಗೆಯಾಗಿ ನೀಡಲಾಗುವುದು ಎಂದು ಘೋಷಿಸಿದರು.

ಉಪಾಧ್ಯಕ್ಷ ರವಿಪ್ರಸಾದ್

ಸಂಘಕ್ಕೆ ಪೋಷಕ ಪ್ರತಿನಿಧಿಗಳ ಆಯ್ಕೆ : ಶಿಕ್ಷಕ – ರಕ್ಷಕ ಸಂಘದ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಪೋಷಕ ಪ್ರತಿನಿಧಿಗಳಾಗಿ , ಜಾಫರ್ ಎಂ ಕೆ , ಯು ಕೆ ಇಬ್ರಾಹೀಂ , ಎಂ ಲತೀಫ್ , ಮೊಹಮ್ಮದ್ ಎಂ , ಮಾಹಿನ್ , ಎಸ್ ಕೆ ಹಸೈನಾರ್ , ಶಾಂತಪ್ಪ ಗೌಡ , ಲಿಂಗಪ್ಪ ಎನ್ , ಧನುಶ್ ಗೌಡ , ಹರೀಶ್ ಗೌಡ , ದಿವ್ಯಾ , ಆಯಿಷತುಲ್ ಆಬಿದ , ಫಾತಿಮತ್ ಝೌರ , ತಾಹಿರ ಎ , ಪುಷ್ಪಾ ಬಿ , ನಯನ , ಶಾರದ , ಕೃತಿಕ , ಮೀನಾಕ್ಷಿ , ಕವಿತಾ ಕೆ , ಬಾಲಚಂದ್ರ ಬಾಲ್ಕಾಡಿ , ರವಿರಾಜ ಬೋರ್ಕರ್ , ದಾಮೋದರ ಮಣಿಯಾನಿ , ಪ್ರಶಾಂತ್ ಎನ್ ಆರ್ , ಅಬ್ದುಲ್ ಬಶೀರ್ ಬುಡಿಯಾರ್ , ಖಲಂದರ್ ಶಾಫಿ ಇವರುಗಳನ್ನು ಆಯ್ಕೆ ಮಾಡಲಾಯಿತು.

ಜೊತೆ ಕಾರ್ಯದರ್ಶಿ ಪ್ರಮೀಳಾ
Leave A Reply

Your email address will not be published.