ಪತಿ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದು ಹೆಂಡತಿಯೂ ಆತ್ಮಹತ್ಯೆ ; ಅನಾಥವಾದ ಮಗು

ಪತಿ ಆತ್ಮಹತ್ಯೆ ಮಾಡಿದ ವಿಷಯ ತಿಳಿದು, ಹೆಂಡತಿಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ತಿರುವನಂತಪುರಂನ ನೆಡುಮಂಗಾಡ್ ಎಂಬಲ್ಲಿ ನಡೆದಿದೆ.

ಮೃತರನ್ನು ರಾಜೇಶ್ (38) ಮತ್ತು ಅಪರ್ಣಾ (26) ಎಂದು ಗುರುತಿಸಲಾಗಿದೆ.

ರಾಜೇಶ್ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಪತಿಯ ಸಾವಿನ ವಿಷಯ ತಿಳಿಯುತ್ತಿದ್ದಂತೆ ಅವರ ಪತ್ನಿ ಅಪರ್ಣಾ ಆ್ಯಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಳೆದ ಒಂದು ವಾರದಿಂದ ಸಣ್ಣಪುಟ್ಟ ಜಗಳಗಳಿಂದಾಗಿ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ರಾಜೇಶ್ ನಿನ್ನೆ ಸಂಜೆ ಅಪರ್ಣಾ ಅವರ ಮನೆಗೆ ಬಂದು ಹೆಂಡತಿ ಮತ್ತು ಮಗಳನ್ನು ಮನೆಗೆ ಕರೆದಿದ್ದಾನೆ.ಈ ಸಂದರ್ಭದಲ್ಲಿ ಅಪರ್ಣಾ ತನ್ನ ಗಂಡನೊಂದಿಗೆ ಹೋಗಿರಲಿಲ್ಲ. ಇದರಿಂದ ಬೇಸತ್ತ ರಾಜೇಶ್ ತನ್ನ ಮನೆಗೆ ಬಂದು ರಾತ್ರಿ ತನ್ನ ಕೋಣೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕುಡಿದಳು. ಸ್ಥಳೀಯರು ತಕ್ಷಣ ಅವರನ್ನು ಜಿಲ್ಲಾ ಆಸ್ಪತ್ರೆಗೆ ಮತ್ತು ಅಲ್ಲಿಂದ ತಿರುವನಂತಪುರಂ ವೈದ್ಯಕೀಯ ಕಾ
ಇಂದು ಬೆಳಿಗ್ಗೆ 10.30 ಕ್ಕೆ ರಾಜೇಶ್ ಅವರ ಸಾವಿನ ಬಗ್ಗೆ ಅಪರ್ಣಾಗೆ ತಿಳಿಯಿತು. ಕೂಡಲೇ ಅಪರ್ಣಾ ಆಸಿಡ್ ತೆಗೆದುಕೊಂಡಿದ್ದಾಳೆ.

ತಕ್ಷಣ ಸ್ಥಳೀಯರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಪರ್ಣಾ ಮಧ್ಯಾಹ್ನ 1 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾಳೆ.

ಅಪರ್ಣಾ ಮತ್ತು ರಾಜೇಶ್ ಅವರ ಮನೆಗಳ ನಡುವೆ ಕೇವಲ 100 ಮೀಟರ್ ಅಂತರವಿದ್ದು, ಇದೀಗ ಪುಟ್ಟ ಮಗು ಅನಾಥವಾಗಿದೆ. ಇದೀಗ ಇಬ್ಬರ ದೇಹಗಳನ್ನು ಶವಾಗಾರದಲ್ಲಿ ಇಡಲಾಗಿದೆ.

Leave A Reply

Your email address will not be published.