ರಾಮ್ ಸೇನಾ ಗೋಕಾಕ್ : ರಾಮ್ ಸೇನಾ ಘಟಕ ವಿವಿಧ ರಾಜ್ಯದಲ್ಲಿ ಹಾಗೂ ನಮ್ಮ ಭಾರತ ದೇಶದಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳು

ರಾಮ್ ಸೇನಾ ಗೋಕಾಕ್ ರಾಮ್ ಸೇನಾ ಘಟಕದ ಕಾರ್ಯಕ್ರಮಗಳನ್ನು ವಿವಿಧ ರಾಜ್ಯದಲ್ಲಿ ಹಾಗೂ ನಮ್ಮ ಭಾರತ ದೇಶದಲ್ಲಿ ಹಮ್ಮಿಕೊಂಡಿದ್ದು, ಅದರ ಸಂಪೂರ್ಣ ವಿವರಣೆ ಈ ಕೆಳಗಿನಂತಿದೆ.

1.ರಾಜಸ್ಥಾನದ ಉದಯಪುರದಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು ಅಮಾಯಕ ಹಿಂದೂ ಕನ್ಹಯ್ಯಲಾಲ್ ಎಂಬಾ ಟೈಲರ್ ನನ್ನು ಭಯೋತ್ಪಾದಕರು ಶಿರಚ್ಚೇದ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಆ ವಿಡಿಯೋವನ್ನು ಪ್ರಸಾರ ಮಾಡಿದ ಜಿಹಾದಿ ಮತಾಂಧರರು ಈ ಹತ್ಯೆಯ ಕೃತ್ಯವನ್ನು ಖಂಡಿಸಿ, ಆರೋಪಿಗಳನ್ನು ಕೂಡಲೇ ನೇಣಿಗೇರಿಸಬೇಕಾಗಿ ಆಗ್ರಹಿಸಿದ ರಾಮ್ ಸೇನಾ ಕರ್ನಾಟಕದ ಗೋಕಾಕ ಸಂಘಟನೆ ವತಿಯಿಂದ, ಶ್ರೀ ಸಂತೋಷ್ ಅಣ್ಣಾ ಚಂದನವಲೆ ಹಾಗೂ ಶ್ರೀ ಸಂತೋಷ ಅಣ್ಣಾ ಸಾಳುಂಕೆ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಯಿತು.

  1. ಇನ್ನು ಮುಂಬರುವ ಬಕ್ರೀದ್ ಹಬ್ಬದಂದು ಗೋಹತ್ಯೆ ನಡೆಯುವ ಪ್ರಕರಣಗಳನ್ನು ನಿಲ್ಲಿಸುವಂತೆ ಮುಂಚಿತವಾಗಿಯೇ ಎಲ್ಲಾ ಮುಸಲ್ಮಾನರಿಗೂ ಗೋಹತ್ಯೆ ನಡೆಯದಂತೆ ಎಚ್ಚರಿಕೆಯನ್ನು ನೀಡಬೇಕಾಗಿ ಬಜಪೆ ಪೊಲೀಸ್ ಆಯುಕ್ತರಲ್ಲಿ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ರಾಮ್ ಸೇನಾ ಮಂಗಳೂರು ತಾಲೂಕಿನ ಅಧ್ಯಕ್ಷರಾದ ಚಂದ್ರಶೇಖರ್ ಸುಂಕದಕಟ್ಟೆ, ಉಪಾಧ್ಯಕ್ಷರು ಸುಧೀರ್ ಸುವರ್ಣ, ಪ್ರದಾನ ಕಾರ್ಯದರ್ಶಿಯಾದ ಪ್ರವೀಣ್ ಕುಪ್ಪೆಪದವು ಹಾಗೂ ಸಾಮಾಜಿಕ ಜಾಲತಾಣದ ಪ್ರಮುಖರಾದ ಸಂಪ್ರೀತ್ ಎಕ್ಕಾರ್ ಉಪಸ್ಥಿತರಿದ್ದರು.
  2. ಇದೇ ರೀತಿ ಗೋಹತ್ಯೆ ಪ್ರಕರಣ ನಡೆಯದಂತೆ ರಾಮ್ ಸೇನಾ ಘಟಕ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಕೂಡ ಮನವಿ ಮಾಡಿದ್ದು, ಅಲ್ಲಿನ ಘಟಕದ ಅಧ್ಯಕ್ಷರಾದ ಯೋಗೀಶ್ ಮೂಲ್ಯ, ಕಾರ್ಯದರ್ಶಿಯಾದ ಪ್ರಶಾಂತ್ ಹಾಗೂ ಘಟಕದ ಕಾರ್ಯಕರ್ತರು ಉಪಸ್ಥಿತರಿದ್ದರು.

ರಾಮ್ ಸೇನಾ ಕರ್ನಾಟಕ ‘ಇದರ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಕಿರಣ್ ಅಮೀನ್ ಉರ್ವ ಸ್ಟೋರ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷರಾದ ಲೋಕೇಶ್ ರಾವ್ ಅವರು ಶ್ರೀ ದತ್ತಾತ್ರೇಯ ಕ್ಷೇತ್ರ, ದತ್ತ ಪೀಠ ಇಲ್ಲಿಗೆ ಭೇಟಿ ಕೊಟ್ಟು ಅಲ್ಲಿನ ಮೂಲ ಸೌಕರ್ಯ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರು ಆದ ಸುಶೀಲ್ ಸಾಲ್ಯಾನ್ ಹಾಗೂ ಇತರ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.

ರಾಮಸೇನಾ ಗೋಕಾಕ್ ಇದು ಹಲವು ರೀತಿಯಲ್ಲಿ ಸಮಾಜದ ಕೆಡುಕುಗಳನ್ನು ಮತ್ತು ಭ್ರಷ್ಟ ರನ್ನು ಮಟ್ಟ ಹಾಕುವ ಒಂದು ಆಯುಧವಾಗಿದ್ದು, ಇವರ ಇನ್ನಷ್ಟು ಕಾರ್ಯ ವೈಖರಿಗಳು ನಮ್ಮ ಸಮಾಜವನ್ನು ಅತ್ಯುತ್ತಮ ಸ್ಥಾನಕ್ಕೆ ಕೊಂಡೊಯ್ಯಲಿದೆ.

Leave A Reply

Your email address will not be published.