ನಿರಂತರವಾಗಿ ಸುರಿದ ಮಳೆಯಿಂದ ಗೋಡೆ ಕುಸಿತ.

ಜಗಳೂರು, ಅ:7- ಜಗಳೂರು ತಾಲೂಕು ಗುತ್ತಿದುರ್ಗ ಗ್ರಾಮದಲ್ಲಿ ನಿರಂತರವಾಗಿ ಸುರಿಯುತ್ತಲೇ ಇರುವ ಮಳೆಯಿಂದಾಗಿ ಭಾರೀ ಅವಾಂತರ ಸೃಷ್ಟಿಯಾಗಿದೆ.


ಗ್ರಾಮದ ಗೌಡ್ರು ನಾಗರಾಜಪ್ಪನವರ ಮನೆಯ ಗೋಡೆಯು ಕುಸಿದಿದೆ.
ಇಂದು ಸಂಜೆ 4.30 ರ ವೇಳೆಗೆ ಗೋಡೆ ಕಲ್ಲುಗಳು ಬಿಳುವ ಶಬ್ದ ಕೇಳಿ ಮನೆಯೊಳಗೆ ಇದ್ದ ಮನೆಯವರು ಹೊರಗೆ ಓಡಿಬಂದಿದ್ದಾರೆ.

ನೋಡು ನೋಡುತ್ತಿದ್ದಂತೆ ಸಂಪೂರ್ಣವಾಗಿ ಗೋಡೆಸಿದಿದ್ದು, ಪ್ರಾಣಾಪಾಯದಿಂದ ಎಲ್ಲಾ ಪಾರಾಗಿದ್ದಾರೆ.

Leave A Reply

Your email address will not be published.